'ಶ್ರೀ ದತ್ತಾತ್ರೇಯ ಸಂಸ್ಥಾನ, ನಾಯಗಾಂವ್'ನ ಆಸ್ತಿಯ ಕಾನೂನಾತ್ಮಕ ವಿಜಯ!
ಮಹಾರಾಷ್ಟ್ರ ಮಂದಿರ ಮಹಾಸಂಘದ ಪ್ರಯತ್ನಗಳಿಗೆ ಯಶಸ್ಸು!

ಅಮರಾವತಿ – ಅಚಲಪುರ ತಾಲೂಕಿನ ನಾಯಗಾಂವ್ನ ಶ್ರೀ ದತ್ತಾತ್ರೇಯ ಸಂಸ್ಥಾನದ ಮಾಲೀಕತ್ವದ ಮೌಜಾ ನಾಯಗಾಂವ್ನಲ್ಲಿರುವ ಕೃಷಿ ಭೂಮಿಯನ್ನು ಒಕ್ಕಲು ಕಾಯ್ದೆಯಡಿ ಅಕ್ರಮವಾಗಿ ಖರೀದಿಯಾಗಿ ಸ್ವಾಧೀನದಾರರಿಗೆ ನೀಡುವಂತೆ ಅಚಲಪುರ ತಹಸೀಲ್ದಾರ್ ನೀಡಿದ್ದ ಆದೇಶವನ್ನು ಉಪವಿಭಾಗಾಧಿಕಾರಿ, ಅಚಲಪುರ ನ್ಯಾಯಾಲಯ ವಜಾಗೊಳಿಸಿದೆ. ಉಪವಿಭಾಗಾಧಿಕಾರಿ ಬಳವಂತ ಅರಖರಾವ್ ಅವರು ತಹಸೀಲ್ದಾರ್ ಆದೇಶವನ್ನು ರದ್ದುಗೊಳಿಸಿ ಸಂಸ್ಥಾನದ ಪರವಾಗಿ ಅಂತಿಮ ತೀರ್ಪು ನೀಡಿದ್ದಾರೆ.
1. ನಾಯಗಾಂವ್ನಲ್ಲಿರುವ ಕೃಷಿ ಭೂಮಿಯು ಐತಿಹಾಸಿಕ ಮತ್ತು ಧಾರ್ಮಿಕ ದೃಷ್ಟಿಯಿಂದ ಮಹತ್ವದ ಶ್ರೀ ದತ್ತಾತ್ರೇಯ ಸಂಸ್ಥಾನದ ಒಡೆತನದಲ್ಲಿದೆ. ಅದರ ಮೇಲೆ ಪ್ರತಿವಾದಿಗಳಾದ ಶಿವಚರಣ್ ನಾಗೋರಾವ್ ಜಾವರ್ಕರ್ ಮತ್ತು ಚಕ್ರಧರ್ ನಾಗೋರಾವ್ ಜಾವರ್ಕರ್ ಅವರು ಒಕ್ಕಲು ಹಕ್ಕು ಪ್ರತಿಪಾದಿಸಿ ಒಕ್ಕಲು ಕಾಯ್ದೆಯಡಿ ಖರೀದಿಸಲು ಅಚಲಪುರ ತಹಸೀಲ್ದಾರ್ಗೆ ಅರ್ಜಿ ಸಲ್ಲಿಸಿದ್ದರು.
2. 8 ಸೆಪ್ಟೆಂಬರ್ 1967 ರಂದು ಅಂದಿನ ತಹಸೀಲ್ದಾರ್ ಅವರೇ ಒಕ್ಕಲು ನಾಗೋರಾವ್ ಚಂದ್ರಭಾನ್ ಜಾವರ್ಕರ್ ಅವರ ಕಡ್ಡಾಯ ಖರೀದಿಯ ಅರ್ಜಿಯನ್ನು ತಿರಸ್ಕರಿಸಿದ್ದರು. ಅದನ್ನು ಹಿರಿಯ ನ್ಯಾಯಾಲಯದಲ್ಲಿ ಪ್ರಶ್ನಿಸದ ಕಾರಣ ಅವರ ಒಕ್ಕಲು ಹಕ್ಕು ಆಗಲೇ ಕೊನೆಗೊಂಡಿತ್ತು.
3. ಅಚಲಪುರದ ಹಾಲಿ ತಹಸೀಲ್ದಾರ್ ಅವರು ಗಂಭೀರ ಕಾನೂನು ಲೋಪಗಳನ್ನು ಕಡೆಗಣಿಸಿ 13 ಏಪ್ರಿಲ್ 2023 ರಂದು ಪ್ರತಿವಾದಿಗಳ ಪರವಾಗಿ (ನಾಗೋರಾವ್ ಚಂದ್ರಭಾನ್ ಜಾವರ್ಕರ್ ಅವರ ಮಕ್ಕಳಾದ ಶಿವಚರಣ್ ಮತ್ತು ಚಕ್ರಧರ್ ಅವರ ಪರವಾಗಿ) ಖರೀದಿ ಪ್ರಮಾಣಪತ್ರ ನೀಡುವ ಆದೇಶವನ್ನು ಹೊರಡಿಸಿದ್ದರು.
4. ಗಂಭೀರವಾದ ವಿಷಯವೆಂದರೆ, ಮೂಲ ಪ್ರಕರಣದಲ್ಲಿ ಅಚಲಪುರದ ಹಾಲಿ ತಹಸೀಲ್ದಾರ್ ಅವರು ಸಂಸ್ಥಾನದ ಮೃತ ಮುಖ್ಯ ಟ್ರಸ್ಟಿ ಉತ್ತಮರಾವ್ ಪಾಂಡುಜಿ ಜುನಘರೆ ಅವರನ್ನು ಪ್ರತಿವಾದಿಯನ್ನಾಗಿ ಮಾಡಿ ಅವರ ವಿರುದ್ಧ ಮೊಕದ್ದಮೆ ನಡೆಸಿದರು. ಇದು ಕಾನೂನು ತತ್ವಗಳ ಉಲ್ಲಂಘನೆಯಾಗಿತ್ತು.
5. ತಲಾಠಿಯವರ ಅಧಿಕೃತ ವರದಿಯ ಪ್ರಕಾರ, ಜಮೀನಿನ 7/12 ನಲ್ಲಿ ಎಲ್ಲಿಯೂ ಸ್ವಾಧೀನದಾರರ ಹೆಸರನ್ನು ಒಕ್ಕಲು ಎಂದು ನಮೂದಿಸಿರಲಿಲ್ಲ.
6. ಸಂಸ್ಥಾನದ ಟ್ರಸ್ಟಿಗಳು ಮುಂಬಯಿ ಗೇಣಿದಾರಿಕೆ ಮತ್ತು ಕೃಷಿ ಭೂಮಿ (ವಿದರ್ಭ ಪ್ರದೇಶ) ಕಾಯ್ದೆ 1958ರ ಸೆಕ್ಷನ್ 107ರ ಅಡಿಯಲ್ಲಿ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದರು. ತಹಸೀಲ್ದಾರ್ ಅವರ ಕಾನೂನುಬಾಹಿರ ಕೃತ್ಯದ ವಿರುದ್ಧ ಮಹಾರಾಷ್ಟ್ರ ಮಂದಿರ ಮಹಾಸಂಘದ ರಾಜ್ಯ ಪದಾಧಿಕಾರಿ ಶ್ರೀ. ಅನೂಪ್ ಜೈಸ್ವಾಲ್ ಅವರು ಇದಕ್ಕಾಗಿ ಮುಂದಾಳತ್ವ ವಹಿಸಿದರು. ಅವರು ಸಂಸ್ಥಾನದ ಟ್ರಸ್ಟಿಗಳೊಂದಿಗೆ ಸಹಕರಿಸಿ ಉಪವಿಭಾಗಾಧಿಕಾರಿಗಳ ಬಳಿ ಬೆನ್ನಟ್ಟಿ ಮನವಿಯ ಮೂಲಕ ಸಂಸ್ಥಾನದ ಪರವಾಗಿ ಬಲವಾದ ವಾದವನ್ನು ಮಂಡಿಸಿದರು.
7. ಉಭಯ ಪಕ್ಷಗಳ ವಾದಗಳು ಮತ್ತು ಸುಪ್ರೀಂ ಕೋರ್ಟ್ನ ವಿವಿಧ ತೀರ್ಪುಗಳನ್ನು, ಉದಾಹರಣೆಗೆ ಎ.ಎ. ಗೋಪಾಲಕೃಷ್ಣನ್ ವಿರುದ್ಧ ಕೊಚ್ಚಿನ್ ದೇವಸ್ವಂ ಬೋರ್ಡ್ ಪ್ರಕರಣವನ್ನು ಆಧರಿಸಿ ಉಪವಿಭಾಗಾಧಿಕಾರಿ ಬಳವಂತ ಅರಖರಾವ್ ಅವರು, ಪ್ರತಿವಾದಿಗಳು ಒಕ್ಕಲು ಅಲ್ಲದಿದ್ದರೂ ಅವರ ಹೆಸರಿನಲ್ಲಿ ತಹಸೀಲ್ದಾರ್ ನೀಡಿದ ಆದೇಶವು ಕಾನೂನುಬಾಹಿರವಾಗಿದೆ ಮತ್ತು ರದ್ದುಗೊಳಿಸಲು ಅರ್ಹವಾಗಿದೆ ಎಂದು ತೀರ್ಮಾನಿಸಿದರು. ಅದರಂತೆ ಮೇ 4 ರಂದು ಮೂಲ ಆದೇಶ ಮತ್ತು ಮೇ 13 ರಂದು ತಿದ್ದುಪಡಿಗಳೊಂದಿಗೆ ಪರಿಷ್ಕೃತ ಆದೇಶವನ್ನು ನೀಡುವ ಮೂಲಕ ತಹಸೀಲ್ದಾರ್ ಅವರ ವಿವಾದಾತ್ಮಕ ಆದೇಶವನ್ನು ನ್ಯಾಯಾಲಯ ರದ್ದುಪಡಿಸಿತು.
8. ಈ ಕಾನೂನು ಪ್ರಕ್ರಿಯೆಯಲ್ಲಿ ಮತ್ತು ನಿರ್ಣಾಯಕ ವಿಜಯದಲ್ಲಿ ಮಂದಿರ ಮಹಾಸಂಘದ ಶ್ರೀ. ಅನೂಪ್ ಜೈಸ್ವಾಲ್ ಅವರೊಂದಿಗೆ ಸಂಸ್ಥಾನದ ಪಂಚ/ಟ್ರಸ್ಟಿಗಳಾದ ಸರ್ವಶ್ರೀ ದೀಪಕ್ ಜಾವರ್ಕರ್, ಅವಿನಾಶ್ ಜುನಘರೆ, ಆಶಿಶ್ ಜಾವರ್ಕರ್, ಸುರೇಂದ್ರ ಪವಾರ್ ಮತ್ತು ಶ್ರೀಕಾಂತ್ ಜುನಘರೆ ಅವರು ಹಗಲಿರುಳು ಶ್ರಮಿಸಿ ಕೊಡುಗೆ ನೀಡಿದ್ದಾರೆ. ದೇವಸ್ಥಾನದ ಆಸ್ತಿ ಸುರಕ್ಷಿತವಾಗಿ ಉಳಿದಿರುವುದಕ್ಕಾಗಿ ಅಚಲಪುರ ಪರಿಸರದಲ್ಲಿ ಮಹಾರಾಷ್ಟ್ರ ಮಂದಿರ ಮಹಾಸಂಘ ಮತ್ತು ಟ್ರಸ್ಟಿಗಳ ಕಾರ್ಯವನ್ನು ಪ್ರಶಂಸಿಸಲಾಗುತ್ತಿದೆ.
ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!
ಬೆಂಗಳೂರಿನ 97 ಲಕ್ಷ ಮತದಾರರಲ್ಲಿ 3.5–4 ಲಕ್ಷ ಮತದಾರರು ಅಸಿಂಧು ಮತದಾರರಾಗಿರಬಹುದು!”
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!
ದೆಹಲಿಯ ಹೋಟೆಲ್ ನಲ್ಲಿ ಭೀಕರ ಅಗ್ನಿ ದುರಂತ: 21 ಜನರ ಸಾವು