ಮುಂಬಯಿನಲ್ಲಿ ಒಂದೂವರೆ ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟ ಶಿಕ್ಷಣ ಇಲಾಖೆಯ ಹಿರಿಯ ಗುಮಾಸ್ತನ ಬಂಧನ!

ಮುಂಬಯಿ – ಇಲ್ಲಿನ ಹೆಸರಾಂತ ಶಿಕ್ಷಣ ಸಂಸ್ಥೆಯೊಂದರ ಪದವಿ ಪೂರ್ವ ಕಾಲೇಜಿನ (ಜೂನಿಯರ್ ಕಾಲೇಜ್) ತರಗತಿಗಳಿಗೆ ಮಂಜೂರಾತಿ ನೀಡಲು ಶಿಕ್ಷಣ ಉಪನಿರ್ದೇಶಕರ ಕಚೇರಿಯ ಹಿರಿಯ ಗುಮಾಸ್ತ ರಾಹುಲ್ ಶಿಂದೆ ಎಂಬಾತ ಒಂದೂವರೆ ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದನು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರ ನಿರೋಧಕ ದಳವು (ACB) ಆತನನ್ನು ಬಂಧಿಸಿದೆ.

ಎಲ್ಲಾ ನಿಯಮಗಳನ್ನು ಪಾಲಿಸಿದ್ದರೂ ಸಹ, ಹಿರಿಯ ಗುಮಾಸ್ತ ರಾಹುಲ್ ಶಿಂದೆ ತರಗತಿಗಳ ಮಂಜೂರಾತಿಯ ಕಡತವನ್ನು (ಫೈಲ್) ಮುಂದುವರಿಸದೆ ಬಾಕಿ ಉಳಿಸಿಕೊಂಡಿದ್ದನು. ನಿಯಮಾನುಸಾರ ಕೆಲಸ ಆಗಬೇಕಿದ್ದರೂ ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ, ದೂರುದಾರರು ಲಂಚ ನೀಡದೆ ಭ್ರಷ್ಟಾಚಾರ ನಿರೋಧಕ ದಳಕ್ಕೆ ದೂರು ನೀಡಿದ್ದರು. ದೂರು ಬಂದ ತಕ್ಷಣವೇ ಇಲಾಖೆಯ ಅಧಿಕಾರಿಗಳು ಬಲೆ ಬೀಸಿದ್ದರು. ಶಿಂದೆ ಲಂಚದ ಹಣವನ್ನು ಸ್ವೀಕರಿಸುತ್ತಿದ್ದಂತೆ ಆತನನ್ನು ರೆಡ್‌ಹ್ಯಾಂಡ್ ಆಗಿ ಹಿಡಿಯಲಾಯಿತು. ಈ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಸಂಪಾದಕೀಯ ನಿಲುವು

ಶಿಕ್ಷಣ ಕ್ಷೇತ್ರಕ್ಕೂ ತಗುಲಿದ ಭ್ರಷ್ಟಾಚಾರದ ಹುಳ! ಇಂತಹ ಲಂಚಕೋರರನ್ನು ಕೆಲಸದಿಂದ ವಜಾಗೊಳಿಸಿ, ಅವರಿಂದ ಲಂಚದ ಹಣವನ್ನು ಬಡ್ಡಿ ಸಮೇತ ವಸೂಲಿ ಮಾಡಬೇಕು!