ಕೊರೋನಾ ಮತ್ತು ಅಗ್ನಿಹೋತ್ರದ ಉಪಯುಕ್ತತೆ !

ಡಾ. ಉಲರಿಚ್ ಬರ್ಕ

ಡಾ. ಬರ್ಕ ಇವರು ಜರ್ಮನಿಯವರಾಗಿದ್ದು ಅವರು ‘ತತ್ತ್ವ ಜ್ಞಾನ’ ಎಂಬ ವಿಷಯದ ಮೇಲೆ ಪಿ.ಎಚ್.ಡಿ. ಮಾಡಿದ್ದಾರೆ. ಹಾಗೆಯೇ ಅವರು ‘ಜರ್ಮನ್ ಅಸೋಸಿಯೆಶನ್ ಫಾರ್ ಹೋಮ್ ಥೆರಪಿ’ ಎಂಬ ಸಂಸ್ಥೆಯ ಅಧ್ಯಕ್ಷರಾಗಿದ್ದಾರೆ. ಅವರನ್ನು ‘ಅಗ್ನಿಹೋತ್ರತಜ್ಞ’ರೆಂದು ಗುರುತಿಸಲಾಗುತ್ತದೆ. ಅವರು ಕಳೆದ ೩೫ ವರ್ಷಗಳಿಂದ ಅಗ್ನಿಹೋತ್ರವನ್ನು ಮಾಡುತ್ತಿದ್ದು ಆ ಕುರಿತು ಸಂಶೋಧನೆಯನ್ನೂ ಮಾಡುತ್ತಿದ್ದಾರೆ.

‘ಜಗತ್ತಿದಾದ್ಯಂತ ಕೊರೊನಾ ರೋಗಾಣುಗಳು ಉಲ್ಬಣವಾಗಿರುವುದರಿಂದ ಸಮಸ್ಯೆಯು ನಿರ್ಮಾಣವಾಗಿದೆ. ಈ ರೋಗಾಣು ಹರಡದಂತೆ ನಾವು ಆಗಾಗ ಕೈ ತೊಳೆಯುವುದು, ಸೋಶಲ್ ಡಿಸ್ಟನ್ಸಿಂಗ್ (ಸಾಮಾಜಿಕ ಅಂತರ) ಎಂಬ ನಿಯಮವನ್ನು ಪಾಲಿಸಬೇಕು. ನಮ್ಮ ಭಾರತದ ಪರಂಪರೆಯಲ್ಲಿ ಅಗ್ನಿಹೋತ್ರದಿಂದ ವಾತಾವರಣ ಶುದ್ಧಿಯಾಗುತ್ತದೆ, ಎಂದು ಹೇಳಿದೆ. ಈ ರೋಗಾಣುಗಳು ಇತ್ತೀಚೆಗೆ ಉಲ್ಬಣವಾಗಿರುವುದರಿಂದ ‘ಅಗ್ನಿಹೋತ್ರದ ಕೊರೊನಾ ರೋಗಾಣುಗಳ ಮೇಲೆ ಏನು ಪರಿಣಾಮವಾಗುತ್ತದೆ ?’,ಎಂಬ ಕುರಿತು ಶಾಸ್ತ್ರದ ದೃಷ್ಟಿಯಿಂದ ಅಧ್ಯಯನವಾಗಿಲ್ಲ. ಆದರೂ ಹೀಗೆ ಕೆಲವು ಅನುಭವಗಳಿಂದ ಕೊರೊನಾ ರೋಗಾಣುಗಳ ಸಮಸ್ಯೆಯನ್ನು ಪರಿಹರಿಸಲು ಅಗ್ನಿಹೋತ್ರದಿಂದ ಸಹಾಯವಾಗಬಹುದು’, ಎಂದು ನಾವು ಹೇಳಬಹುದು. ಈ ಕುರಿತು ಜರ್ಮನಿಯ ಅಗ್ನಿಹೋತ್ರದ ಅಧ್ಯಯನಕಾರರು (ಅಭ್ಯಾಸಕರು) ಡಾ. ಉಲರಿಚ್ ಬರ್ಕ ಇವರು ಮಂಡಿಸಿದ ಕೆಲವು ಅಂಶಗಳನ್ನು ಇಲ್ಲಿ ಕೊಡುತ್ತಿದ್ದೇವೆ.

೧. ಅಗ್ನಿಹೋತ್ರದಿಂದ ಮುಂದೆ ಕೊಟ್ಟಿರುವ ಸಹಾಯಗಳಾಗಬಹುದು

೧. ವ್ಯಕ್ತಿಗೆ ಸೋಂಕು ಹರಡುವ ಸಾಧ್ಯತೆ ಕಡಿಮೆಯಾಗುತ್ತದೆ.

೨. ಒಂದು ವೇಳೆ ಮೊದಲೇ ಸೋಂಕು ತಗಲಿದ್ದಲ್ಲಿ, ಸಂಬಂಧಪಟ್ಟ ರೋಗಾಣುಗಳ ಪ್ರಭಾವವು ಸ್ವಲ್ಪ ಕಡಿಮೆಯಾಗುವುದು.

೩. ಸೋಂಕು ತಗಲದಂತೆ ಶರೀರಕ್ಕೆ ಸಹಾಯ ಸಿಗುತ್ತದೆ.

೨. ಸೋಂಕು ತಗಲುವ ಸಾಧ್ಯತೆ ಕಡಿಮೆಯಾಗುತ್ತದೆ

‘ಕೊರಾನಾ ರೋಗಾಣುಗಳ ಸೋಂಕನ್ನು ಕಡಿಮೆ ಮಾಡಲು ಅಗ್ನಿಹೋತ್ರದಿಂದ ಸಹಾಯವಾಗುವುದು’, ಎಂದು ಒಂದು ಉತ್ತಮ ವರದಿ ಬಂದಿದೆ.

೨ ಅ. ಸ್ಪೇನದಲ್ಲಿ ಏಲಿಸಾಬೆಥ್ ಎಮ್. ಇವರ ಆಶ್ಚರ್ಯಗೊಳ್ಳುವ ಅನುಭವಗಳು : ಸ್ಪೇನದಲ್ಲಿ ಕೊರೊನಾ ಹರಡುವಿಕೆಯ ದೃಷ್ಟಿಯಿಂದ ಅತ್ಯಂತ ಸಂವೇದನಾಶೀಲರಾಗಿರುವ ಮಾದ್ರಿದ ನಗರದಲ್ಲಿರುವ ಏಲಿಸಾಬೆಥ್ ಎಮ್. ಇವರು ತಮ್ಮ ಅನುಭವವನ್ನು ಹೇಳಿದರು. (ಯುರೋಪನಲ್ಲಿ ಇಟಲಿಯ ನಂತರ ಕೊರೊನಾದ ಅತ್ಯಧಿಕ ಸೋಂಕು ಸ್ಪೇನನಲ್ಲಿತ್ತ್ತು) ಏಲಿಸಾಬೆಥ್ ಇವರ ಪತಿಯೊಂದಿಗೆ ಒಂದು ಮನೆಯಲ್ಲಿರುತ್ತಾರೆ. ಆ ಮನೆಯಲ್ಲಿನ ಒಂದು ಕೋಣೆಯನ್ನು ಅವರು ನಗರದಲ್ಲಿ ಉಪಹಾರ ಗೃಹವನ್ನು ನಡೆಸುತ್ತಿರುವ ಓರ್ವ ವ್ಯಕ್ತಿಗೆ ಬಾಡಿಗೆ ಕೊಟ್ಟಿದ್ದಾರೆ. ಅಲ್ಲಿನ ಸಂಚಾರ ನಿಷೇಧದ ಮೊದಲು ಆ ವ್ಯಕ್ತಿಗೆ ಅನೇಕ ಜನರ ಸಂಪರ್ಕವಿತ್ತು. ಅವನ ಕೊರೋನಾ ವಿಷಾಣುಗಳ ಪರೀಕ್ಷಣೆಯು ಸಕಾರಾತ್ಮಕ ಬಂದಿತು. ಆದುದರಿಂದ ಏಲಿಸಾಬೆಥ್ ಮತ್ತು ಅವರ ಯಜಮಾನರಿಗೆ ಕಾಳಜಿಯಾಗತೊಡಗಿತು. ಅವರು ಕೊರೋನಾ ರೋಗಾಣುಗಳ ಬಗ್ಗೆ ತಮ್ಮ ಪರೀಕ್ಷಣೆಯನ್ನು ಮಾಡಿಸಿದರು, ಆಗ ಅದು ನಕಾರಾತ್ಮಕ ಬಂದಿತು. ನಿಜ ಹೇಳ ಬೇಕೆಂದರೆ ಏಲಿಸಾಬೆಥ್ ಮತ್ತು ಆ ಬಾಡಿಗೆದಾರರ ಅಡುಗೆ ಮನೆಯು ಒಂದೇ ಇದೆ. ಅವರಿಬ್ಬರೂ ಒಟ್ಟಿಗೆ ಊಟವನ್ನು ಮಾಡುತ್ತಿದ್ದರು, ಒಂದೇ ಸ್ನಾನ ಗೃಹವನ್ನು ಬಳಸುತ್ತಿದ್ದರು. ಕೆಲವು ದಿನಗಳ ಹಿಂದೆ ಅವರು ಒಟ್ಟಿಗೆ ಬಂದು ಹುಟ್ಟುಹಬ್ಬವನ್ನೂ ಆಚರಿಸಿದ್ದರು. ಪರೀಕ್ಷಣೆಯನ್ನು ಮಾಡಿದ್ದ ಆಧುನಿಕ ವೈದ್ಯರಿಗೆ ‘ಸೋಂಕು ತಗಲಿದ ಮನುಷ್ಯನ ಜೊತೆಯಲ್ಲಿದ್ದರೂ ಏಲಿಸಾಬೆಥ್ ಮತ್ತು ಅವರ ಪತಿಗೆ ರೋಗಾಣುವಿನಿಂದ ಸೋಂಕು ತಗಲಿಲ್ಲ’, ಎಂಬ ಬಗ್ಗೆ ಬಹಳ ಆಶ್ಚರ್ಯವೆನಿಸಿತು. ಏಲಿಸಾಬೆಥ್ ಎಮ್. ಇವರು ನಿಯಮಿತವಾಗಿ ಅಗ್ನಿಹೋತ್ರವನ್ನು ಮಾಡುತ್ತಿದ್ದರು, ಹಾಗೆಯೇ ಅಗ್ನಿಹೋತ್ರದ ವಿಭೂತಿಯನ್ನು ದಿನನಿತ್ಯ ಸೇವಿಸುತ್ತಿದ್ದರು. ಇದರಿಂದಾಗಿ ಅವರಿಗೆ ಬಹುಶಃ ಕೊರೋನಾದ ಸೋಂಕು ತಗಲಲಿಲ್ಲದಿರಬಹುದು. ಅಗ್ನಿಹೋತ್ರದಿಂದ ರೋಗಾಣುಗಳು ನಾಶವಾಗುತ್ತವೆಯೇ ಎಂಬುದು ನಿಖರವಾಗಿ ತಿಳಿದಿಲ್ಲ. ಅಗ್ನಿಹೋತ್ರದಿಂದ ವಿಷಾಣುಗಳ ಸಂಖ್ಯೆಯು ಕಡಿಮೆಯಾಗುತ್ತದೆ. ಯಾವುದು ಜೀವಾಣುಗಳ ಸಂದರ್ಭದಲ್ಲಿ ಆಯಿತೋ, ಅದು ವಿಷಾಣುಗಳ ಬಗ್ಗೆಯೂ ಆಗುತ್ತದೆಯೇ ಎಂಬುದನ್ನು ಶೀಘವಾಗಿ ಸಂಶೋಧನೆಯನ್ನು ಮಾಡುವುದು ಅವಶ್ಯಕವಿದೆ.

೩. ಅಗ್ನಿಹೋತ್ರದಿಂದ ಜೀವಾಣುಗಳ ಮೇಲಾಗುವ ಪರಿಣಾಮದ ಕುರಿತು ವಿವಿಧ ಸಂಸ್ಥೆ ಮತ್ತು ವಿಶ್ವವಿದ್ಯಾಲಯಗಳಲ್ಲಿ ಮಾಡಿದ ಸಂಶೋಧನೆಗಳು

೩ ಅ. ಪುಣೆಯ ಫರ್ಗ್ಯುಸನ್ ಕಾಲೇಜಿನಲ್ಲಿ ಮಾಡಿದ ಪ್ರಯೋಗಕ್ಕನುಸಾರ ‘ಅಗ್ನಿಹೋತ್ರದ ಹೊಗೆಯಿಂದ ಗಾಳಿಯಲ್ಲಿರುವ ಸೂಕ್ಷ್ಮ ಜಂತುಗಳ ಸಂಖ್ಯೆಯು ಕಡಿಮೆಯಾಗುತ್ತದೆ’, ಎಂಬುದು ಗಮನಕ್ಕೆ ಬರುವುದು : ಇತ್ತೀಚೆಗೆ ‘ಪುಣೆಯ ಫರ್ಗ್ಯುಸನ್’ ಕಾಲೇಜಿನಲ್ಲಿ ಅಗ್ನಿಹೋತ್ರದಿಂದ ಜೀವಾಣುಗಳ ಬೆಳವಣಿಗೆಯ ಮೇಲಾಗುವ ಪರಿಣಾಮವನ್ನು ಕಂಡುಹಿಡಿಯಲು ಪ್ರಯೋಗ ಮಾಡಲಾಯಿತು. ಈ ಪ್ರಯೋಗದ ಫಲಿತಾಂಶವು ದೊರಕಿದ ನಂತರ ‘ಅಗ್ನಿಹೋತ್ರದ ಹೊಗೆಯಿಂದಾಗಿ ಗಾಳಿಯಲ್ಲಿರುವ ಸೂಕ್ಷ್ಮ ಜಂತುಗಳ ಸಂಖ್ಯೆಯು ಕಡಿಮೆಯಾಯಿತು’, ಎಂಬುದು ಕಂಡುಬಂದಿತು.

೩ ಆ. ಸೋಂಕು ತಗಲಿದ ಜನರಿಗೆ ಅಗ್ನಿಹೋತ್ರವು ಯಾವ ರೀತಿ ಸಹಾಯ ಮಾಡುವುದು ? : ಹೃದಯ ರೋಗ ಅಥವಾ ಉಚ್ಚ ರಕ್ತದೊತ್ತಡ, ಶ್ವಸನಾಂಗ ವ್ಯೂಹದಲ್ಲಿನ ದಮ್ಮುಗಳಂತಹ ಗಂಭೀರ ಕಾಯಿಲೆ, ಮಧುಮೇಹ, ಅರ್ಬುದರೋಗ, ರೋಗ ನಿರೋಧಕ ಶಕ್ತಿಯು ಕಡಿಮೆ ಇರುವವರು ಹಾಗೆಯೇ ವಯಸ್ಕರು ಇವರಿಗೆ ಕೊರೋನಾದ ಹೆಚ್ಚು ಅಪಾಯವಿರುತ್ತದೆ. ವಯಸ್ಸು ಹೆಚ್ಚಾದಂತೆ ಮನುಷ್ಯನ ರೋಗನಿರೋಧಕ ಶಕ್ತಿಯು ಕಡಿಮೆಯಾಗುತ್ತದೆ. ಇದುವರೆಗೆ ಕೊರೋನಾದ ರೋಗಾಣುಗಳಿಂದ ಯಾವ ಜನರು ಮೃತರಾಗಿದ್ದಾರೆಯೋ, ಅವರಲ್ಲಿ ಅನೇಕ ಜನರಿಗೆ ಮೇಲಿನ ಕಾಯಿಲೆಗಳಿದ್ದವು.

೩ ಇ. ಹೃದ್ರೋಗ ಮತ್ತು ಉಚ್ಚ ರಕ್ತದೊತ್ತಡ : ಅಗ್ನಿಹೋತ್ರದಿಂದ ರಕ್ತದೊತ್ತಡವು ಸಾಮಾನ್ಯ ಸ್ಥಿತಿಗೆ ಬರಲು ಸಹಾಯವಾಗುತ್ತದೆ. ಇದಕ್ಕಾಗಿ ಅಗ್ನಿ ಹೋತ್ರವನ್ನು ಮಾಡುವ ಮೊದಲು ಮತ್ತು ಅಗ್ನಿ ಹೋತ್ರವನ್ನು ಮಾಡಿದ ನಂತರ ಕೆಲವು ವ್ಯಕ್ತಿಗಳ ರಕ್ತದ ಒತ್ತಡವನ್ನು ಪರಿಶೀಲಿಸಲಾಯಿತು. ಈ ಪ್ರಯೋಗದಲ್ಲಿ ಅಗ್ನಿಹೋತ್ರದ ನಂತರ ರಕ್ತದೊತ್ತಡವು ಸಾಮಾನ್ಯ ಸ್ಥಿತಿಗೆ ಬಂದಿರುವುದನ್ನು ಕಂಡುಬಂದಿದೆ.

೩ ಈ. ಅಗ್ನಿಹೋತ್ರವನ್ನು ನಿಯಮಿತವಾಗಿ ಮಾಡುವುದರಿಂದ ಪೆರು ದೇಶದಲ್ಲಿನ ಮಗದಾ ಲೋಪೆಝ್ ಇವರು ಹೇಳಿದ ಅನುಭವಗಳು : ಪೆರು ದೇಶದಲ್ಲಿನ ಮಗದಾ ಲೋಪೆಝ್ ಇವರು ಅಗ್ನಿಹೋತ್ರದಿಂದ ಹೃದಯದ ಮೇಲಾಗುವ ಪರಿಣಾಮದ ಕುರಿತು ಒಂದು ಅನುಭವವನ್ನು ಹೇಳಿರುವರು. ಅವರು, “೧೦ ವರ್ಷಗಳ ಹಿಂದೆ ನನ್ನ ತಾಯಿಗೆ ಕಾಯಿಲೆಯಾಗಿತ್ತು. ಅವಳ ಇಲೆಕ್ಟ್ರೋಕಾರ್ಡಿವೋಗ್ರಾಮ್ (ಇ.ಸಿ.ಜಿ.) ತೆಗೆದನಂತರ ಅವಳಿಗೆ ಈ ಮೊದಲು ಹೃದ್ರೋಗದ ಆಘಾತವಾಗಿತ್ತು, ಎಂಬುದು ಕಂಡು ಬಂದಿತು; ಎಂದರೆ ಅವಳ ಹೃದಯದ ಒಂದು ಭಾಗವು ಮೃತವಾಗಿತ್ತು ಮತ್ತು ಅದರಲ್ಲಿ ಪುನಃ ಸುಧಾರಣೆಯಾಗಲು ಸಾಧ್ಯವಿರಲಿಲ್ಲ. ಕಳೆದ ೪ ವರ್ಷಗಳು ನಾವು ಅನಿಯಮಿತವಾಗಿ ಅಗ್ನಿಹೋತ್ರವನ್ನು ಮಾಡುತ್ತಿದ್ದೆವು; ಆದರೆ ಕಳೆದ ಕೆಲವು ತಿಂಗಳಿನಿಂದ ನಾವು ದಿನನಿತ್ಯವು ಅಗ್ನಿಹೋತ್ರವನ್ನು ಮಾಡುತ್ತಿದ್ದೇವೆ. ೨ ವಾರಗಳ ಹಿಂದೆ ತಾಯಿಯವರ ಎರಡನೆಯ ಬಾರಿ ‘ಇ.ಸಿ.ಜಿ.’ ತೆಗೆದು ಅದಕ್ಕೆ ಸಂಬಂಧಪಟ್ಟ ಆಧುನಿಕ ವೈದ್ಯರಿಗೆ ಕೇಳಿದ ನಂತರ ಅವರು, “ತಾಯಿಯವರ ಹೃದಯವು ಸರಿಯಾಗಿದೆ ಮತ್ತು ಅವಳಿಗೆ ಈ ಮೊದಲು ಹೃದಯಾಘಾತವಾಗಿರುವ ಬಗ್ಗೆ ಯಾವುದೇ ಚಿಹ್ನೆಯಿಲ್ಲ” ಎಂದು ಕೇಳಿ ನಮಗೆ ತುಂಬಾ ಆಶ್ಚರ್ಯವೆನಿಸಿತು. ನಾವು ದಿನ ಅಗ್ನಿಹೋತ್ರವನ್ನು ಮಾಡಿ ದಿನದಲ್ಲಿ ಅವಳಿಗೆ ೩-೪ ಸಲ ಅಗ್ನಿಹೋತ್ರದ ವಿಭೂತಿ ಸೇವಿಸಲು ಕೊಡುತ್ತಿದ್ದೆವು.

೪. ಅಗ್ನಿಹೋತ್ರದಿಂದ ದಮ್ಮಿನ ಕಾಯಿಲೆಯೂ ಗುಣಮುಖವಾಗಿರುವ ಉದಾಹರಣೆಗಳು

ಕೊರೋನಾದಿಂದ ಪುಪ್ಪುಸಗಳ ಮೇಲೆ ಹೆಚ್ಚು ಪರಿಣಾಮವಾಗುವುದರಿಂದ ‘ಅಸ್ತಮಾ’ ಇರುವವರು ವಿಶೇಷ ಕಾಳಜಿ ವಹಿಸುವ ಬಗ್ಗೆ ಹೇಳಲಾಗುತ್ತದೆ. ಅಗ್ನಿಹೋತ್ರದಿಂದ ನಮ್ಮ ಪುಪ್ಪುಸವು ಬಲಿಷ್ಠವಾಗಲು ಸಹಾಯವಾಗುತ್ತದೆ ಮತ್ತು ಉಸಿರಾಟದ ಬಗ್ಗೆ ಶರೀರದ ಸ್ಥಿತಿಸ್ಥಾಪಕತ್ವವು ಹೆಚ್ಚುತ್ತದೆ. ಈ ಕುರಿತು ಅನೇಕ ಉದಾಹರಣೆಗಳು ಎದುರಿಗೆ ಬಂದಿವೆ. ಅವುಗಳಲ್ಲಿ ೨ ಉದಾಹರಣೆಗಳನ್ನು ಮುಂದೆ ಕೊಡಲಾಗಿದೆ.

೪ ಅ. ಅಗ್ನಿಹೋತ್ರ ಮಾಡುವುದರಿಂದ ಅಸ್ತಮಾದ ಕಾಯಿಲೆಯು ಪೂರ್ತಿ ಗುಣವಾಗಿದೆ ಎಂದು ಹೇಳಿದ ಅಮೇರಿಕಾದ ಡೊನ್ನಾ : ಅಮೇರಿಕಾದ ಸಾಂತಾ ಕ್ಲಾರಿಟಾದಲ್ಲಿರುವ, ಡೊನ್ನಾ ಎಸ್. ಇವರು ಅವರ ಅನುಭವವನ್ನು ಬರೆದಿದ್ದಾರೆ. ಅವರು, “ನನಗೆ ತುಂಬಾ ಕಾಯಿಲೆಯಾಗಿತ್ತು, ಆಗ ಯುನಿರ್ವಸಿಟಿ ಆಫ್ ವರ್ಜಿನಿಯಾದಲ್ಲಿ ಉಸಿರಾಟದ ತೊಂದರೆಯ ಬಗ್ಗೆ ತಜ್ಞರನ್ನು ಭೇಟಿಯಾದೆನು. ಅವರು ನನ್ನ ಪುಪ್ಪುಸಗಳ ‘ಕ್ಷ’ ಕಿರಣ (ಎಕ್ಸ-ರೆ) ವರದಿಯನ್ನು ನನಗೆ ತೋರಿಸಿದರು. ಅದರಲ್ಲಿ ನನ್ನ ಪುಪ್ಪುಸಗಳು ಪೂರ್ತಿ ಕಪ್ಪು ಕಾಣಿಸುತ್ತಿದ್ದವು. ಕೇವಲ ೪ ಸೆಂಟಿಮೀಟರ್ ಜಾಗವು ಖಾಲಿ ಕಾಣಿಸುತ್ತಿತ್ತು. ನಾನು ಅಗ್ನಿಹೋತ್ರ ವನ್ನು ಮಾಡಲು ಆರಂಭಿಸಿದೆನು. ಮೊದಲನೆ ವಾರದ ನಂತರ ನಾನು ನನ್ನ ಅಸ್ತಮಾದ ಔಷಧಿಯನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದೆನು ಮತ್ತು ಸ್ವಲ್ಪ ಸಮಯದ ನಂತರ ‘ಸ್ಟಿರಾಯಡ್ಸ’ ತೆಗೆದುಕೊಳ್ಳುವುದನ್ನು ನಿಲ್ಲಿಸಿದೆನು. ತದನಂತರ ೩ ತಿಂಗಳ ನಂತರ ನಾನು ಆಧುನಿಕ ವೈದ್ಯರ ಬಳಿಗೆ ಹೋದೆನು. ಅವರ ನನ್ನ ಪುಪ್ಪುಸಗಳ ಕ್ಷ-ಕಿರಣದ ಪರೀಕ್ಷಣೆಯನ್ನು ಮಾಡಿದರು. ಅದರ ವರದಿಯನ್ನು ನೋಡಿದ ನಂತರ ಅವರು, “ನೀವು ಏನು ಮಾಡಿದ್ದೀರಿ, ಎಂಬುದು ನನಗೆ ಗೊತ್ತಿಲ್ಲ; ಆದರೆ ನಿಮ್ಮ ಪುಪ್ಪುಸಗಳು ಸಂಪೂರ್ಣವಾಗಿ ಗುಣವಾಗಿದೆ. ನಿಮಗೆ ಈಗ ಔಷಧಿ ತೆಗೆದುಕೊಳ್ಳುವ ಅವಶ್ಯಕತೆಯಿಲ್ಲ”, ಎಂದು ಹೇಳಿದರು.

೪ ಆ. ಪೊಲಂಡದಲ್ಲಿನ ಫ್ರಾನ್ ಬಿ ಇವರಿಗೆ ೧೧ ನೇ ವಯಸ್ಸಿನಲ್ಲಿ ಅಸ್ತಮಾದ ತೀವ್ರ ತೊಂದರೆಯಾಗುವುದು ಮತ್ತು ೨೫ ನೇ ವಯಸ್ಸಿನಲ್ಲಿ ಅಗ್ನಿಹೋತ್ರವನ್ನು ಪ್ರಾರಂಭಿಸಿದ ನಂತರ ಅಸ್ತಮಾ ಗುಣವಾಗುವುದು : ವಾಯಸೊಕಾ, ಪೊಲಂಡದಲ್ಲಿರುವ ಫ್ರಾನ್ ಬಿ ಇವರು, “೧೧ ನೆ ವಯಸ್ಸಿನಿಂದ ನನಗೆ ದಮ್ಮಿನ ತೀವ್ರ ಕಾಯಿಲೆ ಇತ್ತು. ೨೦ ವರ್ಷಗಳ ನಂತರ ನನ್ನ ಸ್ಥಿತಿಯು ಇನ್ನೂ ಹದೆಗೆಟ್ಟಿತು. ನನಗೆ ದಮ್ಮಿನ ತೊಂದರೆಯು ಸುಮಾರು ರಾತ್ರಿಯ ತುಂಬಾ ಹೊತ್ತಿನಲ್ಲಿ ಬರುತ್ತಿತ್ತು ಮತ್ತು ಸ್ಥಳೀಯ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ತೆಗೆದುಕೊಳ್ಳಬೇಕಾಗುತ್ತಿತ್ತು. ‘ದಮ್ಮು ಇದು ವಾಯು ಪ್ರದೂಷಣೆಗೆ ಸಂಬಂಧಪಟ್ಟಿದೆ, ಎಂದು ನನಗೆ ಅನಿಸುತ್ತಿತ್ತು. ೨೫ ನೇ ವಯಸ್ಸಿನಲ್ಲಿ ನಾನು ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಅಗ್ನಿಹೋತ್ರ ಮಾಡತೊಡಗಿದೆನು. ೨ ವಾರಗಳಲ್ಲಿಯೇ ನನ್ನ ದಮ್ಮಿನ ಕಾಯಿಲೆಯು ಗುಣವಾಯಿತು. ತದ ನಂತರ ನನಗೆ ಆ ಕಾಯಿಲೆಯು ಪುನಃ ಬರಲಿಲ್ಲ, ಎಂದರು.

೫. ಅಗ್ನಿಹೋತ್ರವು ರೋಗನಿರೋಧಕ ಶಕ್ತಿಯು ಹೆಚ್ಚಾಗಲು ಸಹಾಯಕ

೫ ಅ. ಎಚ್.ಆಯ್.ವಿ. ಈ ರೋಗದ ಮೇಲೆ ಅಗ್ನಿಹೋತ್ರದ ಪರಿಣಾಮ : ‘ಕೊರೊನಾ ರೋಗಾಣುಗಳ ಮೇಲೆ ಅಗ್ನಿಹೋತ್ರದಿಂದ ಏನು ಪರಿಣಾಮವಾಗುತ್ತದೆ ?’, ಎಂಬುದರ ಬಗ್ಗೆ ಅಧ್ಯಯನವಾಗಲಿಲ್ಲ; ಆದರೆ ರೋಗಾಣುಗಳಿಂದಾಗುವ ಎಚ್.ಆಯ್.ವಿ. ಈ ರೋಗವನ್ನು ಹಿಡಿತದಲ್ಲಿಡಲು ಅಗ್ನಿಹೋತ್ರ ಮತ್ತು ಅಗ್ನಿಹೋತ್ರದಲ್ಲಿನ ವಿಭೂತಿ ಇವುಗಳಿಂದ ಒಳ್ಳೆಯ ಪರಿಣಾಮವು ಕಂಡುಬಂದಿತು. ಈ ಕುರಿತು ಮಾಡಿದ ಪ್ರಯೋಗದಲ್ಲಿ ಎಚ್.ಆಯ್.ವಿ. ರೋಗದ ಸೋಂಕು ತಗಲಿದ ಮಕ್ಕಳು ಅಗ್ನಿಹೋತ್ರವನ್ನು ಮಾಡಲು ಆರಂಭಿಸಿದರು. ಪ್ರತಿಯೊಬ್ಬ ಹುಡುಗ ಅಥವಾ ಹುಡುಗಿಯರು ಸ್ವತಂತ್ರವಾಗಿ ಅಗ್ನಿಹೋತ್ರವನ್ನು ಮಾಡಿದರು. ಸ್ವಲ್ಪ ಹೊತ್ತಿನ ನಂತರ ಮುಂದಿನ ಪರಿಣಾಮಗಳು ಕಂಡುಬಂದವು.

೧. ರೋಗಾಣುಗಳ ಪ್ರಮಾಣವು ಕಡಿಮೆಯಾಯಿತು.

೨. ಸೀಡೀ-೪ ಎಂಬ ಪ್ರೊಟಿನ್‌ನ ಮಟ್ಟವು ಹೆಚ್ಚಾಯಿತು.

೩. ಒಟ್ಟಿನಲ್ಲಿ ಮಕ್ಕಳ ಆರೋಗ್ಯವು ಸುಧಾರಿಸಿತು. ಅವರ ರೋಗ ನಿರೋಧಕಶಕ್ತಿಯು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಯಿತು.

೫ ಆ. ರೋಗಾಣುಗಳು ಹೆಚ್ಚಳವಾಗಲು ಇಟ್ಟಿರುವ ‘ಪ್ಲೇಟ್ಸ’ ನಲ್ಲಿ ಅಗ್ನಿಹೋತ್ರದಲ್ಲಿನ ವಿಭೂತಿಯ ನೀರನ್ನು ಹಾಕಿದ ನಂತರ ರೋಗಾಣುಗಳ ಪ್ರಮಾಣವು ಶೇ. ೫೦ ರಷ್ಟು ಕಡಿಮೆಯಾಗುವುದು : ಅಗ್ನಿಹೋತ್ರದ ವಿಭೂತಿಯಿಂದ ಬೇರೆ ಬೇರೆ ರೋಗಾಣುಗಳ ಮೇಲೆ ಏನು ಪರಿಣಾಮವಾಗುತ್ತದೆ, ಎಂಬುದನ್ನು ನೋಡಲು ಪ್ರಯೋಗಶಾಲೆಯಲ್ಲಿ ಒಂದು ಪ್ರಯೋಗವನ್ನು ಮಾಡಲಾಯಿತು. ಅಗ್ನಿಹೋತ್ರದಲ್ಲಿನ ವಿಭೂತಿಯ ನೀರನ್ನು ರೋಗಾಣುಗಳು ಹೆಚ್ಚಳವಾಗಲು ಇಟ್ಟಿರುವ ‘ಪ್ಲೇಟ್ಸ’ನಲ್ಲಿ ಹಾಕಲಾಯಿತು. ಅದನ್ನು ಹಾಕಿದನಂತರ ರೋಗಾಣುಗಳ ಪ್ರಮಾಣವು ಶೇ. ೫೦ ರಷ್ಟು ಕಡಿಮೆಯಾಯಿತು. ಈ ಪ್ರಮಾಣವು ಒಂದು ವೇಳೆ ಹೆಚ್ಚಿಲ್ಲದಿದ್ದರೂ, ಅದರಿಂದ ಮಂದ ಕಾಯಿಲೆ ಮತ್ತು ತೀವ್ರ ಕಾಯಿಲೆ ಇರುವವರಿಗೆ ಅದರಿಂದ ಪರಿಣಾಮವಾಗುವುದು. ವಿವಿಧ ರೋಗಾಣುಗಳ ಮೇಲೆ ಹೇಗೆ ಪರಿಣಾಮವಾಯಿತೋ, ಹಾಗೆ ಸದ್ಯದ ಕೊರೊನಾ ರೋಗಾಣುಗಳ ಮೇಲೆ ಅಗ್ನಿಹೋತ್ರದ ಪರಿಣಾಮವಾಗಬಲ್ಲದು.

೬. ಮೇಲಿನ ಎಲ್ಲ ಅಧ್ಯಯನಗಳಿಂದ ಸಿಕ್ಕಿದ ನಿಷ್ಕರ್ಷ (ಫಲಶ್ರುತಿ)

ಅಗ್ನಿಹೋತ್ರದಿಂದ ಕೊರೊನಾ ರೋಗಾಣುಗಳ ಸೋಂಕು ಕಡಿಮೆಯಾಗಲು ಉಪಯೋಗವಾಗುತ್ತದೆ. ಈ ಕುರಿತು ನಮ್ಮ ಬಳಿ ಪ್ರತ್ಯಕ್ಷ ಪುರಾವೆಗಳಿಲ್ಲ. ಆದರೂ ಮೇಲಿನ ಎಲ್ಲ ವರದಿಗಳ ಅಧ್ಯಯನ ಮಾಡಿದಾಗ ಕೊರೊನಾ ಸೋಂಕಿನಂತಹ ಕಠಿಣ ಪರಿಸ್ಥಿತಿಯಲ್ಲಿ ಮನೆಯಲ್ಲಿ ಅಗ್ನಿಹೋತ್ರವನ್ನು ಮಾಡುವುದು ಉಪಯುಕ್ತವಾಗಬಲ್ಲದು. ಅದಕ್ಕಾಗಿ ಶಾಸ್ತ್ರದ ದೃಷ್ಟಿಯಿಂದ ಅಧ್ಯಯನ ಮಾಡಲಾಗಬೇಕು. (ಇವೆಲ್ಲ ಶಾಸ್ತ್ರೀಯ ದೃಷ್ಟಿಯಿಂದ ಅಧ್ಯಯನವಾಗುವುದು ಅವಶ್ಯವಿದೆ.)

ಅ. ಕೊರೊನಾದ ಸೋಂಕು ತಗಲಿರುವ ರೋಗಿಗಳಿಗೆ ಅಗ್ನಿಹೋತ್ರವನ್ನು ಮಾಡಲು ಹೇಳಿ ಅಥವಾ ಅವರಿಗಾಗಿ ಅಗ್ನಿಹೋತ್ರವನ್ನು ಮಾಡಿ ಅದರ ಪರಿಣಾಮವನ್ನು ಪರೀಕ್ಷಿಸುವುದು.

ಆ. ಅಗ್ನಿಹೋತ್ರ ಮಾಡುವ ಮೊದಲು ಮತ್ತು ಅಗ್ನಿಹೋತ್ರ ಮಾಡಿದ ನಂತರ ‘ಆಸ್ಪತ್ರೆಯಲ್ಲಿನ ಗಾಳಿಯಲ್ಲಿ ಕೊರೊನಾ ರೋಗಾಣುಗಳ ಪ್ರಮಾಣವು ಎಷ್ಟಿದೆ ?’, ಎಂಬುದನ್ನು ಅಧ್ಯಯನ ಮಾಡಬೇಕು ಹಾಗೆಯೇ ‘ಆಸ್ಪತ್ರೆಯಲ್ಲಿನ ವಸ್ತುಗಳ ಮೇಲಿನ ಭಾಗಗಳಲ್ಲಿ ಕೊರೊನಾ ರೋಗಾಣುಗಳ ಪ್ರಮಾಣದಲ್ಲಿ ಏನು ಬದಲಾವಣೆಯಾಗುತ್ತದೆ ?’, ಎಂಬ ಅಧ್ಯಯನ ಮಾಡಬೇಕು.

ಇ. ಅಗ್ನಿಹೋತ್ರ ಮತ್ತು ಅಗ್ನಿಹೋತ್ರದಲ್ಲಿನ ವಿಭೂತಿ ಇವುಗಳಿಂದ ‘ಕೊರೊನಾ ರೋಗಾಣುಗಳಿರುವ ಕೋಶಗಳ ಮೇಲೆ ಏನು ಪರಿಣಾಮ ವಾಗುತ್ತದೆ ?’, ಎಂದು ಅಧ್ಯಯನ ಮಾಡಬೇಕು.

ಈ. ಈ ಕಾಲದಲ್ಲಿ ಆಧುನಿಕ ವೈದ್ಯರ ಮತ್ತು ದಾದಿಯರ ಸಂರಕ್ಷಣೆಯ ಒಂದು ಮುಖ್ಯ ವಿಷಯವಾಗಿದೆ. ‘ಈ ವೈದ್ಯಕೀಯ ಕಾರ್ಮಿಕರ ಸಮೂಹದ ಮೇಲೆ ಅಗ್ನಿಹೋತ್ರದಿಂದ ಏನು ಪರಿಣಾಮವಾಗುತ್ತದೆ ?’, ಎಂಬ ಕುರಿತು ಅಧ್ಯಯನ ಮಾಡಬಹುದು.’ – ಡಾ. ಉಲರಿಚ್ ಬರ್ಕ

ಭಾರತದ ಸಮೃದ್ಧ ಪರಂಪರೆಯಾಗಿರುವ ಅಗ್ನಿಹೋತ್ರದ ಪ್ರಸಾರವನ್ನು ಡಾ. ಬರ್ಕ ಇವರಂತಹ ಒಬ್ಬ ವಿದೇಶಿ ಶಾಸ್ತ್ರಜ್ಞರು ಮಾಡುತ್ತಾರೆ ಹಾಗೆಯೇ ಕೊರೊನಾದ ಮೇಲೆ ಅಗ್ನಿಹೋತ್ರವು ಉಪಯುಕ್ತ ವಾಗಿರುವುದೆಂದು ವಿಶ್ವಾಸದಿಂದ ಹೇಳುತ್ತಾರೆಂದರೆ, ಇದು ಭಾರತೀಯರಿಗೆ ಲಜ್ಜಾಸ್ಪದವಾಗಿದೆ !

ಡಾ. ಬರ್ಕ ಇವರಂತಹ ವಿದೇಶಿ ತಜ್ಞರು ಅಗ್ನಿಹೋತ್ರದ ಮೇಲೆ ಸಂಶೋಧನೆ ಮಾಡಿ ಆ ಕುರಿತು ಅಧ್ಯಯನ ಮಾಡಿ ಮಂಡಿಸುತ್ತಾರೆ ಹಾಗೆಯೇ ಕೊರೋನಾದ ಮೇಲೆ ಅಗ್ನಿಹೋತ್ರವು ಪ್ರಭಾವ ಶಾಲಿಯಾಗಿದೆ, ಎಂಬುದನ್ನೂ ಹೇಳುತ್ತಾರೆ. ಅಗ್ನಿಹೋತ್ರದ ವಿವಿಧ ಲಾಭಗಳು ಎಲ್ಲರಿಗೂ ತಿಳಿದಂತಹವುಗಳಾಗಿವೆ. ಸದ್ಯ ಕೊರೋನಾದ ಉಲ್ಬಣವಾಗಿದ್ದನ್ನು ತಡೆಯಲು ಸರಕಾರವು ಅನೇಕ ಸ್ಥಳಗಳಲ್ಲಿ ಅಗ್ನಿಹೋತ್ರ ಹೋಮದ ಆಯೋಜನೆ ಮಾಡಿ ಆ ಕುರಿತು ವೈಜ್ಞಾನಿಕ ಸಂಶೋಧನೆಯನ್ನು ಮಾಡುವುದು ಜನತೆಗೆ ಅಪೇಕ್ಷಿತವಿದೆ !