ಗೋರೆಗಾಂವ್‌ ಕಟ್ಟಡದಲ್ಲಿ ಮೇಕೆಯ ಬಲಿ ರದ್ದು !

​ಮುಂಬಯಿ ಮಹಾನಗರ ಪಾಲಿಕೆಯ ನಿರ್ಣಯ !

ಮುಂಬಯಿ – ಗೋರೆಗಾಂವ್‌ನಲ್ಲಿನ ‘ಸ್ಯಾಟಲೈಟ್ ಗಾರ್ಡನ್ಸ್ ಫೇಸ್ ೨’ ಕಟ್ಟಡದಲ್ಲಿ ಮೇಕೆಗಳ ಬಲಿ ನೀಡಲು ನೀಡಲಾಗಿದ್ದ ಅನುಮತಿಯನ್ನು ಮುಂಬಯಿ ಮಹಾನಗರ ಪಾಲಿಕೆಯು ರದ್ದುಗೊಳಿಸಿದೆ. ಈ ಕುರಿತು ದಿಂಡೋಶಿ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಮಹೇಂದ್ರ ಶಿಂದೆ ಮಾತನಾಡಿ, ‘‘ಕಟ್ಟಡದ ಆವರಣದಲ್ಲಿ ಬಲಿ ನೀಡುವುದನ್ನು ನಿಷೇಧಿಸಲಾಗಿದೆ. ಅಲ್ಲಿರುವ ಮೇಕೆಗಳನ್ನು ತೆರವುಗೊಳಿಸಲು ಆದೇಶಿಸಲಾಗಿದೆ’’ ಎಂದು ಹೇಳಿದ್ದಾರೆ.

​ದಿಂಡೋಶಿ ಪ್ರದೇಶದ ಆಜಾದ್ ನಗರ ಡಿ ೩ ಕಟ್ಟಡದಲ್ಲಿ ಪಾಲಿಕೆಯು ಮೊದಲು ಬಲಿ ನೀಡಲು ಅನುಮತಿ ನೀಡಿತ್ತು; ಆದರೆ ಈಗ ಅದನ್ನು ಹಿಂಪಡೆದಿದೆ. ಕಟ್ಟಡದಿಂದ ಒಂದು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾಂಸದ ಅಂಗಡಿ ಇರುವುದರಿಂದ ಈ ಅನುಮತಿಯನ್ನು ರದ್ದುಗೊಳಿಸಲಾಗಿದೆ.

ಸಂಪಾದಕೀಯ ನಿಲುವು

ವಸತಿ ಕಟ್ಟಡಗಳನ್ನು ಪ್ರಾಣಿ ವಧಾಗೃಹಗಳನ್ನಾಗಿ ಮಾಡಲು ಹೊರಟಿರುವ ಮುಸ್ಲಿಮರ ವಿರುದ್ಧ ಸಕಾಲದಲ್ಲಿ ಕಠಿಣ ಕ್ರಮ ಕೈಗೊಳ್ಳಬೇಕು !