ಉಲ್ವೆ (ರಾಯಗಡ ಜಿಲ್ಲೆ) ಯಲ್ಲಿನ ಅಕ್ರಮ ಮಸೀದಿಯನ್ನು ಆಡಳಿತವು ಕೆಡವಿತು !

ಮಸೀದಿಯನ್ನು ಕೆಡವಿದ ನಂತರ ಉಪಸ್ಥಿತರಿದ್ದವರಿಂದ ಜೈ ಶ್ರೀರಾಮ್ ಘೋಷಣೆ !

ಉಲ್ವೆ (ರಾಯಗಡ ಜಿಲ್ಲೆ) – ಇಲ್ಲಿನ ಸೆಕ್ಟರ್ 19 ರಲ್ಲಿದ್ದ ಸರಕಾರಿ ಜಾಗದ ಮೇಲಿನ ಅಕ್ರಮ ಮಸೀದಿಯ ಮೇಲೆ ಸಿಡ್ಕೋ ಆಡಳಿತವು ಕ್ರಮ ಕೈಗೊಂಡು ಅದನ್ನು ಕೆಡವಿತು. ಮೇ 27 ರ ರಾತ್ರಿ ಆಡಳಿತವು ತ್ವರಿತ ಕಾರ್ಯಾಚರಣೆ ನಡೆಸಿ ಸಂಪೂರ್ಣ ಕಟ್ಟಡವನ್ನು ನೆಲಸಮ ಮಾಡಿತು. ಮುಂಬಯಿ ಹೈಕೋರ್ಟ್ ಒತ್ತುವರಿದಾರರ ಅರ್ಜಿಯನ್ನು ವಜಾಗೊಳಿಸಿದ ನಂತರ ಅವರು ಕಾನೂನಿನ ಹಾದಿಯಲ್ಲಿ ನುಣುಚಿಕೊಳ್ಳುವ ದಾರಿಗಳನ್ನು ಹುಡುಕುತ್ತಿದ್ದರು. ಅದಕ್ಕೂ ಮುನ್ನವೇ ಸಿಡ್ಕೋ ಆಡಳಿತವು ಮೇಲಿನ ಕ್ರಮವನ್ನು ಕೈಗೊಂಡಿತು.

ಬುಲ್ಡೋಜರ್ ಮೂಲಕ ಕಾರ್ಯಾಚರಣೆಯಾದ ನಂತರ ಉಪಸ್ಥಿತರಿದ್ದವರು ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುತ್ತಾ ಆವರಣದಲ್ಲಿ ಸಂಭ್ರಮಾಚರಣೆ ಮಾಡಿದರು. ‘ಇದು ಸತ್ಯದ ಜಯ’, ಎಂಬ ಭಾವನೆಯನ್ನು ಈ ಸಮಯದಲ್ಲಿ ಭಾಗವಹಿಸಿದವರು ವ್ಯಕ್ತಪಡಿಸಿದರು.

ಸಂಪಾದಕೀಯ ನಿಲುವು

  • ಅಕ್ರಮ ಮಸೀದಿಗಳನ್ನು ನಿರ್ಮಿಸಲೇಬಾರದು, ಇದಕ್ಕಾಗಿ ಆಡಳಿತವು ಪ್ರಯತ್ನಗಳನ್ನು ಮಾಡಬೇಕು !
  • ಸರಕಾರಿ ಜಾಗಗಳಲ್ಲಿ ಒತ್ತುವರಿ ಮಾಡುವ ಧೈರ್ಯ ಬರಬಾರದು, ಅಂತಹ ಭಯವನ್ನು ನಿರ್ಮಾಣ ಮಾಡಬೇಕು !