ಸನಾತನವನ್ನು ಮುಗಿಸುವ ಹೇಳಿಕೆಯ ಮೇಲೆ ದೇಶಾದ್ಯಂತ ಟೀಕೆಯಾದ ನಂತರ ಉದಯನಿಧಿ ಸ್ಟಾಲಿನ್ ಅವರ ಹಾಸ್ಯಾಸ್ಪದ ಸ್ಪಷ್ಟೀಕರಣ !

ಚೆನ್ನೈ (ತಮಿಳುನಾಡು) – ನನ್ನ ಹೇಳಿಕೆಯ ತಪ್ಪಾದ ಅರ್ಥ ಕಲ್ಪಿಸಲಾಗುತ್ತಿದೆ. ನಾನು ಜನರು ದೇವಸ್ಥಾನಕ್ಕೆ ಹೋಗುವುದರ ವಿರುದ್ಧವಲ್ಲ, ಕೇವಲ ಅಲ್ಲಿ ಜಾತಿಯ ಆಧಾರದ ಮೇಲೆ ನಡೆಯುವ ತಾರತಮ್ಯದ ವಿರುದ್ಧವಾಗಿದ್ದೇನೆ. ಆ ವಿಚಾರಧಾರೆಯನ್ನು ಮುಗಿಸಬೇಕು, ಎಂಬ ಸ್ಪಷ್ಟೀಕರಣವನ್ನು ಡಿಎಂಕೆ ನಾಯಕ ಮತ್ತು ರಾಜ್ಯದ ಮಾಜಿ ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರು ತಾರತಮ್ಯ ಮಾಡುವ ಸನಾತನವನ್ನು ಮುಗಿಸಬೇಕು ಎಂದು ವಿಧಾನಸಭೆಯಲ್ಲಿ ನೀಡಿದ ಹೇಳಿಕೆಯ ಮೇಲೆ ನೀಡಿದ್ದಾರೆ. ಈ ಹೇಳಿಕೆಯಿಂದ ಅವರ ಮೇಲೆ ದೇಶಾದ್ಯಂತ ಟೀಕೆಯಾಗಿತ್ತು.
ಉದಯನಿಧಿಯವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುತ್ತಾ,
1. ತಮಿಳುನಾಡು ವಿಧಾನಸಭೆಯಲ್ಲಿ ನಾನು ಜನರನ್ನು ವಿಭಜಿಸುವ ಸನಾತನದ ಅಂತ್ಯವಾಗಬೇಕು ಎಂದು ಹೇಳಿದಾಗ ಕೆಲವು ಜನರು ನನ್ನನ್ನು ಟೀಕಿಸುತ್ತಿದ್ದಾರೆ; ಆದರೆ ನಾನು ಇಂತಹ ಟೀಕೆಗಳಿಗೆ ಹೆದರುವುದಿಲ್ಲ.
2. ದ್ರಾವಿಡ ಚಳುವಳಿಯು ಯಾವಾಗಲೂ ವಿರೋಧದಿಂದಲೇ ಮುಂದೆ ಸಾಗಿದೆ; ಆದ್ದರಿಂದ ನಾನು ಕೇವಲ ಒಂದು ಸಣ್ಣ ವಿಷಯವನ್ನು ಸ್ಪಷ್ಟಪಡಿಸಲು ಬಯಸುತ್ತೇನೆ. ನಾನು ಸನಾತನದ ಅಂತ್ಯವಾಗಬೇಕು ಎಂದು ಹೇಳಿದಾಗ, ಅದರ ಅರ್ಥ ಯಾರೂ ದೇವಸ್ಥಾನಕ್ಕೆ ಹೋಗಬಾರದು ಎಂದಲ್ಲ. ಅದರ ಅರ್ಥವೇನೆಂದರೆ, ಕೇವಲ ದೇವಸ್ಥಾನದಲ್ಲಿ ಮಾತ್ರವಲ್ಲ, ಸಮಾಜದಲ್ಲಿಯೂ ಎಲ್ಲಾ ಜನರಿಗೆ ಸಮಾನ ಹಕ್ಕುಗಳು ಸಿಗಬೇಕು. ಜನರನ್ನು ಮೇಲು ಮತ್ತು ಕೀಳು ಜಾತಿಗಳಾಗಿ ವಿಭಜಿಸುವ ಆ ವಿಚಾರಧಾರೆಯ ಅಂತ್ಯದ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಪೆರಿಯಾರ್, ಅಂಬೇಡ್ಕರ್, ಅಣ್ಣಾ ಮತ್ತು ಕರುಣಾನಿಧಿ ಅವರು ಚರ್ಚಿಸಿದ ಅದೇ ವಿಚಾರಗಳನ್ನು ನಾನು ಮಂಡಿಸುತ್ತಿದ್ದೇನೆ. ನಾವು ಯಾರದೇ ದೇವರ ಮೇಲಿನ ನಂಬಿಕೆಯ ವಿರುದ್ಧವಲ್ಲ; ಆದರೆ ಅಸಮಾನತೆ ಮತ್ತು ಶೋಷಣೆಯನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ.
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ
ಕ್ಷುಲ್ಲಕ ಕಾರಣಕ್ಕೆ ಹಿಂದೂ ಬಸ್ ಚಾಲಕನ ಮೇಲೆ ಹಲ್ಲೆ ಮಾಡಿದ ಮತಾಂಧ ರಿಕ್ಷಾ ಚಾಲಕ!