ಕಸಾಯಿಖಾನೆಗೆ ತೆಗೆದುಕೊಂಡು ಹೋಗಲು ಕೊಟ್ಟಿಗೆಯಲ್ಲಿ ಕೂಡಿಹಾಕಿದ್ದ ೫೦ ಕ್ಕೂ ಹೆಚ್ಚು ಹಸುಗಳ ರಕ್ಷಣೆ!

ಬಕ್ರೀದ್ ಹಬ್ಬದಂದು ಗೋಹತ್ಯೆ ಮಾಡಲು ಇಡಲಾಗಿತ್ತು ಎಂದು ಹಿಂದೂ ಸಂಘಟನೆಗಳ ಆರೋಪ

ಬಳ್ಳಾರಿ – ಕಸಾಯಿಖಾನೆಗೆ ತೆಗೆದುಕೊಂಡು ಹೋಗಲು ಇಲ್ಲಿನ ಗೋಲ್‌ಬಡಿ ರಸ್ತೆಯ ಕೊಟ್ಟಿಗೆಯೊಂದರಲ್ಲಿ ಕೂಡಿಹಾಕಲಾಗಿದ್ದ ೫೦ ಕ್ಕೂ ಹೆಚ್ಚು ಹಸುಗಳನ್ನು ಇತ್ತೀಚೆಗೆ ರಕ್ಷಿಸಲಾಗಿದೆ. ಈ ಹಸುಗಳನ್ನು ಬೇರೆಡೆಯಿಂದ ಖರೀದಿಸಿ ತರಲಾಗಿತ್ತು. ಹಿಂದೂ ಸಂಘಟನೆಯ ದೂರಿನ ಮೇರೆಗೆ ಕೌಲ್ ಬಜಾರ್ ಪೊಲೀಸರು ದಾಳಿ ನಡೆಸಿ ಹಸುಗಳನ್ನು ರಕ್ಷಿಸಿದ್ದಾರೆ.

ಬಕ್ರೀದ್ ನಿಮಿತ್ತ ಈ ಹಸುಗಳನ್ನು ಕೂಡಿಹಾಕಲಾಗಿತ್ತು, ಎಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಈ ಹಸುಗಳನ್ನು ಗೋಶಾಲೆಗೆ ಕಳುಹಿಸಿಕೊಡುವುದಾಗಿ ಪೊಲೀಸರು ತಿಳಿಸಿದ್ದಾರೆ.