‘ಅಗ್ನಿ-೬’ ಕ್ಷಿಪಣಿಯು ಬರೋಬ್ಬರಿ ೮ ಸಾವಿರದಿಂದ ೧೨ ಸಾವಿರ ಕಿ.ಮೀ.ವರೆಗೆ ದಾಳಿ ಮಾಡುವ ಸಾಮರ್ಥ್ಯ ಹೊಂದಿದೆ.

ಬಾಲಾಸೋರ್ (ಒಡಿಶಾ) – ಚಾಂದಿಪುರದ ‘ಇಂಟಿಗ್ರೇಟೆಡ್ ಟೆಸ್ಟ್ ರೇಂಜ್’ನಲ್ಲಿ ನಡೆಯಲಿರುವ ‘ಅಗ್ನಿ-೬’ ಕ್ಷಿಪಣಿಯ ಸಂಭಾವ್ಯ ಪರೀಕ್ಷೆಯ ಮುನ್ನ, ಸುರಕ್ಷತೆಯ ಕಾರಣಗಳಿಗಾಗಿ ಪರೀಕ್ಷಾ ಸ್ಥಳದಿಂದ ೧ ರಿಂದ ೩.೫ ಕಿ.ಮೀ. ವ್ಯಾಪ್ತಿಯಲ್ಲಿದ್ದ ಸುಮಾರು ೧೧ ಸಾವಿರದ ೪೪೨ ನಾಗರಿಕರನ್ನು ತಾತ್ಕಾಲಿಕವಾಗಿ ಸ್ಥಳಾಂತರಿಸಲಾಯಿತು. ಅವರಿಗೆ ವಿವಿಧ ಆಶ್ರಯ ಕೇಂದ್ರಗಳಲ್ಲಿ ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಆಡಳಿತ ಮಂಡಳಿಯು ಪರೀಕ್ಷಾ ಸ್ಥಳದ ಸಂಪೂರ್ಣ ಪ್ರದೇಶದಲ್ಲಿ ಬಿಗಿ ಭದ್ರತೆಯನ್ನು ನಿಯೋಜಿಸಿದೆ. ಪರೀಕ್ಷೆ ಮುಗಿದ ನಂತರ ಮತ್ತು ಸುರಕ್ಷತಾ ಅನುಮತಿ ಸಿಕ್ಕ ಬಳಿಕ ನಾಗರಿಕರಿಗೆ ಮರಳಲು ಅನುಮತಿ ನೀಡಲಾಗುವುದು. ‘ಅಗ್ನಿ-೬’ ಪರೀಕ್ಷೆಯ ಕುರಿತು ಇನ್ನೂ ಯಾವುದೇ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ‘ಫರ್ಸ್ಟ್ ಪೋಸ್ಟ್’ ಸುದ್ದಿ ಜಾಲತಾಣವು ಈ ಸುದ್ದಿಯನ್ನು ಪ್ರಸಾರ ಮಾಡಿದೆ. ಈ ಕ್ಷಿಪಣಿಯು ೮ ಸಾವಿರದಿಂದ ೧೨ ಸಾವಿರ ಕಿ.ಮೀ. ದೂರದವರೆಗೆ ದಾಳಿ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
‘ನೀಟ್’ ಮರುಪರೀಕ್ಷೆಗಾಗಿ ಕೇಂದ್ರೀಯ ಅರೆಸೇನಾ ಪಡೆ ಮತ್ತು ಕೇಂದ್ರೀಯ ಸಶಸ್ತ್ರ ಪಡೆಗಳ ನೇಮಕ ! : NEET Re-Exam
ಮುಂದಿನ ವರ್ಷದ ವೇಳೆಗೆ ಒಂದು ಅಥವಾ ಎರಡು ರಾಜ್ಯಗಳನ್ನು ಹೊರತುಪಡಿಸಿ ಇಡೀ ಈಶಾನ್ಯ ಭಾರತದಿಂದ ‘ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ’ಯನ್ನು ಹಿಂಪಡೆಯಬಹುದು! : Northeast AFSPA Exit
‘ನ್ಯೂಸ್ ಕ್ಲಿಕ್’ ಮೇಲಿನ ಕ್ರಮ ರದ್ದುಗೊಳಿಸಿದ ದೆಹಲಿ ಉಚ್ಚ ನ್ಯಾಯಾಲಯ!
ನಾಶಿಕ್: ಸಿಂಹಸ್ಥ ಕುಂಭಮೇಳದ ಧ್ವಜಸ್ತಂಭ ಶಿಲಾನ್ಯಾಸ ಪೂಜಾ ಸಮಾರಂಭ !
ಪ್ರಪಂಚ ಅಸ್ಥಿರವಾಗಿದ್ದರೂ; ಭಾರತ ಆತ್ಮವಿಶ್ವಾಸದಿಂದ ಮುನ್ನಡೆಯುತ್ತಿದೆ! – ಪ್ರಧಾನಮಂತ್ರಿ
ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿಯ ಪುಸ್ತಕದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕುರಿತು ೨೦ ಪುಟಗಳ ಪಾಠ! – ದಾದಾ ಭುಸೆ, ಶಿಕ್ಷಣ ಸಚಿವರು