ಫಲಕ ಮತ್ತು ಡಿಜಿಟಲ್ ಸ್ಕ್ರೀನ್ ಮೂಲಕ ಮುಂಬಯಿನಲ್ಲಿ ಶ್ರೀ ರಾಜಮಾತಂಗಿ ಮಹಾಯಜ್ಞ ಸಮಾರಂಭದ ಪರಿಣಾಮಕಾರಿ ಪ್ರಚಾರ !

ಬಸ್ ನಿಲ್ದಾಣದಲ್ಲಿನ ಫ್ಲೆಕ್ಸ್ ಫಲಕ

ಮುಂಬಯಿ, 11 ಮೇ (ವಾರ್ತೆ.) – ಸನಾತನ ಸಂಸ್ಥೆಯ ವತಿಯಿಂದ 17 ಮೇ ರಂದು ಪ್ರಭಾದೇವಿಯ ನರ್ದುಲ್ಲಾ ಟ್ಯಾಂಕ್ ಮೈದಾನದಲ್ಲಿ ಮಧ್ಯಾಹ್ನ 3.30 ರಿಂದ 7.30 ರವರೆಗೆ ಶ್ರೀ ರಾಜಮಾತಂಗಿ ಮಹಾಯಜ್ಞವನ್ನು ಆಯೋಜಿಸಲಾಗಿದೆ. ಹೆಚ್ಚು ಹೆಚ್ಚು ಭಕ್ತರು ಈ ಯಜ್ಞದ ಲಾಭ ಪಡೆಯಲು, ಮುಂಬಯಿ ಮತ್ತು ಉಪನಗರಗಳಲ್ಲಿ ಫಲಕ ಮತ್ತು ಡಿಜಿಟಲ್ ಸ್ಕ್ರೀನ್‌ಗಳ ಮೂಲಕ ಅತ್ಯಂತ ಪರಿಣಾಮಕಾರಿ ಪ್ರಚಾರ ನಡೆಯುತ್ತಿದೆ.

ರಸ್ತೆಯ ಮುಂಭಾಗದಲ್ಲಿರುವ ಹೋರ್ಡಿಂಗ್

ಯಜ್ಞದ ಜಾಹೀರಾತುಗಳಲ್ಲಿನ ‘ಶ್ರೀ ರಾಜಮಾತಂಗಿದೇವಿಯ ಸಾತ್ವಿಕ ಮತ್ತು ಚೈತನ್ಯದಾಯಕ ರೂಪವು ಎಲ್ಲರ ಗಮನ ಸೆಳೆಯುತ್ತಿದೆ. ಫಲಕ, ಡಿಜಿಟಲ್ ಸ್ಕ್ರೀನ್ ಮೂಲಕ ಇದುವರೆಗೆ ಸಾವಿರಾರು ಭಕ್ತರಿಗೆ ಯಜ್ಞದ ಮಾಹಿತಿ ತಲುಪಿದೆ.

ಲೋಕಲ್ ರೈಲಿನಲ್ಲಿನ ಎಲ್.ಇ.ಡಿ. ಸ್ಕ್ರೀನ್

ಪಶ್ಚಿಮ ಮತ್ತು ಮಧ್ಯ ರೈಲ್ವೆಯ ಬೋಗಿಗಳಲ್ಲಿನ ‘ಎಲ್.ಇ.ಡಿ.’ ಟಿವಿಗಳಲ್ಲಿ ಯಜ್ಞದ ಜಾಹೀರಾತುಗಳನ್ನು ಪ್ರದರ್ಶಿಸಲಾಗಿದೆ. ಇದರಿಂದಾಗಿ ನಿಯಮಿತವಾಗಿ ರೈಲಿನಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಯಜ್ಞದ ಮಾಹಿತಿ ತಲುಪುತ್ತಿದೆ. ಮುಂಬಯಿನ ವಿವಿಧ ಬಸ್ ನಿಲ್ದಾಣಗಳು ಸೇರಿದಂತೆ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಲ್, ಭಾಂಡುಪ್ ಮತ್ತು ಮಾಟುಂಗಾ ಮುಂತಾದ ರೈಲು ನಿಲ್ದಾಣಗಳ ಪ್ಲಾಟ್‌ಫಾರ್ಮ್‌ಗಳಲ್ಲಿ ಫಲಕಗಳ ಮೂಲಕ ಮತ್ತು ರೈಲು ನಿಲ್ದಾಣಗಳ ಹೊರಗೆ ‘ಎಲ್.ಇ.ಡಿ. ಸ್ಕ್ರೀನ್’ ಮೂಲಕವೂ ಯಜ್ಞದ ಜಾಹೀರಾತುಗಳು ನಾಗರಿಕರ ಗಮನ ಸೆಳೆಯುತ್ತಿವೆ. ಪವೈ ಬಳಿಯ ಹೆದ್ದಾರಿಯಲ್ಲಿ ಯಜ್ಞದ ಜಾಹೀರಾತಿನ 60 ಅಡಿ ಉದ್ದದ ಹೋರ್ಡಿಂಗ್ ಅಳವಡಿಸಲಾಗಿದೆ. ಇದು ತುಂಬಾ ಗಮನ ಸೆಳೆಯುವಂತೆ ಆಗಿದೆ.

ಮಾರ್ಗದಲ್ಲಿನ ಡಿಜಿಟಲ್ ಸ್ಕ್ರೀನ್ ಹೋರ್ಡಿಂಗ್

ಯಜ್ಞ ಸಮಾರಂಭದಲ್ಲಿ ಪಾಲ್ಗೊಳ್ಳಲು ಫಲಕಗಳ ಮೇಲೆ ‘ಕ್ಯೂ.ಆರ್.’ ಕೋಡ್ ಪ್ರದರ್ಶಿಸಲಾಗಿದೆ. ಈ ಮೂಲಕ ಅನೇಕ ರಾಷ್ಟ್ರ ಮತ್ತು ಧರ್ಮಪ್ರೇಮಿ ನಾಗರಿಕರು ಯಜ್ಞ ಸಮಾರಂಭಕ್ಕೆ ಬರಲು ನೋಂದಾಯಿಸಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಫಲಕಗಳ ಮೇಲೆ ನೀಡಲಾಗಿರುವ ಸಂಪರ್ಕ ಸಂಖ್ಯೆಗೆ ಕರೆ ಮಾಡುವ ಮೂಲಕ ಅನೇಕ ಆಸಕ್ತರು ಯಜ್ಞ ಸಮಾರಂಭದ ಮಾಹಿತಿಯನ್ನು ತಿಳಿದುಕೊಂಡು ಯಜ್ಞಕ್ಕೆ ಬರಲು ತಮ್ಮ ಪಾಲ್ಗೊಳ್ಳುವಿಕೆಯನ್ನು ನೋಂದಾಯಿಸಿಕೊಳ್ಳುತ್ತಿದ್ದಾರೆ.