ಮನುಷ್ಯನ ಕ್ರೂರತೆಯು ಮಿತಿಮೀರಿವುದನ್ನು ತೋರಿಸುವ ಘಟನೆ !
-
ಮೂಕ ಪ್ರಾಣಿಗಳ ಬಗ್ಗೆ ಇಂತಹ ಕ್ರೂರ ಕೀಟಲೆ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸಬೇಕು !
-
ಪ್ರಾಣಿಪ್ರಿಯರು ಎಂದು ಕರೆಯಲ್ಪಡುವವರು ಈಗ ಈ ಘಟನೆಯ ಬಗ್ಗೆ ಏಕೆ ಮೌನವಾಗಿದ್ದಾರೆ ?

ತಿರುವನಂತಪುರಂ (ಕೇರಳ) – ಕೇರಳದ ಮಲಪ್ಪುರಂನಲ್ಲಿ ಕೆಲವು ನಿರ್ದಯ ಜನರು ಗರ್ಭಿಣಿ ಆನೆಗೆ ಪಟಾಕಿ ತುಂಬಿದ ಅನಾನಸ್ ಅನ್ನು ತಿನ್ನಿಸಿದ್ದರಿಂದ ಗರ್ಭದಲ್ಲಿ ಬೆಳೆಯುತ್ತಿರುವ ಮರಿಆನೆಯೊಂದಿಗೆ ಆ ಆನೆಯೂ ಸಾವನ್ನಪ್ಪಿದ ಘಟನೆ ಇತ್ತಿಚೆಗೆ ಬೆಳಕಿಗೆ ಬಂದಿದೆ. ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ಹಂಚಿಕೊಂಡಾಗ ಜನರು ಆಕ್ರೋಶಗೊಂಡರು. ಹಸಿದ ಆನೆ ಆಹಾರವನ್ನು ಅರಸುತ್ತಾ ಕಾಡಿನಿಂದ ಹೊರಬಂದಿತ್ತು. ಅದು ಆಹಾರವನ್ನು ಅರಸುತ್ತಾ ಹಳ್ಳಿಯಲ್ಲಿ ಸುತ್ತಾಡುತ್ತಿತ್ತು. ಕೆಲವು ಸ್ಥಳೀಯರು ಅದಕ್ಕೆ ಅನಾನಾಸ ಜೊತೆಗೆ ಪಟಾಕಿಗಳನ್ನು ತಿನ್ನಿಸಿದರು. ಹಸಿದ ಆನೆ ಅನಾನಸ್ ತಿಂದು ಸ್ವಲ್ಪ ಸಮಯದಲ್ಲಿ ಅವಳ ಹೊಟ್ಟೆಯಲ್ಲಿ ಪಟಾಕಿ ಸ್ಪೋಟಗೊಂಡಿತು. ಈ ಘಟನೆಯಲ್ಲಿ ಹೆಣ್ಣಾನೆ ಗಂಭೀರವಾಗಿ ಗಾಯಗೊಂಡಿತು. ಈ ಪ್ರಕರಣ ತಿಳಿದಾಕ್ಷಣ ರಕ್ಷಣೆಯ ತಂಡವು ಘಟನಾಸ್ಥಳಕ್ಕೆ ತಲುಪಿತು; ಆದರೆ ಅಷ್ಟರಲ್ಲಿ ಆನೆ ಸಾವನ್ನಪ್ಪಿತ್ತು.
ಇಬ್ಬರು ಸ್ವಂತ ಹಿಂದೂ ಸಹೋದರಿಯರಿಗೆ ಕಿರುಕುಳ ನೀಡಿ ತಲೆಮರೆಸಿಕೊಂಡಿರುವ ಆರೋಪಿಯ ವಿರುದ್ಧ ಪ್ರಕರಣ ದಾಖಲು !
ಹಿಂದೂಗಳು ಕರೆ ನೀಡಿದ್ದ ‘ಭಟ್ಕಳ ಬಂದ್’ಗೆ ಉತ್ತಮ ಪ್ರತಿಕ್ರಿಯೆ: ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಹಿಂದೂಗಳ ಭಾಗಿ!
ಯಾವುದೇ ಕಾರಣಕ್ಕೂ ನನಗೆ ನನ್ನ (ಹಿಂದೂ) ಧರ್ಮವನ್ನು ಬಿಡಲು ಸಾಧ್ಯವಿಲ್ಲ!
‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ ವಿರುದ್ಧ ಆರೋಪ ನಿರ್ಧರಿಸಲು ನ್ಯಾಯಾಲಯದ ಆದೇಶ
ಭಾರತದ ಗಡಿಯಲ್ಲಿ ಚೀನಾ ನಿರ್ಮಿತ ಕ್ಯಾಮೆರಾಗಳ ಅಳವಡಿಸಿದ ನೇಪಾಳ!
ಬಾಂಗ್ಲಾದೇಶಿ ವಲಸಿಗರ ಕೇಂದ್ರವಾಗಿರುವ ಮುಂಬಯಿ: ೧,೫೦೦ ಕ್ಕೂ ಹೆಚ್ಚು ಅಕ್ರಮ ವಲಸಿಗರ ಅಡ್ಡೆ!