ನವ ದೆಹಲಿ : ಆಡಳಿತ ಮಂಡಳಿಯ ಅನುಮೋದನೆ ಪಡೆದ ನಂತರ, ಯೋಗಋಷಿ ರಾಮದೇವಬಾಬಾ ಅವರ ಪತಂಜಲಿ ಸಂಸ್ಥೆಯ ವತಿಯಿಂದ ಕೊರೋನಾ ಮೇಲಿನ ಚಿಕಿತ್ಸೆಗಾಗಿ ಔಷಧಿಯ ವೈದ್ಯಕೀಯ ಪರೀಕ್ಷೆಯನ್ನು ಪ್ರಾರಂಭಿಸಿತು. ಪತಂಜಲಿ ಸಂಸ್ಥೆಯ ವ್ಯವಸ್ಥಾಪಕ ಸಂಚಾಲಕರಾದ ಆಚಾರ್ಯ ಬಾಲಕೃಷ್ಣ ಅವರು, ‘ಕರೋನಾಗೆ ಔಷಧಕ್ಕಾಗಿ ವೈದ್ಯಕೀಯ ಪರೀಕ್ಷೆಗೆ ಅನುಮತಿ ಪಡೆಯುವುದು ಸುಲಭವಿರಲಿಲ್ಲ. ‘ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ’ಯು ನಮ್ಮ ಔಷಧದ ಬಗ್ಗೆ ಯಾವುದೇ ಆಸಕ್ತಿಯನ್ನು ತೋರಿಸಿರಲಿಲ್ಲ; ಆದ್ದರಿಂದ ನಾವು ‘ಕ್ಲಿನಿಕಲ್ ಟ್ರಯಲ್ಸ್ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ’ದಲ್ಲಿ ಈ ಔಷಧಿಯನ್ನು ನೋಂದಾಯಿಸಲು ನಿರ್ಧರಿಸಿದೆವು ಮತ್ತು ಜೈಪುರ ವಿಶ್ವವಿದ್ಯಾಲಯದ ಅಡಿಯಲ್ಲಿರುವ ಒಂದು ಇಲಾಖೆಯಲ್ಲಿ ವೈದ್ಯಕೀಯ ಪರೀಕ್ಷೆಗಳನ್ನು ಪ್ರಾರಂಭಿಸಿದೆವು. ಫೆಬ್ರವರಿಯಿಂದಲೇ ಪತಂಜಲಿ ಸಮೂಹವು ಕೊರೋನಾ ಪೀಡಿತ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದೆವು. ಮಾರ್ಚ್ ತನಕ ಪತಂಜಲಿಯು ಅನೇಕರಿಗೆ ಚಿಕಿತ್ಸೆ ನೀಡಿತು; ಆದರೆ ಅದು ವೈದ್ಯಕೀಯ ಪರೀಕ್ಷಣೆಯ ಭಾಗವಾಗಿರಲಿಲ್ಲ. ನಮ್ಮ ಸಂಶೋಧನೆಯನ್ನು ಸಮಾಜದ ಮುಂದೆ ತರಲು ವೈದ್ಯಕೀಯವಾಗಿ ಪರೀಕ್ಷಿಸುವ ಅಗತ್ಯವಿತ್ತು. ಅದಕ್ಕಾಗಿಯೇ ನಾವು ಅನುಮತಿ ಪಡೆದೆವು. ನಮ್ಮ ವೈದ್ಯಕೀಯ ಪ್ರಯೋಗಾಲಯಗಳು ಇತರ ಆಯುರ್ವೇದ ಸ್ಥಾಪನೆಗಳಿಗಿಂತ ಉತ್ತಮವಾಗಿವೆ. ಪ್ರಸ್ತುತ ನಮ್ಮಲ್ಲಿ ೫೦೦ ಸಂಶೋಧಕರು ಇದ್ದು ಅವರಲ್ಲಿ ೧೦೦ ಮಂದಿ `ಪೋಸ್ಟ್ ಡಾಕ್ಟರೇಟ್’ ಸಂಶೋಧಕರು ಇದ್ದಾರೆ.’
ಸನಾತನ ಪ್ರಭಾತ > Post Type > ವಾರ್ತೆಗಳು > ರಾಷ್ಟ್ರೀಯ > ಪತಂಜಲಿಯಿಂದ ಕೊರೋನಾ ರೋಗಾಣುವಿನ ಔಷಧದ ವೈದ್ಯಕೀಯ ಪರೀಕ್ಷೆ ಪ್ರಾರಂಭ
ಪತಂಜಲಿಯಿಂದ ಕೊರೋನಾ ರೋಗಾಣುವಿನ ಔಷಧದ ವೈದ್ಯಕೀಯ ಪರೀಕ್ಷೆ ಪ್ರಾರಂಭ
ಸಂಬಂಧಿತ ಲೇಖನಗಳು
ರಾಜ್ಯದ ಕಾಂಗ್ರೆಸ್ ಸರಕಾರದಿಂದ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ 85 ಕೋಟಿ ರೂಪಾಯಿ ಅನುದಾನ
Teacher Suspended : ಬುಡಕಟ್ಟು ಜನಾಂಗದ ಮಹಿಳೆಯರನ್ನು ‘ಅವರು ಹಿಂದುಗಳೆ ಅಲ್ಲ’, ಹಾಗಾಗಿ ಹಣೆಗೆ ಕುಂಕುಮ ಮತ್ತು ಮಂಗಳಸೂತ್ರ ಹಾಕದಂತೆ ಕರೆ ನೀಡಿದ್ದ ಶಿಕ್ಷಕಿ ಅಮಾನತು !
Sanskrit Verse Opposition : ಗುನಾ (ಮಧ್ಯಪ್ರದೇಶ) ಇಲ್ಲಿಯ ಕಾನ್ವೆಂಟ್ ಶಾಲೆಯ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸಂಸ್ಕೃತ ಶ್ಲೋಕ ಹೇಳಲು ವಿರೋಧ !
Change in Religion : ಮತಾಂತರದ ನಂತರ ಶಾಲೆಯ ಪ್ರಮಾಣಪತ್ರಗಳಲ್ಲಿ ಹೊಸ ಧರ್ಮವನ್ನು ನಮೂದಿಸಬಹುದು ! – ಕೇರಳ ಉಚ್ಚನ್ಯಾಯಾಲಯದ ತೀರ್ಪು
ಜೈಲಿನಲ್ಲಿರುವ ಕೈದಿಗಳ ಬಳಿ 25 ಮೊಬೈಲ್ ಪತ್ತೆ !
ರಾಷ್ಟ್ರಪತಿ ಭವನದಲ್ಲಿರುವ ದರ್ಬಾರ್ ಹಾಲ್ ಅನ್ನು ‘ಗಣತಂತ್ರ ಮಂಟಪ’ ಮತ್ತು ಅಶೋಕ ಹಾಲ್ ಅನ್ನು ‘ಅಶೋಕ್ ಮಂಟಪ’ ಎಂದು ಮರುನಾಮಕರಣ !