ಮುಸ್ಲಿಂ ಧರ್ಮ ಸ್ವೀಕರಿಸಿದ ಬಳಿಕ ತನ್ನ ಹೆತ್ತ ತಾಯಿಯನ್ನೇ ‘ಪಕ್ಕದ ಮನೆಯ ಮಹಿಳೆ’ ಎಂದು ಹೇಳಿದ ಯುವತಿಯನ್ನು ಕೊಂಡಾಡಿದ ಸಚಿವರು !

ಉಡುಪಿ – ತನ್ನ ಹೆತ್ತ ತಾಯಿಯನ್ನೇ ‘ಪಕ್ಕದ ಮನೆಯ ಮಹಿಳೆ’ ಎಂದು ಹೇಳಿ ಸಮಾಜದ ದಾರಿ ತಪ್ಪಿಸುವ ಹಿಜಾಬ್ ಧರಿಸಿದ ಯುವತಿ ಮತ್ತು ಬುರ್ಖಾ ಧರಿಸಿದ ಮಹಿಳೆಯಿಂದ ಬಿಜೆಪಿ ಸಹೋದರತ್ವವನ್ನು ಕಲಿಯುವ ಅಗತ್ಯವಿಲ್ಲ ಎಂದು ಬಿಜೆಪಿ ಮಹಿಳಾ ಮೋರ್ಚಾ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.
ಏನಿದು ಪ್ರಕರಣ?
ಜಿಲ್ಲಾ ಉಸ್ತುವಾರಿ ಸಚಿವರ ಬಳಿ ಹಿಂದೂ ಮಹಿಳೆಯೊಬ್ಬರನ್ನು ಕರೆದುಕೊಂಡು ಬಂದ ಹಿಜಾಬ್ ಧರಿಸಿದ ಯುವತಿ ಮತ್ತು ಬುರ್ಖಾ ಧರಿಸಿದ ಮಹಿಳೆ, ‘ನಾವು ಈ ಹಿಂದೂ ಮಹಿಳೆಯ ನೆರೆಹೊರೆಯಲ್ಲಿ ವಾಸಿಸುತ್ತಿದ್ದೇವೆ’ ಎಂದು ಹೇಳಿ, ಈ ಬಡ ಮಹಿಳೆಗೆ ಮನೆಗಾಗಿ ಜಾಗ ನೀಡುವಂತೆ ವಿನಂತಿಸಿದ್ದರು. ಈ ಘಟನೆಯಲ್ಲಿ ಸಚಿವರನ್ನು ಭೇಟಿ ಮಾಡಲು ಕರೆತಂದಿದ್ದ ಗಿರಿಜಾ ಶೆಟ್ಟಿಗಾರ್ ಎಂಬ ಬಡ ಮಹಿಳೆಯನ್ನು, ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡಿದ್ದ ಅವರ ಸ್ವಂತ ಮಗಳೇ ಅಲ್ಲಿಗೆ ಕರೆತಂದಿದ್ದಳು. ಆದರೆ ಸಚಿವರ ಮುಂದೆ ಆಕೆ ‘ನಾನು ಈ ಹಿಂದೂ ಮಹಿಳೆಯ ನೆರೆಹೊರೆಯವಳು’ ಎಂದು ಸುಳ್ಳು ಹೇಳಿ ಸಚಿವರನ್ನೇ ದಾರಿ ತಪ್ಪಿಸಿದ್ದಾಳೆ. ಲಕ್ಷ್ಮಿ ಹೆಬ್ಬಾಳ್ಕರ್ ಅವರು ಯಾವುದೇ ಸಾಧಕ-ಬಾಧಕಗಳನ್ನು ಯೋಚಿಸದೆ ಮಾಧ್ಯಮಗಳ ಮುಂದೆ ಉಡುಪಿಯ ಬಿಜೆಪಿ ನಾಯಕರಿಗೆ ಸೌಹಾರ್ದತೆಯ ಭಾಷಣ ಬಿಗಿದು ತಾವೇ ನಗೆಪಾಟಲಿಗೀಡಾಗಿದ್ದಾರೆ.
ಉಡುಪಿ ನಗರ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ನೀತಾ ಪ್ರಭು ಮಾತನಾಡಿ, “ಇಲ್ಲಿಯವರೆಗೆ ಶಾಲೆ ಮತ್ತು ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಬುರ್ಖಾ ಧರಿಸಿ ಶೈಕ್ಷಣಿಕ ವ್ಯವಸ್ಥೆಗೆ ಮಸಿ ಬಳಿಯಲು ಯತ್ನಿಸುತ್ತಿದ್ದ ಈ ಮಹಿಳೆಯರು, ಈಗ ನೇರವಾಗಿ ಜಿಲ್ಲಾ ಉಸ್ತುವಾರಿ ಸಚಿವರಿಗೇ ವಂಚಿಸಿದ್ದಾರೆ. ಕೇವಲ ಪ್ರಚಾರಕ್ಕಾಗಿ ತನ್ನ ಹೆತ್ತ ತಾಯಿಯನ್ನೇ ಪಕ್ಕದ ಮನೆಯ ಮಹಿಳೆ ಎಂದು ಹೇಳಿಕೊಳ್ಳುವ ಇಂತಹ ಜನರ ಮಾನಸಿಕತೆಯ ಬಗ್ಗೆ ಸಮಾಜ ಗಂಭೀರವಾಗಿ ಯೋಚಿಸಬೇಕಾಗಿದೆ” ಎಂದು ಹೇಳಿದರು.
ಫ್ರಾನ್ಸ್ ಸರಕಾರವು ಇನ್ನು ಮುಂದೆ ‘ಶೂನ್ಯ ಸಹಿಷ್ಣುತೆ’ಯ ನೀತಿಯನ್ನು ಅಳವಡಿಸಿಕೊಳ್ಳಲಿ !
ಅಂಬರನಾಥದಲ್ಲಿ ಕಸದ ರಾಶಿಯಲ್ಲಿ ಗೋವಂಶದ ಅವಶೇಷಗಳು ಪತ್ತೆ!
ಬೆಂಗಳೂರಿನ 97 ಲಕ್ಷ ಮತದಾರರಲ್ಲಿ 3.5–4 ಲಕ್ಷ ಮತದಾರರು ಅಸಿಂಧು ಮತದಾರರಾಗಿರಬಹುದು!”
ಕೋರ್ಟ್ ಆದೇಶ: ಕಾಶಿಯಲ್ಲಿ ರೈಲ್ವೆ ಜಾಗದ ಮಸೀದಿ ತೆರವು
ಭಾವಪೂರ್ಣ ಧಾರ್ಮಿಕ ವಿಧಿಗಳೊಂದಿಗೆ ಸಂಪನ್ನಗೊಂಡ ಶ್ರೀ ರಾಜಮಾತಂಗಿ ಮಹಾಯಜ್ಞ !
ಪ್ರಬಲ ಪ್ರತಾಪ ಸಿಂಗ ಜುದೇವ ಅವರಿಗೆ ಪ್ರತಿಷ್ಠಿತ ‘ಹಿಂದೂ ಕೇಸರಿ’ ಪ್ರಶಸ್ತಿ ನೀಡಿ ಗೌರವ!