ಹಿಂದೂಗಳ ಬೇಡಿಕೆಗಳನ್ನು ಸರಕಾರಕ್ಕೆ ತಲುಪಿಸಿ ನ್ಯಾಯ ಸಿಗುವಂತೆ ಪ್ರಯತ್ನಿಸುತ್ತೇನೆ! – ಡಾ. ಅನಿಲ್ ಬೋಂಡೆ, ಸಂಸದರು, ಬಿಜೆಪಿ

  • ‘ದೇವಸ್ಥಾನ ಭೂಮಿ ಸಂರಕ್ಷಣಾ ಪರಿಷತ್ತು; ದೇವಸ್ಥಾನಗಳ ಸರಕಾರೀಕರಣ ಮತ್ತು ವಕ್ಫ್ ಬೋರ್ಡ್ ಅತಿಕ್ರಮಣದ ವಿರುದ್ಧ ಹೋರಾಡುವ ಸಂಕಲ್ಪ!

  • ಟ್ರಸ್ಟಿಗಳಿಂದ ಆತ್ಮರಕ್ಷಣೆ ಮತ್ತು ಗೋಶಾಲೆಗಳ ಪ್ರಾರಂಭಕ್ಕೆ ಆಗ್ರಹ

ಎಡದಿಂದ ಶ್ರೀ. ಪ್ರದೀಪ್ ಗರ್ಗೆ, ಸಂಸದ ಡಾ. ಅನಿಲ್ ಬೋಂಡೆ, ಮಾತನಾಡುತ್ತಿರುವ ಶ್ರೀ. ಸುನಿಲ್ ಘನವಟ್, ಶ್ರೀ. ಅನೂಪ್ ಜೈಸ್ವಾಲ್ ಮತ್ತು ಶ್ರೀ. ಶ್ರೀಕಾಂತ್ ಪಿಸೋಳ್ಕರ್

ಅಮರಾವತಿ – ದೇವಸ್ಥಾನಗಳ ಭೂಮಿ ರಕ್ಷಿಸಲು ಹೋರಾಡುವಾಗ, ದೇವಸ್ಥಾನಗಳ ಸುರಕ್ಷತೆ ಕಾಪಾಡುವುದು ಕೂಡ ಅಷ್ಟೇ ಅಗತ್ಯವಾಗಿದೆ. ಈ ಬಗ್ಗೆ ಟ್ರಸ್ಟಿಗಳು (ವಿಶ್ವಸ್ತರು) ಅತ್ಯಂತ ಗಂಭೀರವಾಗಿ ಗಮನ ಹರಿಸಬೇಕು. ಪೂಜೆ-ಪುನಸ್ಕಾರಗಳ ಜೊತೆಗೆ ದೇವಸ್ಥಾನಗಳ ಮಾಧ್ಯಮದಿಂದ ಯುವ ಪೀಳಿಗೆಗಾಗಿ ಆತ್ಮರಕ್ಷಣೆ ತರಬೇತಿ, ವ್ಯಾಯಾಮ ಶಾಲೆಗಳು ಮತ್ತು ಗೋಶಾಲೆಗಳಂತಹ ಸಮಾಜೋಪಯೋಗಿ ಚಟುವಟಿಕೆಗಳು ಪ್ರಾರಂಭವಾಗಬೇಕು. ದೇವಸ್ಥಾನದ ಟ್ರಸ್ಟಿಗಳು ಕಾಲಕ್ಕೆ ತಕ್ಕಂತೆ ಸಂಘಟಿತರಾಗಿ ಪ್ರಯತ್ನಿಸುವುದು ಅತ್ಯಗತ್ಯ.

ಪ್ರಸ್ತುತ ಯಾವುದೇ ಪಕ್ಷದ ಸರಕಾರವಿದ್ದರೂ, ಆಡಳಿತದಲ್ಲಿರುವ ಕೆಲವು ಅಧಿಕಾರಿಗಳ ತಪ್ಪು ಮಾನಸಿಕತೆಯಿಂದಾಗಿ ಇಂತಹ ದಬ್ಬಾಳಿಕೆಯ ಕಾನೂನುಗಳು ಸೃಷ್ಟಿಯಾಗುತ್ತವೆ. ಜನಪ್ರತಿನಿಧಿಯಾಗಿ ನಾವು ಇದನ್ನು ಗಂಭೀರವಾಗಿ ಪರಿಗಣಿಸುತ್ತಿದ್ದು, ಹಿಂದೂಗಳ ಬೇಡಿಕೆಗಳನ್ನು ಸರಕಾರಕ್ಕೆ ತಲುಪಿಸಿ ನ್ಯಾಯ ಸಿಗುವಂತೆ ನಾನು ಪ್ರಯತ್ನಿಸುತ್ತೇನೆ ಎಂದು ಬಿಜೆಪಿಯ ಸಂಸದ ಡಾ. ಅನಿಲ್ ಬೋಂಡೆ ಭರವಸೆ ನೀಡಿದರು. ಇಲ್ಲಿ ಆಯೋಜಿಸಲಾಗಿದ್ದ ‘ದೇವಸ್ಥಾನ ಭೂಮಿ ಸಂರಕ್ಷಣಾ ಪರಿಷತ್ತಿನಲ್ಲಿ’ ಅವರು ಮಾತನಾಡುತ್ತಿದ್ದರು.

ಈ ಪರಿಷತ್ತಿನಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢ ಸಂಘಟಕರು ಹಾಗೂ ರಾಷ್ಟ್ರೀಯ ಮಂದಿರ ಮಹಾಸಂಘದ ಸಂಘಟಕರಾದ ಶ್ರೀ. ಸುನಿಲ್ ಘನವಟ್ ಸೇರಿದಂತೆ ವಿದರ್ಭದ 150 ಕ್ಕೂ ಹೆಚ್ಚು ದೇವಸ್ಥಾನಗಳ ಟ್ರಸ್ಟಿಗಳು ಉಪಸ್ಥಿತರಿದ್ದರು. ಸರಕಾರವು ‘ದೇವಸ್ಥಾನ ಇನಾಮ್ ನಿರ್ಮೂಲನಾ ಕಾಯ್ದೆ’ಯ ಕರಡನ್ನು ತಡೆಹಿಡಿದಿರುವುದು ಹಿಂದೂಗಳ ಸಂಘಟಿತ ಶಕ್ತಿಯ ವಿಜಯವಾಗಿದೆ ಮತ್ತು ‘ವಕ್ಫ್ ಬೋರ್ಡ್‌ನ ವಶದಿಂದ ದೇವಸ್ಥಾನಗಳ ಭೂಮಿಯನ್ನು ಮುಕ್ತಗೊಳಿಸುವುದೇ ನಮ್ಮ ಮುಂದಿನ ಹೋರಾಟವಾಗಿದೆ’ ಎಂಬ ಸಂಕಲ್ಪವನ್ನು ಈ ಸಂದರ್ಭದಲ್ಲಿ ಮಾಡಲಾಯಿತು.