‘ಹೊಸ ಸಚಿವ ಸಂಪುಟದಲ್ಲಿ ಮುಸ್ಲಿಮರಿಗೆ ಕನಿಷ್ಠ ೩ ಹುದ್ದೆಗಳನ್ನು ನೀಡಬೇಕಂತೆ !’

ರಾಜ್ಯದಲ್ಲಿನ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಇವರ ಆಗ್ರಹ

ಮೈಸೂರು – ‘ಹೊಸ ಸಚಿವ ಸಂಪುಟದಲ್ಲಿ ಮುಸ್ಲಿಂ ಸಮುದಾಯಕ್ಕೆ ಕನಿಷ್ಠ ೩ ಹುದ್ದೆಗಳನ್ನು ನೀಡಬೇಕು’ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಆಗ್ರಹಿಸಿದ್ದಾರೆ. ಇಲ್ಲಿ ಮೇ ೧೮ ರಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಹಿಂದಿನ ಕಾಂಗ್ರೆಸ್ ಸರಕಾರಗಳಲ್ಲಿ ನಮ್ಮ ಸಮುದಾಯಕ್ಕೆ ಕನಿಷ್ಠ ೩ ಹುದ್ದೆಗಳನ್ನು ನೀಡಲಾಗುತ್ತಿತ್ತು. ಆದರೆ ೨೦೨೩ ರಿಂದ ೨೦೨೬ ರ ಅವಧಿಯಲ್ಲಿ ಇಬ್ಬರಿಗೆ ಮಾತ್ರ ಅವಕಾಶ ಸಿಕ್ಕಿದೆ. ಹಾಗಾಗಿ ಮತ್ತೊಬ್ಬರಿಗೆ ಅವಕಾಶ ನೀಡಬೇಕು” ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿರುವುದರಿಂದ, ಸಚಿವ ಸಂಪುಟ ಪುನರ್ರಚನೆಯ ಬದಲಿಗೆ ಹೊಸದಾಗಿ ಸಂಪುಟವನ್ನು ರಚಿಸಲಾಗುತ್ತಿದೆ. ನಾನು ಕೂಡ ಈ ಹುದ್ದೆಯ ಆಕಾಂಕ್ಷಿಯಾಗಿದ್ದೇನೆ ಎಂದು ಶಾಸಕ ಸೇಠ್ ಹೇಳಿದರು.

ಸಂಪಾದಕೀಯ ನಿಲುವು

ಈ ರೀತಿಯ ಬೇಡಿಕೆಯನ್ನು ಯಾವುದಾದರೂ ಹಿಂದೂ ಶಾಸಕರು ಮಾಡಿದ್ದರೆ, ಪ್ರಗತಿ(ಅಧೋಗತಿ)ಪರ ಗುಂಪುಗಳು ಮತ್ತು ಅಮೆರಿಕದಿಂದ ಆಸ್ಟ್ರೇಲಿಯಾದವರೆಗಿನ ಮಾಧ್ಯಮಗಳು ಹಿಂದೂ ವಿರೋಧಿ ವಿಷವನ್ನು ಕಾರುತ್ತಿದ್ದವು !