ಐ.ಪಿ.ಎಲ್. ಕ್ರಿಕೆಟ್ ಪಂದ್ಯಾವಳಿಯ ಗುಜರಾತ್ ಟೈಟಾನ್ಸ್ ತಂಡದ ಆಟಗಾರರನ್ನು ಕರೆದೊಯ್ಯುತ್ತಿದ್ದ ಬಸ್ಸಿಗೆ ಬೆಂಕಿ

ಆಟಗಾರರು ಸ್ವಲ್ಪದರಲ್ಲೇ ಪಾರು!

ಕರ್ಣಾವತಿ (ಗುಜರಾತ್) – ಐ.ಪಿ.ಎಲ್. ಕ್ರಿಕೆಟ್ ಪಂದ್ಯಾವಳಿಯ ಅಂತಿಮ ಪಂದ್ಯದಲ್ಲಿ ಸೋಲನುಭವಿಸಿದ ಗುಜರಾತ್ ಟೈಟಾನ್ಸ್ ತಂಡದ ಆಟಗಾರರನ್ನು ಕರೆದೊಯ್ಯುತ್ತಿದ್ದ ಬಸ್ಸಿಗೆ ಬೆಂಕಿ ಹೊತ್ತಿಕೊಂಡಿತು. ಮೇ 31 ರ ರಾತ್ರಿ ಈ ಘಟನೆ ನಡೆದಿದೆ. ಈ ಘಟನೆಯಿಂದ ಆಟಗಾರರು ಸ್ವಲ್ಪದರಲ್ಲೇ ಪಾರಾಗಿದ್ದಾರೆ.

ಕರ್ಣಾವತಿಯ ನರೇಂದ್ರ ಮೋದಿ ಮೈದಾನದಲ್ಲಿ ಐ.ಪಿ.ಎಲ್. ನ ಅಂತಿಮ ಪಂದ್ಯ ಮುಗಿದ ನಂತರ ಗುಜರಾತ್ ಟೈಟಾನ್ಸ್ ತಂಡದ ಆಟಗಾರರು ಬಸ್ಸಿನಲ್ಲಿ ನಿಗದಿತ ಹೋಟೆಲ್ ಗೆ ಹೋಗುತ್ತಿದ್ದರು. ಬಸ್ಸಿನಲ್ಲಿ ಉಂಟಾದ ವಿದ್ಯುತ್ ದೋಷದಿಂದಾಗಿ ಏಕಾಏಕಿ ಶಾರ್ಟ್ ಸರ್ಕ್ಯೂಟ್ ಉಂಟಾಗಿ ನೋಡನೋಡುತ್ತಿದ್ದಂತೆ ವಾಹನದೊಳಗೆ ಭಾರಿ ಪ್ರಮಾಣದಲ್ಲಿ ಹೊಗೆ ಆವರಿಸಿತು. ಹೊಗೆ ಕಾಣಿಸುತ್ತಿದ್ದಂತೆ ಬಸ್ ಚಾಲಕ ತಕ್ಷಣ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಎಲ್ಲಾ ಆಟಗಾರರನ್ನು ಸುರಕ್ಷಿತವಾಗಿ ಹೊರಗೆ ಕರೆತಂದರು. ತದನಂತರ ತಕ್ಷಣವೇ ಮತ್ತೊಂದು ಬಸ್ಸಿನ ವ್ಯವಸ್ಥೆ ಮಾಡಿ ಆಟಗಾರರನ್ನು ಹೋಟೆಲ್ ಕಡೆಗೆ ಕಳುಹಿಸಿಕೊಡಲಾಯಿತು.