ಖೇಡಾ (ಗುಜರಾತ) ಇಲ್ಲಿ ಮತಾಂಧ ಮುಸಲ್ಮಾನರಿಂದ ಅಪ್ರಾಪ್ತ ಬಾಲಕಿಯ ಮೇಲೆ ಸಮೂಹ ಬಲಾತ್ಕಾರ : Gujarat Gang Rape

  • ೯ ಮಂದಿ ಮತಾಂಧ ಮುಸಲ್ಮಾನರ ಬಂಧನ, ಪೊಲೀಸರಿಂದ ಮೆರವಣಿಗೆ

  • ರಮಜಾನ್ ತಿಂಗಳನಲ್ಲಿಯೇ ಸಂತ್ರಸ್ತೆಯ ಅಪಹರಣ ಮಾಡಲಾಗಿತ್ತು

ಕರ್ಣಾವತಿ (ಗುಜರಾತ) – ಖೇಡಾ ಜಿಲ್ಲೆಯ ಅಪ್ರಾಪ್ತ ಬಾಲಕಿಯೊಬ್ಬಳನ್ನು ಪ್ರೇಮಜಾಲದಲ್ಲಿ ಸಿಲುಕಿಸಿ ಕಳೆದ ೩ ವರ್ಷಗಳಿಂದ ನಿರಂತರವಾಗಿ ಆಕೆಯ ಮೇಲೆ ಸಮೂಹ ಬಲಾತ್ಕಾರ ಎಸಗುತ್ತಿದ್ದ ೯ ಮಂದಿ ಮುಸಲ್ಮಾನ ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಪರವೇಜ್ ಅನ್ವರ್ ಖಾನ್ ಉರ್ಫ್ ಮುನಾವರ್ ಖಾನ್ ಪಠಾಣ್, ಮಾಹಿರ್ ಪಠಾಣ್, ಫೈಜಾನ್ ಪಠಾಣ್, ತೌಫಿಕ್ ಪಠಾಣ್, ಸಾಹಿಲ್ ಲಿಯಾಕತ್ ಖಾನ್, ಅಯಾನ್ ಪಠಾಣ್, ಮೊಯಿನ್, ಮಾರುನ್ ಮತ್ತು ಸಲ್ಮಾನ್ ಪಠಾಣ್ ಬಂಧಿತ ಆರೋಪಿಗಳಾಗಿದ್ದು, ಮತ್ತೊಬ್ಬ ಆರೋಪಿ ಸದ್ಯ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ವಿಶೇಷವೆಂದರೆ, ರಮಜಾನ ತಿಂಗಳಲ್ಲಿ ಈದ್ ಹಬ್ಬಕ್ಕೆ ೨ ದಿನಗಳ ಮೊದಲು ಆರೋಪಿಗಳು ಸಂತ್ರಸ್ತೆಯನ್ನು ಅಪಹರಿಸಿದ್ದರು. ಆನಂತರ ಅವರು ೨-೩ ದಿನಗಳ ಕಾಲ ಆಕೆಯ ಮೇಲೆ ಸಮೂಹ ಬಲಾತ್ಕಾರ ಎಸಗಿದ್ದರು.

. ೧೭ ವರ್ಷದ ಸಂತ್ರಸ್ತೆಯನ್ನು ೩ ವರ್ಷಗಳ ಹಿಂದೆ ಅದೇ ಗ್ರಾಮದ ಪರವೇಜ್ ಪಠಾಣ್ ಎಂಬ ಯುವಕ ಪ್ರೇಮಜಾಲದಲ್ಲಿ ಸಿಲುಕಿಸಿದ್ದನು. ಆನಂತರ ಆಕೆಯ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿ ಆಕೆಯನ್ನು ‘ಬ್ಲ್ಯಾಕ್‌ಮೇಲ್’ ಮಾಡಲಾರಂಭಿಸಿದ್ದನು. ಅಲ್ಲದೆ ತನ್ನ ಸ್ನೇಹಿತರೊಂದಿಗೂ ದೈಹಿಕ ಸಂಬಂಧ ಹೊಂದಲು ಪರವೇಜ್ ಆಕೆಯ ಮೇಲೆ ಒತ್ತಡ ಹೇರುತ್ತಿದ್ದನು.

. ಇತ್ತೀಚೆಗೆ ನಡೆದ ರಮಜಾನ್ ತಿಂಗಳ ಈದ್ ಹಬ್ಬಕ್ಕೆ ೨ ದಿನಗಳ ಮೊದಲು ಆರೋಪಿಗಳು ತನ್ನನ್ನು ಬಲವಂತವಾಗಿ ಕರೆದೊಯ್ದು ವಿವಿಧ ಸ್ಥಳಗಳಲ್ಲಿ ಸಮೂಹ ಬಲಾತ್ಕಾರ ಮಾಡಿದ್ದಾರೆ ಎಂದು ಸಂತ್ರಸ್ತೆಯು ಪೊಲೀಸರಿಗೆ ತಿಳಿಸಿದ್ದಾಳೆ. ಆಕೆಯ ಅಶ್ಲೀಲ ಛಾಯಾಚಿತ್ರಗಳು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದಾಗಿ ಬೆದರಿಕೆ ಹಾಕಿ ಆಕೆಯನ್ನು ಮೌನವಾಗಿರುವಂತೆ ಅನಿವಾರ್ಯಗೊಳಿಸಲಾಗುತ್ತಿತ್ತು.

. ಆರೋಪಿಗಳನ್ನು ವಶಕ್ಕೆ ಪಡೆದ ನಂತರ ಪೊಲೀಸರು ಅವರನ್ನು ಸಾರ್ವಜನಿಕ ಸ್ಥಳಗಳಲ್ಲಿ ಮೆರವಣಿಗೆ ಮಾಡಿದರು. ಈ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮಸ್ಥರು ನೆರೆದಿದ್ದರು. ಅವರು ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದ್ದಾರೆ.

ಸಂಪಾದಕೀಯ ನಿಲುವು

ಗುಜರಾತ್‌ನಲ್ಲಿ ಮತಾಂತರ ವಿರೋಧಿ ಕಾಯ್ದೆ ಜಾರಿಯಲ್ಲಿದ್ದರೂ ಇಂತಹ ಘಟನೆಗಳು ನಡೆಯುತ್ತಿರುವುದು ಅಪೇಕ್ಷಿತವಿಲ್ಲ !