​ಬೆನ್ನಟ್ಟಿದ ಪೊಲೀಸರ ಮೇಲೆ ದರೋಡೆಕೋರರಿಂದ ಕಲ್ಲು ತೂರಾಟ!

​ನಾಗಪುರ – ಸಮೃದ್ಧಿ ಮಹಾಮಾರ್ಗದಲ್ಲಿ ಪ್ರಯಾಣಿಕರನ್ನು ಲೂಟಿ ಮಾಡಿ, ಡೀಸೆಲ್ ಕಳ್ಳತನ ಮಾಡುತ್ತಿದ್ದ ಗ್ಯಾಂಗನ್ನು ಪೊಲೀಸರು ಬೆನ್ನಟ್ಟಿ ಬಯಲಿಗೆ ತಂದರು. ಪೊಲೀಸರು ಒಬ್ಬ ದರೋಡೆಕೋರನನ್ನು ಬಂಧಿಸಿದ್ದಾರೆ. ಅಪರಾಧಕ್ಕೆ ಬಳಸಿದ ನಂಬರ್ ಪ್ಲೇಟ್ ಇಲ್ಲದ ಕಾರು, ಡೀಸೆಲ್ ಕ್ಯಾನ್‌ಗಳು ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವೇಳೆ ಪೊಲೀಸರು ಬೆನ್ನಟ್ಟುತ್ತಿದ್ದಾಗ ದರೋಡೆಕೋರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದರು. ಬಂಧಿತ ಆರೋಪಿಯ ಹೆಸರು ಅಮೋಲ್ ನಾನಾ ವೈದ್ಯ (ವಯಸ್ಸು ೨೦ ವರ್ಷ) ಎಂದಿದೆ. ಈತನಿಗೆ ಕೋಪರಗಾಂವ್ ನ್ಯಾಯಾಲಯವು ೫ ದಿನಗಳ ಪೊಲೀಸ್ ಕಸ್ಟಡಿ ವಿಧಿಸಿದೆ.

ಸಂಪಾದಕೀಯ ನಿಲುವು

ಅಪರಾಧಿಗಳು ಪೊಲೀಸರ ಮೇಲೆಯೇ ಕಲ್ಲು ತೂರಾಟ ನಡೆಸುತ್ತಾರೆ ಎಂದರೆ, ಪೊಲೀಸರ ಭಯ ಅಥವಾ ಹಿಡಿತವಿಲ್ಲ ಎಂದೇ ಅರ್ಥ!