ಬಂಗಾಳದಲ್ಲಿ ಧರ್ಮ ಆಧಾರಿತ ನೆರವು ಯೋಜನೆಗಳು ಸ್ಥಗಿತ!

ಮದರಸಾಗಳಿಗೆ ಸಂಬಂಧಿಸಿದ ಯೋಜನೆಗಳು ಬಂದ್ ಆಗಲಿವೆ

ಕೋಲಕಾತಾ (ಬಂಗಾಳ) – ಬಂಗಾಳದ ಶುಭೇಂದು ಅಧಿಕಾರಿ ಸರಕಾರದ ಸಚಿವ ಸಂಪುಟವು ಹಳೆಯ ಸರಕಾರಗಳಿಂದ ನಡೆದುಕೊಂಡು ಬಂದಿದ್ದ ಕೆಲವು ಯೋಜನೆಗಳನ್ನು ನಿಲ್ಲಿಸುವ ನಿರ್ಧಾರ ತೆಗೆದುಕೊಂಡಿದೆ. ಮದರಸಾ ಇಲಾಖೆ ಹಾಗೂ ಮಾಹಿತಿ ಮತ್ತು ಸಾಂಸ್ಕೃತಿಕ ಇಲಾಖೆಗಳ ವತಿಯಿಂದ ನಡೆಯುತ್ತಿದ್ದ ಧರ್ಮ ಆಧಾರಿತ ನೆರವು ಯೋಜನೆಗಳನ್ನು ಸರಕಾರ ಈಗ ಸ್ಥಗಿತಗೊಳಿಸಲಿದೆ. ಮುಂದಿನ ತಿಂಗಳಿಂದ ಇಂತಹ ಹಲವು ಯೋಜನೆಗಳನ್ನು ಬಂದ್ ಮಾಡಲಾಗುವುದು.