ಕೊಲಕಾತಾ: ಪೊಲೀಸರ ಕಠೋರ ನಿಲುವು; ರಸ್ತೆಯಲ್ಲಿ ನಮಾಜ್ ಮಾಡುವುದನ್ನು ಬಿಟ್ಟ ಮುಸಲ್ಮಾನರು

ಆರಂಭದಲ್ಲಿ ಪೊಲೀಸರಿಗೆ ವಿರೋಧ

ಕೊಲಕಾತಾ (ಬಂಗಾಳ) – ಬಂಗಾಳದಲ್ಲಿ ಭಾಜಪ ಸರಕಾರ ಅಧಿಕಾರಕ್ಕೆ ಬಂದ ತಕ್ಷಣದ ಪರಿಣಾಮಗಳು ಗೋಚರಿಸತೊಡಗಿವೆ. ಇಲ್ಲಿನ ರಾಜಾ ಬಜಾರ್ ಪ್ರದೇಶದಲ್ಲಿ ಮುಸಲ್ಮಾನರು ಶುಕ್ರವಾರ, ಮೇ 15 ರ ಮಧ್ಯಾಹ್ನ ನಮಾಜ್‌ ಪಠಣಕ್ಕಾಗಿ ಎಂದಿನಂತೆ ರಸ್ತೆಯನ್ನು ತಡೆದಿದ್ದರು. ಆಗ ಸ್ಥಳೀಯ ಪೊಲೀಸರು ರಸ್ತೆಯಲ್ಲಿ ನಮಾಜ್ ಮಾಡುವುದನ್ನು ವಿರೋಧಿಸಿದರು. ಮುಸಲ್ಮಾನರು ಈ ವಿರೋಧದ ವಿರುದ್ಧ ಘೋಷಣೆಗಳನ್ನೂ ಕೂಗಿದರು. ಈ ಸಂದರ್ಭದಲ್ಲಿ ಪೊಲೀಸರು ವಿರೋಧವನ್ನು ಹತ್ತಿಕ್ಕುವ ಎಚ್ಚರಿಕೆ ನೀಡಿದಾಗ, ಮುಸಲ್ಮಾನರು ಹಿಂದೆ ಸರಿದು ರಸ್ತೆಯಲ್ಲಿ ನಮಾಜ್ ಮಾಡುವುದಿಲ್ಲ ಎಂದು ತಿಳಿಸಿದರು.

ವಿರೋಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು !

ಮುಸಲ್ಮಾನರ ವಿರೋಧದಿಂದಾಗಿ ಪರಿಸ್ಥಿತಿ ಉದ್ವಿಗ್ನಗೊಳ್ಳುತ್ತಿರುವುದನ್ನು ಕಂಡು ಸರ್ಕಾರ ಭಾರಿ ಸಂಖ್ಯೆಯಲ್ಲಿ ಅರೆಸೇನಾ ಪಡೆಯ ಯೋಧರನ್ನು ನಿಯೋಜಿಸಿತ್ತು. ಗಲಭೆ ಸೃಷ್ಟಿಸಿದವರನ್ನು ಗುರುತಿಸಿ, ಅವರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡುವುದಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ.

ಭಾಜಪ ಶಾಸಕರು ಮೊದಲೇ ಮುನ್ಸೂಚನೆ ನೀಡಿದ್ದರು !

ಬಂಗಾಳದಲ್ಲಿ ಭಾಜಪದ ವಿಜಯದ ನಂತರ, ಭಾಜಪ ಶಾಸಕ ಅರ್ಜುನ್ ಸಿಂಗ್ ಅವರು ‘ಆಜ್ ತಕ್’ ಸುದ್ದಿ ವಾಹಿನಿಯೊಂದಿಗೆ ಮಾತನಾಡುತ್ತಾ, ‘ರಾಜ್ಯದಲ್ಲಿ ಇನ್ನು ಮುಂದೆ ರಸ್ತೆಗಳ ಮೇಲೆ ನಮಾಜ್ ಮಾಡಲು ಅನುಮತಿ ನೀಡಬಾರದು. ನಮಾಜ್‌ ಪಠಣಕ್ಕಾಗಿ ಮಸೀದಿಗಳನ್ನು ನಿರ್ಮಿಸಲಾಗಿದೆ ಮತ್ತು ಜನರು ಅಲ್ಲೇ ಹೋಗಿ ಪ್ರಾರ್ಥನೆ ಸಲ್ಲಿಸಬೇಕು’ ಎಂದು ಹೇಳಿದ್ದರು.

ಸಂಪಾದಕೀಯ ನಿಲುವು

  • ಬಂಗಾಳದಲ್ಲಿ ಶುಭೇಂದು ಅಧಿಕಾರಿ ಅವರ ಸರಕಾರವು ಯೋಗಿ ಆದಿತ್ಯನಾಥ ಸರಕಾರ ಮತ್ತು ಹಿಮಂತ ಬಿಸ್ವ ಶರ್ಮಾ ಸರಕಾರಗಳಿಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಕಠಿಣ ನಿಲುವು ತಳೆದು ಕಾರ್ಯನಿರ್ವಹಿಸುತ್ತಿರಲಿ, ಎಂಬುದೇ ಹಿಂದೂಗಳ ಶುಭ ಹಾರೈಕೆಯಾಗಿದೆ !
  • ಹಿಂದೂಗಳೇ, ಭಾರತದ ಕೈಯಿಂದ ಜಾರಿಹೋಗುವ ಹಂತದಲ್ಲಿದ್ದ ಬಂಗಾಳ ರಾಜ್ಯದಲ್ಲಿ ಹಿಂದುತ್ವನಿಷ್ಠ ಭಾಜಪದ ಆಡಳಿತ ಬಂದ ತಕ್ಷಣವೇ ಈ ರೀತಿಯ ಬದಲಾವಣೆಗಳು ಕಾಣಿಸಿಕೊಳ್ಳುತ್ತಿದ್ದರೆ, ಇನ್ನು ಮುಂದೆ ಭಾರತದಲ್ಲಿ 'ಹಿಂದೂ ರಾಷ್ಟ್ರ' ಸ್ಥಾಪನೆಯಾದಾಗ ಇನ್ನೆಷ್ಟು ಬದಲಾವಣೆಗಳು ಸಾಧ್ಯ ಎಂಬುದನ್ನು ಯೋಚಿಸಿ. ಹಾಗಾಗಿ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಮುನ್ನಡೆಯಿರಿ !