ಜಾರಿ ನಿರ್ದೇಶನಾಲಯದಿಂದ ತೃಣಮೂಲ ಕಾಂಗ್ರೆಸ್‌ಗೆ ಸಂಬಂಧಿಸಿದ ೩ ಬ್ಯಾಂಕ್ ಖಾತೆಗಳ ಮುಟ್ಟುಗೋಲು

ಖಾತೆಗಳಲ್ಲಿ ೪೪೦ ಕೋಟಿ ರೂಪಾಯಿ ಠೇವಣಿ !

ಕೋಲಕಾತಾ (ಬಂಗಾಳ) – ಜಾರಿ ನಿರ್ದೇಶನಾಲಯವು (‘ಇಡಿ’) ತೃಣಮೂಲ ಕಾಂಗ್ರೆಸ್‌ಗೆ ಸಂಬಂಧಿಸಿದ ಕೋಲಕಾತಾದ ೩ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಈ ಖಾತೆಗಳಲ್ಲಿ ಒಟ್ಟು ೪೪೦ ಕೋಟಿ ರೂಪಾಯಿಗಳು ಜಮೆಯಾಗಿವೆ. ತೃಣಮೂಲ ಕಾಂಗ್ರೆಸ್‌ನ ಬಂಡಾಯ ಶಾಸಕರ ಗುಂಪೊಂದು ನೀಡಿದ ದೂರಿನ ಮೇರೆಗೆ, ಪೊಲೀಸರು ಈ ಖಾತೆಗಳಿಂದ ನಡೆಯುವ ಎಲ್ಲಾ ವಹಿವಾಟುಗಳು ಮತ್ತು ಹಣ ಹಿಂಪಡೆಯುವುದನ್ನು ನಿಷೇಧಿಸಿದ್ದರು. ಈ ಬಂಡಾಯ ಗುಂಪಿನ ನೇತೃತ್ವವನ್ನು ಋತಬ್ರತ್ ಬ್ಯಾನರ್ಜಿ ವಹಿಸಿಕೊಂಡಿದ್ದಾರೆ. ಈಗ ಇಡಿ ಈ ಪ್ರಕರಣವನ್ನು ತನ್ನ ವಶಕ್ಕೆ ತೆಗೆದುಕೊಂಡು ತನಿಖೆಯ ವ್ಯಾಪ್ತಿಯನ್ನು ವಿಸ್ತರಿಸಿದೆ.

ಇಡಿಯ ಪ್ರಾಥಮಿಕ ತನಿಖೆಯ ಪ್ರಕಾರ, ೧೫೦ ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಅನುಮಾನಾಸ್ಪದ ಹಣವನ್ನು ವಿಮಾನಯಾನ ಮತ್ತು ಪ್ರವಾಸ ಸಂಸ್ಥೆಗಳ ಮೂಲಕ ಕಳುಹಿಸಲಾಗಿತ್ತು. ಈ ಬ್ಯಾಂಕ್ ಖಾತೆಗಳನ್ನು ಭ್ರಷ್ಟಾಚಾರ, ಸುಲಿಗೆ ಅಥವಾ ಸ್ಥಳೀಯ ಕಳ್ಳಸಾಗಣೆಯಿಂದ ಗಳಿಸಿದ ಹಣವನ್ನು ಅಡಗಿಸಿಡಲು ಬಳಸಲಾಗಿದೆಯೇ?, ಎಂಬ ಬಗ್ಗೆ ತನಿಖಾ ಸಂಸ್ಥೆಯು ಅತ್ಯಂತ ಆಳವಾಗಿ ತನಿಖೆ ನಡೆಸುತ್ತಿದೆ.