ಬಂಗಾಳ: ೯ ಬಾಂಗ್ಲಾದೇಶಿ ವಲಸಿಗರ ಬಂಧನ !

​ಬಾಂಗ್ಲಾದೇಶಿ ವಲಸಿಗರಿಗೆ ಆಶ್ರಯ ನೀಡುವವರು ಮತ್ತು ಸಹಾಯ ಮಾಡುವವರ ವಿರುದ್ಧವೂ ಸರಕಾರ ಕಠಿಣ ಕ್ರಮ ಕೈಗೊಳ್ಳಬೇಕು !

ಮುರ್ಶಿದಾಬಾದ್(ಬಂಗಾಳ) – ಅಕ್ರಮ ವಲಸಿಗರ ವಿರುದ್ಧ ಪೊಲೀಸರು ನಡೆಸಿದ ಕಾರ್ಯಾಚರಣೆಯಡಿಯಲ್ಲಿ ಭಗವಾನಗೋಲಾ ರೈಲ್ವೆ ನಿಲ್ದಾಣದ ಪ್ರದೇಶದಿಂದ ೯ ಬಾಂಗ್ಲಾದೇಶಿ ನಾಗರಿಕರನ್ನು ಬಂಧಿಸಲಾಗಿದೆ.

​೧. ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಬಂಧಿತರಾದ ವಲಸಿಗರು ಭಾರತದ ವಿವಿಧ ಭಾಗಗಳಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ರಹಸ್ಯ ಮಾರ್ಗದ ಮೂಲಕ ಮತ್ತೆ ಬಾಂಗ್ಲಾದೇಶಕ್ಕೆ ಮರಳುವ ಸಿದ್ಧತೆಯಲ್ಲಿದ್ದರು.

​೨. ಪೊಲೀಸರು ಎಲ್ಲಾ ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿದ್ದಾರೆ. ಎಲ್ಲರನ್ನೂ ಬಂಧಿಸಿ ಕಾನೂನು ಕ್ರಮ ಜರುಗಿಸಲಾಗುತ್ತಿದೆ.

೩.​ಈ ಬಾಂಗ್ಲಾದೇಶಿ ನಾಗರಿಕರು ಭಾರತಕ್ಕೆ ಹೇಗೆ ಬಂದರು?, ಇಲ್ಲಿ ಎಷ್ಟು ಸಮಯದಿಂದ ವಾಸಿಸುತ್ತಿದ್ದರು? ಮತ್ತು ಅವರಿಗೆ ಯಾರು ಆಶ್ರಯ ನೀಡಿದ್ದರು?, ಈ ಎಲ್ಲಾ ವಿಷಯಗಳ ಬಗ್ಗೆ ತನಿಖಾ ಸಂಸ್ಥೆಗಳು ಶೋಧ ನಡೆಸುತ್ತಿವೆ.

​೪. ಪೊಲೀಸ್ ಅಧಿಕಾರಿಗಳ ಪ್ರಕಾರ, ಈ ಇಡೀ ಪ್ರಕರಣದಲ್ಲಿ ಯಾವುದಾದರೂ ದೊಡ್ಡ ಅಕ್ರಮ ದಂಧೆ ನಡೆಸುವ ತಂಡ ಅಥವಾ ಮಾನವ ಕಳ್ಳಸಾಗಣೆ ಜಾಲ ಸಕ್ರಿಯವಾಗಿರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಇದೇ ನಿಟ್ಟಿನಲ್ಲಿ ಈ ಪ್ರಕರಣದ ತನಿಖೆ ನಡೆಯುತ್ತಿದ್ದು, ತನಿಖೆ ಪೂರ್ಣಗೊಂಡ ನಂತರ ಅಗತ್ಯಕ್ಕೆ ಅನುಗುಣವಾಗಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.