ಇನ್ನು ಅಯೋಧ್ಯೆಯಂತೆಯೇ ಮಥುರಾ ಹಾಗೂ ವಾರಣಾಸಿಯಲ್ಲಿರುವ ದೇವಸ್ಥಾನಗಳನ್ನು ಮುಕ್ತ ಮಾಡಲು ಮುಂದಾಳತ್ವ ವಹಿಸುವೆವು ! – ಮಹಂತ ನರೇಂದ್ರ ಗಿರಿ ಮಹಾರಾಜ, ಅಧ್ಯಕ್ಷರು, ಅಖಿಲ ಭಾರತೀಯ ಆಖಾಡಾ ಪರಿಷತ್ತು

ಎಲ್ಲ ೧೩ ಆಖಾಡಾಗಳು ಒಟ್ಟಾಗಿ ಸಭೆ ನಡೆಸಿ ಠರಾವಿಗೆ ಒಪ್ಪಿಗೆ ನೀಡಿದರು

  • ಇದಕ್ಕಾಗಿ ಸಾಧು-ಸಂತರು ಆಂದೋಲನ ನಡೆಸುವಂತಾಗಬಾರಾದು. ಸರಕಾರವೇ ಸ್ವತಃ ಈ ದೇವಸ್ಥಾನಗಳನ್ನು ಮುಕ್ತ ಮಾಡಲು ಕೂಡಲೇ ಕೃತಿ ಮಾಡಬೇಕು, ಎಂಬುವುದು ಹಿಂದೂಗಳ ಅಪೇಕ್ಷೆಯಾಗಿದೆ !
  • ಹಿಂದೂಗಳ ದೇವಸ್ಥಾನಗಳನ್ನು ಇಸ್ಲಾಮಿ ಆಕ್ರಮಣಕಾರರು ವಶಪಡಿಸಿಕೊಂಡಿರುವ ಬಗ್ಗೆ ಪ್ರಗತಿ(ಅಧೋಗತಿ)ಪರರು, ಜಾತ್ಯತೀತವಾದಿ, ಎಡಪಂಥಿಯರು, ಕಮ್ಯುನಿಸ್ಟರು, ಹಿಂದೂದ್ವೇಷಿ ಪ್ರಸಾರ ಮಾಧ್ಯಮಗಳು ಚಕಾರ ಎತ್ತುವುದಿಲ್ಲ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

ನವದೆಹಲಿ – ಅಯೋಧ್ಯೆಯಲ್ಲಿ ರಾಮಜನ್ಮಭೂಮಿಗಾಗಿ ಹೋರಾಡಿದಂತೆ ವಾರಣಾಸಿಯ ಶ್ರೀ ಕಾಶಿವಿಶ್ವನಾಥ ದೇವಸ್ಥಾನ ಹಾಗೂ ಮಥುರಾದ ಶ್ರೀ ಕೃಷ್ಣಜನ್ಮಭೂಮಿಯನ್ನು ಮುಕ್ತ ಮಾಡಲು ನಾವು ಮುಂದಾಳತ್ವ ವಹಿಸುವೆವು, ಎಂದು ಅಖಿಲ ಭಾರತೀಯ ಆಖಾಡಾ ಪರಿಷತ್ತಿನ ಅಧ್ಯಕ್ಷ ಮಹಂತ ನರೇಂದ್ರ ಗಿರಿ ಮಹಾರಾಜ ಇವರು ಮಾಹಿತಿಯನ್ನು ನೀಡಿದರು. ಮಹಂತ ನರೇಂದ್ರ ಗಿರಿ ಮಹಾರಾಜರ ನೇತೃತ್ವದಡಿಯಲ್ಲಿ ಎಲ್ಲ ೧೩ ಆಖಾಡಾದ ಮುಖಂಡರೊಂದಿಗೆ ಪ್ರಯಾಗರಾಜನಲ್ಲಿ ನಡೆದ ಸಭೆಯಲ್ಲಿ ಈ ಠರಾವಿಗೆ ಒಪ್ಪಿಗೆ ನೀಡಲಾಯಿತು.

ಮಹಂತ ನರೇಂದ್ರ ಗಿರಿ ಮಹಾರಾಜರು ತಮ್ಮ ಮಾತನ್ನು ಮುಂದುವರೆಸುತ್ತಾ, “ಮೊಗಲಶಾಹಿ ಮುಸಲ್ಮಾನ ಆಕ್ರಮಣಕಾರರು ಹಾಗೂ ಭಯೋತ್ಪಾದಕರು ನಮ್ಮ ದೇವಸ್ಥಾನಗಳನ್ನು ಧ್ವಂಸ ಮಾಡಿ ಆ ಸ್ಥಳಗಳಲ್ಲಿ ಮಸೀದಿ ಹಾಗೂ ಗೋರಿಳನ್ನು ನಿರ್ಮಸಿದರು. ಹೇಗೆ ಸಂತರು ಅಯೋಧ್ಯೆಯ ರಾಮಜನ್ಮಭೂಮಿಯ ಮುಕ್ತಿಗಾಗಿ ಅಭಿಯಾನವನ್ನು ಹಮ್ಮಿಕೊಂಡಿದ್ದರೋ ಹಾಗೂ ಆ ಪ್ರಕರಣ ಇತ್ಯರ್ಥವಾಗುವ ತನಕ ಪಟ್ಟು ಹಿಡಿದರೋ, ಅದೇ ರೀತಿ ವಾರಣಾಸಿ ಹಾಗೂ ಮಥುರಾ ಸಂದರ್ಭದಲ್ಲೂ ಮಾಡುವಂತೆ ನಿರ್ಧರಿದ್ದೇವೆ. ವಾರಣಾಸಿ ಹಾಗೂ ಮಥುರಾದ ಹಿಂದೂಗಳ ದೇವಸ್ಥಾನಗಳನ್ನು ಒಡೆದಿರುವ ಬಗ್ಗೆ ಆಖಾಡಾ ಪರಿಷತ್ತಿನ ವತಿಯಿಂದ ದೂರನ್ನೂ ದಾಖಲಿಸಲಾಗುವುದು. ದೇವಸ್ಥಾನವನ್ನು ಮುಕ್ತ ಮಾಡಲು ಕಾನೂನಿನ ಹೋರಾಟಕ್ಕಾಗಿ ನಾವು ವಿಶ್ವ ಹಿಂದೂ ಪರಿಷತ್ತು, ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಂತಹ ಹಿಂದೂತ್ವನಿಷ್ಠ ಸಂಘಟನೆಗಳ ಸಹಾಯವನ್ನು ಪಡೆದುಕೊಳ್ಳಲಿದ್ದೇವೆ. ಕಾನೂನಿನ ಈ ಹೋರಾಟದ ತೀರ್ಪು ನಮ್ಮ ಪರವಾಗಿಯೇ ಬರುವುದು ಎಂಬ ವಿಶ್ವಾಸ ನಮಗಿದೆ” ಎಂದು ಹೇಳಿದರು.