ಗೃಹಸಚಿವ ಜಿ. ಪರಮೇಶ್ವರ ಅವರ ವಿಚಾರಣೆಯ ಆದೇಶ; ಉಚ್ಚ ನ್ಯಾಯಾಲಯದ ತಡೆ!

ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಟ್ಟಿಂಗ್ ಆರೋಪ

ಬೆಂಗಳೂರು – ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಟ್ಟಿಂಗ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ನಾಟಕದ ಗೃಹಸಚಿವ ಡಾ. ಜಿ. ಪರಮೇಶ್ವರ್ ಅವರ ವಿರುದ್ಧ ಮೊಕದ್ದಮೆ ದಾಖಲಿಸಿ ವಿಚಾರಣೆ ನಡೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ನೀಡಿದ್ದ ಆದೇಶಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯವು ಈಗ ತಡೆ ನೀಡಿದೆ. ಗೃಹಸಚಿವರ ಜೊತೆಗೆ ತುಮಕೂರು ಜಿಲ್ಲಾಧಿಕಾರಿ ಶುಭಾ ಕಲ್ಯಾಣ್ ಅವರ ಹೆಸರು ಕೂಡ ಈ ಪ್ರಕರಣದಲ್ಲಿತ್ತು. ನ್ಯಾಯಮೂರ್ತಿ ಎಸ್. ಸುನಿಲ್ ದತ್ ಯಾದವ್ ಅವರ ಪೀಠವು ‘ತಮಾಷೆ ಮಾಡುವುದು ಕ್ರಿಮಿನಲ್ ಅಪರಾಧವಾಗುತ್ತದೆಯೇ?’ ಎಂಬ ಪ್ರಶ್ನೆ ಕೇಳುತ್ತಾ ಈ ಆದೇಶಕ್ಕೆ ತಡೆ ಹೇರಿದರು.

ಏನಿದು ಪ್ರಕರಣ?

ಪರಮೇಶ್ವರ್ ಅವರ ಪರವಾಗಿ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಕೆ.ಎನ್. ಫಣೀಂದ್ರ ಅವರು, ಒಂದು ಪಂದ್ಯಾವಳಿಯಲ್ಲಿ ದಕ್ಷಿಣ ಕನ್ನಡದ ತಂಡವು ಗೆದ್ದಿತ್ತು. ಆಗ ಪರಮೇಶ್ವರ್ ಅವರು ಕೇವಲ ತಮಾಷೆಗಾಗಿ ‘ನಾನು ೫೦೦ ರೂಪಾಯಿ ಬೆಟ್ಟಿಂಗ್ ಕಟ್ಟಿ ಸೋತಿದ್ದೇನೆ’ ಎಂದು ಹೇಳಿದ್ದರು, ಎಂದು ತಿಳಿಸಿದರು. (ರಾಜಕಾರಣಿಗಳ ನಡವಳಿಕೆಯು ಅನುಕರಣೀಯವಾಗಿರಬೇಕು. ಆದರೂ ಕಾಂಗ್ರೆಸ್‌ ನಂತಹ ಭ್ರಷ್ಟಾಚಾರದಲ್ಲಿ ಮುಳುಗಿರುವ ಪಕ್ಷದ ಸಚಿವರಿಂದ ಇನ್ನು ಏನು ನಿರೀಕ್ಷಿಸಬಹುದು? – ಸಂಪಾದಕರು)