ಆಂಧ್ರಪ್ರದೇಶದಲ್ಲಿ ನಾಲ್ಕನೇ ಮಗುವಿಗೆ ಜನ್ಮ ನೀಡುವ ದಂಪತಿಗೆ ೪೦ ಸಾವಿರ ರೂಪಾಯಿ!

ಕುಸಿಯುತ್ತಿರುವ ಜನಸಂಖ್ಯೆ; ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಘೋಷಣೆ

ಶ್ರೀಕಾಕುಳಂ (ಆಂಧ್ರಪ್ರದೇಶ) – ತೆಲುಗು ರಾಜ್ಯಕ್ಕೆ ಈಗ ಜನಸಂಖ್ಯೆ ಕಡಿಮೆಯಾಗುತ್ತಿರುವ ಆತಂಕ ಕಾಡಲಾರಂಭಿಸಿದೆ. ಜನಸಂಖ್ಯಾ ಬೆಳವಣಿಗೆಯನ್ನು ಉತ್ತೇಜಿಸಲು ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರು ಮೂರನೇ ಮಗುವಿಗೆ ಜನ್ಮ ನೀಡುವ ದಂಪತಿಗೆ ೧೦ ಸಾವಿರ ರೂಪಾಯಿ, ಹಾಗೂ ನಾಲ್ಕನೇ ಮಗುವಿಗೆ ಜನ್ಮ ನೀಡುವ ದಂಪತಿಗೆ ೪೦ ಸಾವಿರ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಶ್ರೀಕಾಕುಳಂ ಜಿಲ್ಲೆಯ ನರಸನ್ನಪೇಟೆಯಲ್ಲಿ ‘ಸ್ವರ್ಣ ಆಂಧ್ರ-ಸ್ವಚ್ಛ ಆಂಧ್ರ’ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ಅವರು ಈ ಘೋಷಣೆ ಮಾಡಿದರು. ಎರಡನೇ ಮಗು ಜನಿಸಿದಾಗ ೨೫ ಸಾವಿರ ರೂಪಾಯಿ ನೀಡುವುದಾಗಿ ಅವರು ಈ ಹಿಂದೆಯೇ ವಿಧಾನಸಭೆಯಲ್ಲಿ ಘೋಷಿಸಿದ್ದರು.

ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಾತನಾಡುತ್ತಾ, “ಜನಸಂಖ್ಯೆಯೇ ಭವಿಷ್ಯದ ನಿಜವಾದ ಸಂಪತ್ತು. ಈ ಪ್ರೋತ್ಸಾಹವು ಹೊಸ ಜನಸಂಖ್ಯಾ ನಿರ್ವಹಣಾ ನೀತಿಯ ಒಂದು ಭಾಗವಾಗಿದೆ. ಜನಸಂಖ್ಯಾ ಬೆಳವಣಿಗೆಯನ್ನು ಉತ್ತೇಜಿಸುವುದೇ ಈ ನೀತಿಯ ಉದ್ದೇಶವಾಗಿದೆ; ಏಕೆಂದರೆ ರಾಜ್ಯದ ಅಭಿವೃದ್ಧಿಯು ಕೇವಲ ಮಾನವ ಸಂಪನ್ಮೂಲದಿಂದ ಮಾತ್ರ ಸಾಧ್ಯ” ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

  • ಇದರ ಲಾಭವನ್ನು ಹಿಂದೂ ಪೋಷಕರು ಎಷ್ಟು ಪಡೆಯುತ್ತಾರೆ ಮತ್ತು ಮುಸ್ಲಿಮರು ಎಷ್ಟು ಪಡೆಯುತ್ತಾರೆ ಎಂಬುದು ಚರ್ಚೆಯ ವಿಷಯವಾಗಿದೆ!
  • ಕೇವಲ ಮಕ್ಕಳಿಗೆ ಜನ್ಮ ನೀಡುವುದರಿಂದ ಸಮಸ್ಯೆಗಳು ಬಗೆಹರಿಯುವುದಿಲ್ಲ, ಜನ್ಮ ನೀಡಿದ ಮಕ್ಕಳಿಗೆ ಧರ್ಮಾಚರಣೆ ಮತ್ತು ರಾಷ್ಟ್ರಾಭಿಮಾನದ ಸಂಸ್ಕಾರಗಳನ್ನು ನೀಡಿದರೆ ಎಲ್ಲಾ ಸಮಸ್ಯೆಗಳೂ ನಿವಾರಣೆಯಾಗಬಹುದು ಎಂಬುದನ್ನು ಆಡಳಿತಗಾರರು ಅರ್ಥಮಾಡಿಕೊಳ್ಳುವ ದಿನವೇ ಸುದಿನ!