ಚಂದ್ರನಾಥ್ ರಥ್ ಹತ್ಯೆ ಪ್ರಕರಣ: ಉತ್ತರ ಪ್ರದೇಶ ಮತ್ತು ಬಿಹಾರದಿಂದ ೩ ಜನರ ಬಂಧನ

ಲಕ್ಷ್ಮಣಪುರಿ (ಉತ್ತರ ಪ್ರದೇಶ) – ಬಂಗಾಳದ ಮುಖ್ಯಮಂತ್ರಿ ಶುಭೇಂದು ಅಧಿಕಾರಿ ಅವರ ಆಪ್ತ ಸಹಾಯಕ ಚಂದ್ರನಾಥ್ ರಥ್ ಅವರ ಹತ್ಯೆಯ ಪ್ರಕರಣದಲ್ಲಿ ಪೊಲೀಸರು ೩ ಜನರನ್ನು ಬಂಧಿಸಿದ್ದಾರೆ. ವಿಶೇಷ ತನಿಖಾ ತಂಡವು ಉತ್ತರ ಪ್ರದೇಶ ಮತ್ತು ಬಿಹಾರದಿಂದ ಈ ಮೂವರನ್ನು ಬಂಧಿಸಿದೆ. ಮೇ ೬ ರಂದು ರಾತ್ರಿ ಬಂಗಾಳದಲ್ಲಿ ರಥ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

ಅಯೋಧ್ಯೆಯಿಂದ ರಾಜ್ ಸಿಂಗ್ ಹೆಸರಿನ ವ್ಯಕ್ತಿಯನ್ನು ಬಂಧಿಸಲಾಯಿತು. ಈತ ಮೂಲತಃ ಉತ್ತರ ಪ್ರದೇಶದ ಬಲ್ಲಿಯಾ ನಿವಾಸಿಯಾಗಿದ್ದು, ಬಿಹಾರದ ಬಕ್ಸರ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದನು. ಹಾಗೆಯೇ ಬಿಹಾರದ ಬಕ್ಸರ್‌ನಿಂದ ಮಯಾಂಕ್ ರಾಜ್ ಮಿಶ್ರಾ ಮತ್ತು ವಿಕ್ಕಿ ಮೌರ್ಯ ಅವರನ್ನು ಬಂಧಿಸಲಾಗಿದೆ.

ಆನ್‌ಲೈನ್ ವ್ಯವಹಾರದಿಂದ ಬಹಿರಂಗ

ಹತ್ಯೆಗಾಗಿ ಬಳಸಲಾದ ನಾಲ್ಕು ಚಕ್ರದ ವಾಹನವು ಹಾವಡಾದ ಬಾಲಿ ಟೋಲ್ ಪ್ಲಾಜಾ ಮೂಲಕ ಹಾದುಹೋದಾಗ, ಆರೋಪಿಗಳು ನಗದು ಹಣದ ಬದಲಿಗೆ ಆನ್‌ಲೈನ್ ಮೂಲಕ ಟೋಲ್ ಹಣ ಪಾವತಿಸಿದ್ದರು. ಈ ಡಿಜಿಟಲ್ ವ್ಯವಹಾರದಿಂದಾಗಿ ಪೊಲೀಸರಿಗೆ ಆರೋಪಿಗಳ ಮೊಬೈಲ್ ಸಂಖ್ಯೆ ಮತ್ತು ಬ್ಯಾಂಕ್ ವಿವರಗಳು ಲಭ್ಯವಾದವು. ಅದರ ಆಧಾರದ ಮೂಲಕ ಪೊಲೀಸರು ಅವರವರೆಗೆ ತಲುಪಲು ಯಶಸ್ವಿಯಾದರು.