ಭಂಡಾರದಲ್ಲಿ ಗೋಸಾಗಾಣಿಕೆದಾರರಿಂದ ದಾಳಿಯಾಗಿದ್ದರೂ ಪೊಲೀಸರ ಮೃದು ವರ್ತನೆ!

ಪೊಲೀಸರ ಕಾಲರ್ ಹಿಡಿದು ತಳ್ಳಾಟ ನಡೆಸಿದ ಆರೋಪ

ಭಂಡಾರ – ಇಲ್ಲಿನ ಲಖನಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಸಾಲೆಭಾಟಾ ಗ್ರಾಮದಲ್ಲಿ ಗೋಸಾಗಾಣಿಕೆಯನ್ನು ತಡೆಯಲು ಹೋದ ಪೊಲೀಸರ ಮೇಲೆ ಗೋಸಾಗಾಣಿಕೆದಾರರು ದಾಳಿ ನಡೆಸಿದ್ದಾರೆ. ಅವರು ನೇರವಾಗಿ ಪೊಲೀಸ್ ಸಿಬ್ಬಂದಿಯ ಕಾಲರ್ ಹಿಡಿದು ತಳ್ಳಾಟ ನಡೆಸಿದ್ದಾರೆ. ಲಖನಿಯ ಪೊಲೀಸ್ ನಿರೀಕ್ಷಕ ಸುಭಾಷ್ ಬಾರ್ಸೆ ಅವರು, “ಕಾಲರ್ ಹಿಡಿದಿರುವುದು ಅಥವಾ ತಳ್ಳಾಟ ನಡೆದಿಲ್ಲ; ಆದರೆ ಪೊಲೀಸರ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದಲ್ಲಿ ಗೋಸಾಗಾಣಿಕೆದಾರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ೧೫ ಗೋವುಗಳನ್ನು ರಕ್ಷಿಸಿ ಗೋಶಾಲೆಗೆ ಕಳುಹಿಸಲಾಗಿದೆ” ಎಂದು ಹೇಳಿದ್ದಾರೆ.

೧. ಸಾಲೆಭಾಟಾ ಗ್ರಾಮದ ಕೃಷಿ ಜಮೀನಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗೋವುಗಳನ್ನು ಕಟ್ಟಿಹಾಕಲಾಗಿದ್ದು, ಅವುಗಳನ್ನು ಕಸಾಯಿಖಾನೆಗೆ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ‘ಗೋರಕ್ಷಾ ಹಿಂದೂ ದಳ’ ಮತ್ತು ‘ಬಜರಂಗ ದಳ’ದ ಕಾರ್ಯಕರ್ತರಿಗೆ ಸಿಕ್ಕಿತು. ಅವರು ಈ ಮಾಹಿತಿಯನ್ನು ಪೊಲೀಸರಿಗೆ ನೀಡಿದರು. (ಯಾವ ಮಾಹಿತಿ ಗೋರಕ್ಷಕರಿಗೆ ಸಿಗುವುದೋ, ಅದು ಎಲ್ಲಾ ವ್ಯವಸ್ಥೆಯನ್ನು ಕೈಯಲ್ಲಿ ಹೊಂದಿರುವ ಪೊಲೀಸರಿಗೆ ಏಕೆ ಸಿಗುವುದಿಲ್ಲ? – ಸಂಪಾದಕರು)

೨. ಪೊಲೀಸ್ ಸಿಬ್ಬಂದಿ ಮತ್ತು ಹಿಂದುತ್ವನಿಷ್ಠ ಕಾರ್ಯಕರ್ತರು ಘಟನಾ ಸ್ಥಳಕ್ಕೆ ತಲುಪಿದಾಗ ಗೋಸಾಗಾಣಿಕೆದಾರರು ಆಕ್ರಮಣಕಾರಿಗಳಾದರು.

೩. ಸಾಗಾಣಿಕೆದಾರರಲ್ಲಿ ಒಬ್ಬನು ಪೊಲೀಸರೊಂದಿಗೆ ತಳ್ಳಾಟ ನಡೆಸಿದರೆ, ಇನ್ನೊಬ್ಬನು ಕೈಯಲ್ಲಿ ಲಾಠಿ ಹಿಡಿದು ಗೋವುಗಳಿದ್ದ ವಾಹನವನ್ನು ಗೋಶಾಲೆಗೆ ಕೊಂಡೊಯ್ಯದಂತೆ ತಡೆದನು. ಪೊಲೀಸರನ್ನು ರಸ್ತೆಯಲ್ಲೇ ತಡೆದು ಬೆದರಿಕೆ ಹಾಕಿದರು. ಈ ಘಟನೆಯು ವಿಡಿಯೋ ಮೂಲಕ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗಿದೆ.

ಪೊಲೀಸರ ಮೇಲೆ ಕೈ ಎತ್ತಿದ ಸಾಗಾಣಿಕೆದಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಬಜರಂಗ ದಳವು ಒತ್ತಾಯಿಸಿದೆ.

ಸಂಪಾದಕೀಯ ನಿಲುವು

  • ಪೊಲೀಸರಿಗೆ ಗೋಸಾಗಾಣಿಕೆದಾರರ ಭಯವಿದೆಯೇ ಅಥವಾ ಯಾರದೋ ಒತ್ತಡದಿಂದ ಪೊಲೀಸರು ತಮ್ಮ ಪ್ರತಿಮೆಯನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆಯೇ?, ಎಂಬ ಪ್ರಶ್ನೆ ಯಾರ ಮನಸ್ಸಿನಲ್ಲಾದರೂ ಉದ್ಭವಿಸಿದರೆ ಅದರಲ್ಲಿ ತಪ್ಪೇನಿದೆ?
  • ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಗೋಸಾಗಾಣಿಕೆದಾರರಿಗೆ ರಕ್ಷಣೆ ನೀಡುವ ಪೊಲೀಸರು ಏನು ಪ್ರಯೋಜನ ?