ಶ್ರೀರಾಮ ಮಂದಿರದ ಕಾಣಿಕೆಗಳ ಕಳ್ಳತನ ಪ್ರಕರಣ: ವಿಶೇಷ ತನಿಖಾ ತಂಡದ (SIT) ಪ್ರಾಥಮಿಕ ವರದಿ ಸರಕಾರಕ್ಕೆ ಸಲ್ಲಿಕೆ : Ram Mandir Donation Theft

ದೂರು ದಾಖಲಿಸಲು ಮತ್ತು ಟ್ರಸ್ಟ್‌ನ ಪುನಾರಚನೆ ಮಾಡಲು ಶಿಫಾರಸು

ಅಯೋಧ್ಯೆ (ಉತ್ತರ ಪ್ರದೇಶ) – ಶ್ರೀರಾಮ ಮಂದಿರದ ಕಾಣಿಕೆಗಳ ಕಳ್ಳತನ ಪ್ರಕರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡವು (SIT) ಮೊದಲ ಹಂತದ ತನಿಖಾ ವರದಿಯನ್ನು ರಾಜ್ಯ ಸರಕಾರಕ್ಕೆ ಸಲ್ಲಿಸಿದೆ. ಈ ವರದಿಯನ್ನು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂಜಯ ಪ್ರಸಾದ್ ಅವರಿಗೆ ಸಲ್ಲಿಸಲಾಯಿತು. ಇದು 150 ಪುಟಗಳ ಪ್ರಾಥಮಿಕ ವರದಿಯಾಗಿದ್ದು, ಇದರಲ್ಲಿ 150 ಜನರ ವಿಚಾರಣೆಯ ವಿವರಗಳಿವೆ ಎಂದು ತಂಡ ತಿಳಿಸಿದೆ. ವಿಸ್ತೃತ ವರದಿಗಾಗಿ ತಂಡವು ಹೆಚ್ಚಿನ ಸಮಯವನ್ನು ಕೋರಿದೆ.

ಈ ವರದಿಯ ಮೇಲೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನಿರ್ಧಾರ ಕೈಗೊಳ್ಳಲಿದ್ದಾರೆ. ಇದರಲ್ಲಿ ಪ್ರಕರಣ ದಾಖಲಿಸುವುದರ ಜೊತೆಗೆ, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಅನ್ನು ಪುನಾರಚಿಸುವುದು, ಮಂದಿರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಹಿರಿಯ ಅಧಿಕಾರಿಯನ್ನು ನೇಮಿಸುವುದು ಮತ್ತು ಕಳೆದ 5 ವರ್ಷಗಳ ದೇಣಿಗೆಯ ಲೆಕ್ಕಪರಿಶೋಧನೆ (Audit) ನಡೆಸುವ ಶಿಫಾರಸುಗಳನ್ನು ಮಾಡಲಾಗಿದೆ. ದೇಣಿಗೆಯಲ್ಲಿನ ಅವ್ಯವಹಾರಗಳನ್ನು ತಡೆಯಲು ಅಗತ್ಯ ಸೂಚನೆಗಳನ್ನು ನೀಡಲಾಗಿದೆ.

200 ಕೋಟಿ ರೂಪಾಯಿಗಳ ಕಳ್ಳತನ ನಡೆದಿರುವ ಶಂಕೆ!

ಕಳ್ಳತನ ಪ್ರಕರಣದಲ್ಲಿ ಲವಕುಶ್, ಅವನೀಶ್, ಅನುಕಲ್ಪ್, ಕರುಣೆ ಮತ್ತು ರಾಮ್‌ಶಂಕರ್ ಅಲಿಯಾಸ್ ಟಿನ್ನು ಎಂಬ 5 ಶಂಕಿತರ ಮಾಹಿತಿಯ ಮೇರೆಗೆ 2 ಕೋಟಿ ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, ಚಂಪತ್ ರಾಯ್ ಅವರ ಆಪ್ತರಾಗಿರುವ ಟಿನ್ನುನ ಮನೆಯಲ್ಲಿ ಚಿನ್ನ ಪತ್ತೆಯಾಗಿತ್ತು. ಪ್ರಾಥಮಿಕ ಅಂದಾಜಿನ ಪ್ರಕಾರ, ಈ ಕಳ್ಳತನವು 200 ಕೋಟಿ ರೂಪಾಯಿಗಳಿಗಿಂತ ಹೆಚ್ಚಿನ ಮೊತ್ತದ್ದಾಗಿರಬಹುದು.