​ಶ್ರೀರಾಮಮಂದಿರ ತೀರ್ಥಕ್ಷೇತ್ರ ಟ್ರಸ್ಟ್‌ ನಲ್ಲಿ ಕೆಲಸ ಮಾಡುತ್ತಿದ್ದ ೨೩ ಸಿಬ್ಬಂದಿಯ ರಾಜೀನಾಮೆ

ಅಯೋಧ್ಯೆ – ಶ್ರೀರಾಮಮಂದಿರದ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಲಭ್ಯವಾದ ಹೊಸ ಮಾಹಿತಿಯ ಪ್ರಕಾರ, ಮಂದಿರದಲ್ಲಿ ದೇಣಿಗೆಯನ್ನು ಎಣಿಸುತ್ತಿದ್ದ ೨೩ ಸಿಬ್ಬಂದಿಗಳು ಏಕಕಾಲದಲ್ಲಿ ಕೆಲಸಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಎಲ್ಲಾ ಸಿಬ್ಬಂದಿಯನ್ನು ಹೊರಗುತ್ತಿಗೆ ಸಂಸ್ಥೆಯೊಂದರ (‘ ಗುತ್ತಿಗೆ ಏಜೆನ್ಸಿ’ಯ) ಮೂಲಕ ಮಂದಿರದಲ್ಲಿ ನೇಮಕ ಮಾಡಿಕೊಳ್ಳಲಾಗಿತ್ತು.

​೧. ಮೂಲಗಳ ಮಾಹಿತಿಯ ಪ್ರಕಾರ, ಕೆಲಸ ಬಿಟ್ಟಿರುವ ಎಲ್ಲಾ ಸಿಬ್ಬಂದಿಗಳ ಹೇಳಿರುವುದೇನೆಂದರೆ, ದೇಣಿಗೆ ಕಳ್ಳತನದ ವಿವಾದದ ನಂತರ ಮಂದಿರದಲ್ಲಿ ಹಲವು ನಿಯಮಗಳನ್ನು ಬದಲಾಯಿಸಲಾಗಿದೆ. ಅಷ್ಟೇ ಅಲ್ಲದೆ, ಅವರ ಗೌರವ ಧನವನ್ನೂ ಕಡಿತಗೊಳಿಸಲಾಗಿದೆ.

​೨. ಈ ಎಲ್ಲಾ ಸಿಬ್ಬಂದಿ ಒಟ್ಟಾಗಿ ಸಭೆ ನಡೆಸಿ ಈ ಬದಲಾವಣೆಗಳನ್ನು ವಿರೋಧಿಸಿದರು ಮತ್ತು ಶ್ರೀರಾಮಮಂದಿರ ಆಡಳಿತ ಮಂಡಳಿಯ ಅಧಿಕಾರಿಗಳ ಮುಂದೆ ತಮ್ಮ ಬೇಡಿಕೆಗಳನ್ನು ಮಂಡಿಸಿದರು.

​೩. ಆ ಸಮಯದಲ್ಲಿ ಅವರ ಬೇಡಿಕೆಗಳನ್ನು ಆಲಿಸಲಿಲ್ಲ. ಆದ್ದರಿಂದ, ಪ್ರತಿಭಟನೆಯ ರೂಪವಾಗಿ ಕೊನೆಗೆ ೨೩ ಸಿಬ್ಬಂದಿ ಒಟ್ಟಾಗಿ ರಾಜೀನಾಮೆ ನೀಡಿದ್ದಾರೆ.