ಸಮಾಜವಾದಿ ಪಕ್ಷದ ಸಂಸದ ಅಜೇಂದ್ರ ಲೋಧಿ ಅವರಿಂದ ಪ್ರಧಾನಿ ಮೋದಿಗೆ ಬೈಗುಳ
ಅಜೇಂದ್ರ ಲೋಧಿ ವಿರುದ್ಧ ದೂರು ದಾಖಲು !

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಹಮೀರ್ಪುರದ ಸಮಾಜವಾದಿ ಪಕ್ಷದ ಸಂಸದ ಅಜೇಂದ್ರ ಲೋಧಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ನಿಂದಿಸಿರುವ ವಿಡಿಯೋವೊಂದು ಪ್ರಸಾರವಾಗಿದೆ. ಪ್ರಧಾನಿ ಮೋದಿಯವರು ಒಂದು ವರ್ಷ ಚಿನ್ನ ಖರೀದಿಸದಂತೆ ಮನವಿ ಮಾಡಿದ್ದಾರೆ ಮತ್ತು ಪೆಟ್ರೋಲ್-ಡೀಸೆಲ್ ಬಳಕೆಯನ್ನು ಕಡಿಮೆ ಮಾಡಲು ಹೇಳಿದ್ದಾರೆ ಎಂದು ಪತ್ರಕರ್ತರು ಕೇಳಿದಾಗ, ಅದಕ್ಕೆ ಉತ್ತರಿಸಿದ ಅಜೇಂದ್ರ ಲೋಧಿ ಪ್ರಧಾನಿಯನ್ನು ‘ಹರಾಮಿ’ ಮತ್ತು ‘ದೇಶವಿರೋಧಿ’ ಎಂದು ಕರೆದಿದ್ದಾರೆ. ಈ ಸಂಬಂಧ ಉತ್ತರ ಪ್ರದೇಶದ ಮಹೋಬಾದಲ್ಲಿ ಭಾಜಪ ನಾಯಕ ಸತ್ಯೇಂದ್ರ ಪ್ರತಾಪ್ ಗುಪ್ತಾ ಅವರು ದೂರು ದಾಖಲಿಸಿದ್ದಾರೆ.
🚨 Mahoba, Uttar Pradesh:
“Never seen such a b****§¢§ and anti-national Prime Minister”!⚠️ Abusive remarks against Prime Minister Narendra Modi by Samajwadi Party leader Ajendra Lodhi.
📢 Complaint has been lodged against Ajendra Lodhi.
❓While opposing the Prime Minister,… pic.twitter.com/8FteBbGcM1
— Sanatan Prabhat (@SanatanPrabhat) May 14, 2026
1. ವಿಡಿಯೋದಲ್ಲಿ ಸಮಾಜವಾದಿ ಪಕ್ಷದ ಸಂಸದ ಮೊದಲು ವ್ಯಂಗ್ಯವಾಡುತ್ತಾ, ಮೋದಿಜಿ ಏನೇ ಮಾತನಾಡಿದರೂ ತುಂಬಾ ಚೆನ್ನಾಗಿ ಮಾತನಾಡುತ್ತಾರೆ, ಚಿನ್ನ ಖರೀದಿಸಬೇಡಿ, ಪೆಟ್ರೋಲ್ ಬಳಕೆಯನ್ನು ಕಡಿಮೆ ಮಾಡಿ; ಆದರೆ ಸ್ವತಃ ವಿದೇಶ ಪ್ರವಾಸ ಮಾಡಿ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾರೆ ಎಂದಿದ್ದಾರೆ.
2. ಆನಂತರ ನಿಂದಿಸುತ್ತಾ ಅಜೇಂದ್ರ ಲೋಧಿ, ಇಷ್ಟೊಂದು ಹರಾಮಿ ಮತ್ತು ದೇಶವಿರೋಧಿ ಪ್ರಧಾನಿಯನ್ನು ಇದುವರೆಗೂ ಯಾರೂ ನೋಡಿಲ್ಲ ಮತ್ತು ಮುಂಬರುವ ಸರಕಾರಗಳಲ್ಲೂ ಇಂತಹ ಪ್ರಧಾನಿ ನೋಡಲು ಸಿಗುವುದಿಲ್ಲ ಎಂದಿದ್ದಾರೆ.
ಸಮಯ ಬಂದಾಗ ಜನತೆ ಉತ್ತರಿಸುತ್ತಾರೆ ! – ಯೋಗಿ ಆದಿತ್ಯನಾಥ್
ಈ ಘಟನೆಯ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, ಜಗತ್ತಿನ ಅತ್ಯಂತ ಜನಪ್ರಿಯ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸಂಸದರೊಬ್ಬರು ಮಾಡಿದ ಅಸಂಸದೀಯ ಟೀಕೆಯು ಅಶೋಭನೀಯ ಮತ್ತು ಅಕ್ಷಮ್ಯವಷ್ಟೇ ಅಲ್ಲ, ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಅವರು ಭಾರತೀಯ ಪ್ರಜಾಪ್ರಭುತ್ವದ ಮಿತಿಗಳ ಮೇಲೆಯೂ ಗಂಭೀರ ದಾಳಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ಕೃತ್ಯವು ರಾಜಕೀಯ ಕುಸಂಸ್ಕಾರ, ವೈಚಾರಿಕ ದಿವಾಳಿತನ ಮತ್ತು ಸಾರ್ವಜನಿಕ ಜೀವನದಲ್ಲಿನ ಸಭ್ಯತೆಯ ಮೇಲಿನ ಅಗೌರವವನ್ನು ಪ್ರಕಟಿಸುತ್ತದೆ. ಇದು 145 ಕೋಟಿ ದೇಶವಾಸಿಗಳ ಜನಾದೇಶದ, ವಿಶ್ವಾಸದ ಮತ್ತು ಭಾರತದ ಪ್ರಜಾಪ್ರಭುತ್ವದ ಘನತೆಯ ಅವಮಾನವೂ ಆಗಿದೆ. ದೇಶದ ಜನತೆ ಇಂತಹ ಮಿತಿಮೀರಿದ ವರ್ತನೆಗೆ ಸಮಯ ಬಂದಾಗ ಖಂಡಿತವಾಗಿಯೂ ತಕ್ಕ ಉತ್ತರ ನೀಡಲಿದ್ದಾರೆ, ಎಂದು ಹೇಳಿದರು.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ