ಕೊಂಡ್ವಾ (ಪುಣೆ) ಇಲ್ಲಿನ ಹಿಂದೂಗಳನ್ನು ಹುಡುಕಲು ದುರ್ಬೀನು ಅಗತ್ಯವಿದೆ ! – ಸಚಿವ ನಿತೇಶ್ ರಾಣೆ

ಭಾಜಪ ಪದಾಧಿಕಾರಿ ಸರ್ವೇಶ್ ಮೆಹೆಂದಳೆ ಅವರಿಗೆ ನನ್ನ ಬೆಂಬಲ

ಸಚಿವ ನಿತೇಶ್ ರಾಣೆ

ಮುಂಬಯಿ – ಪುಣೆಯ ಕೊಂಡ್ವಾದಲ್ಲಿ ಈಗ ಹಿಂದೂಗಳನ್ನು ಹುಡುಕಲು ದುರ್ಬೀನು ಹಚ್ಚಬೇಕಾದ ಸ್ಥಿತಿ ಬಂದಿದೆ. ದೇಶವನ್ನು 2047ರ ವೇಳೆಗೆ ಇಸ್ಲಾಮಿ ರಾಷ್ಟ್ರವನ್ನಾಗಿ ಮಾಡುವ ದೃಷ್ಟಿಕೋನದಿಂದ ಕೆಲವು ಶಕ್ತಿಗಳು ಕೆಲಸ ಮಾಡುತ್ತಿವೆ. ಈ ಶಕ್ತಿಗಳು ಕೆಲವು ನಿರ್ದಿಷ್ಟ ಭಾಗಗಳ ಮೇಲೆ ತಮ್ಮ ಗಮನ ಕೇಂದ್ರೀಕರಿಸಿದ್ದು, ಅದರಲ್ಲಿ ಪುಣೆಯ ಕೊಂಡ್ವಾ ಪ್ರದೇಶ ಪ್ರಮುಖವಾಗಿ ಸೇರಿದೆ ಎಂದು ಮಹಾರಾಷ್ಟ್ರದ ಮೀನುಗಾರಿಕೆ ಮತ್ತು ಬಂದರು ಅಭಿವೃದ್ಧಿ ಸಚಿವ ನಿತೇಶ್ ರಾಣೆ ಹೇಳಿದ್ದಾರೆ.

ಸಚಿವ ರಾಣೆ ಮಾತು ಮುಂದುವರೆಸುತ್ತಾ, ಅಲ್ಲಿ ಎಲ್ಲವನ್ನೂ ಹಸಿರು ಮಾಡುವ ಪ್ರಯತ್ನ ಕೆಲವು ಹಸಿರು ಹಾವುಗಳ ಮೂಲಕ ನಡೆಯುತ್ತಿದೆ. ನನ್ನ ಸಹೋದ್ಯೋಗಿ ಇದೇ ವಾಸ್ತವವನ್ನು ಜನರ ಮುಂದೆ ಇಟ್ಟಿದ್ದು, ಅವರಿಗೆ ನನ್ನ ಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ. ಭಾಜಪ ಪದಾಧಿಕಾರಿ ಸರ್ವೇಶ್ ಮೆಹೆಂದಳೆ ಅವರ ವಿಡಿಯೋ ಒಂದಕ್ಕೆ ಬೆಂಬಲ ನೀಡುವ ಸಂದರ್ಭದಲ್ಲಿ ರಾಣೆ ಈ ಹೇಳಿಕೆ ನೀಡಿದ್ದಾರೆ. ಸಾಮಾಜಿಕ ಸೌಹಾರ್ದತೆ ಕೆಡಿಸಿದ ಆರೋಪದ ಮೇಲೆ ಕೊಂಡ್ವಾ ಪೊಲೀಸರು ಸರ್ವೇಶ್ ಮೆಹೆಂದಳೆ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆಯಿಂದ ರಾಜಕೀಯ ವಲಯದಲ್ಲಿ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.

ಏನಿದು ಪ್ರಕರಣ ?

ಸರ್ವೇಶ್ ಮೆಹೆಂದಳೆ ಅವರು ಭಾಜಪ ಯುವ ಮೋರ್ಚಾ ಪುಣೆ ನಗರದ ಖಜಾಂಚಿಯಾಗಿದ್ದಾರೆ. ಅವರು ಕೊಂಡ್ವಾದ ಮುಖ್ಯ ರಸ್ತೆಯಲ್ಲಿರುವ ಆಸ್ಪತ್ರೆಯ ಕಟ್ಟಡವೊಂದರ ವಿಡಿಯೋ ಸಿದ್ಧಪಡಿಸಿದ್ದರು. ಈ ವಿಡಿಯೋದಲ್ಲಿ ಅವರು ಆಸ್ಪತ್ರೆಯ ಹೊರಗಿನ ಅತಿಕ್ರಮಣಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಈ ಮಾಹಿತಿ ನೀಡುವಾಗ ಅವರು ಈ ಪ್ರದೇಶವನ್ನು ಪಾಕಿಸ್ತಾನದ ಕರಾಚಿ ನಗರಕ್ಕೆ ಹೋಲಿಸಿದ್ದಾರೆ. ಅದರಲ್ಲಿ ಅವರು ವೆಲ್ಕಮ್ ಟು ಕೊಂಡ್ವಾ ಆಫ್ ಪಾಕಿಸ್ತಾನ್ ಎಂದು ಆರಂಭಿಸಿ ಆ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದರು.

ಸಂಪಾದಕೀಯ ನಿಲುವು

ಕೊಂಡ್ವಾದಲ್ಲಿನ ಸತ್ಯ ಪರಿಸ್ಥಿತಿ ತಿಳಿಸುವ ಪ್ರಯತ್ನ