ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲು!

ಮುಸಲ್ಮಾನರನ್ನು ಹಿಂದೂಗಳ ವಿರುದ್ಧ ಪ್ರಚೋದಿಸಿದ ಪ್ರಕರಣ

ಕೊಲಕಾತಾ (ಬಂಗಾಳ) – ರಾಜ್ಯದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ದೂರು ದಾಖಲಿಸಲಾಗಿದೆ. ಮಾರ್ಚ್ 2026 ರಲ್ಲಿ ಬ್ಯಾನರ್ಜಿ ಅವರು ಭಾಷಣವೊಂದರಲ್ಲಿ ಮುಸಲ್ಮಾನರನ್ನು ಹಿಂದೂಗಳ ವಿರುದ್ಧ ಪ್ರಚೋದಿಸಿದ್ದರು. ಮೇ 20 ರಂದು ಕೊಲಕಾತಾ ನಿವಾಸಿ ತುಷಾರ್ ಕಾಂತಿ ದಾಸ್ ಅವರು ಬ್ಯಾನರ್ಜಿ ವಿರುದ್ಧ ದೂರು ನೀಡಿದ್ದರು. ದೂರುದಾರರ ಆರೋಪದಂತೆ, ಬ್ಯಾನರ್ಜಿ ಅವರ ಭಾಷಣದಿಂದಾಗಿ ಆ ಸಮಯದಲ್ಲಿ ಚುನಾವಣೆ ನಡೆಯುತ್ತಿದ್ದ ರಾಜ್ಯದಲ್ಲಿ ಭಯ, ತಪ್ಪು ತಿಳುವಳಿಕೆ ಮತ್ತು ಉದ್ವಿಗ್ನತೆ ಉಂಟಾಗುವ ಸಾಧ್ಯತೆಯಿತ್ತು. ಈ ದೂರಿನ ಆಧಾರದ ಮೇಲೆ ಕೊಲಕಾತಾ ಪೊಲೀಸರು ಜೂನ್ 12 ರಂದು ಬ್ಯಾನರ್ಜಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಮತಾ ಬ್ಯಾನರ್ಜಿ ಏನು ಹೇಳಿದ್ದರು?

ಮಮತಾ ಬ್ಯಾನರ್ಜಿಯವರು, ‘ನಮ್ಮಿಂದಲೇ (ತೃಣಮೂಲ ಕಾಂಗ್ರೆಸ್‌ನಿಂದಲೇ) ನೀವೆಲ್ಲರೂ (ಹಿಂದೂಗಳು) ಸುರಕ್ಷಿತವಾಗಿದ್ದೀರಿ. ಒಂದು ವೇಳೆ ನಾವು ಇಲ್ಲಿ (ಅಧಿಕಾರದಲ್ಲಿ) ಇಲ್ಲದ ದಿನ ಬಂದರೆ ಮತ್ತು ಒಂದು ನಿರ್ದಿಷ್ಟ ಸಮುದಾಯ (ಮುಸಲ್ಮಾನರು) ಒಗ್ಗೂಡಿ ನಿಮಗೆ ಮುತ್ತಿಗೆ ಹಾಕಿದರೆ, ಅವರು ನಿಮ್ಮನ್ನು ಮುಗಿಸಲು ಕೇವಲ ಒಂದು ಕ್ಷಣ ಸಾಕು’ ಎಂದು ಹೇಳಿದ್ದರು.