2002ರ ಗುಜರಾತ್ ಗಲಭೆಯ ಪ್ರಕರಣದಲ್ಲಿ 9 ಹಿಂದೂಗಳ ಖುಲಾಸೆ

ಕರ್ಣಾವತಿ (ಗುಜರಾತ್) – 2002ರ ಗುಜರಾತ್ ಗಲಭೆಗೆ ಸಂಬಂಧಿಸಿದ ಮಹತ್ವದ ಪ್ರಕರಣವೊಂದರಲ್ಲಿ ಇಲ್ಲಿನ ಸ್ಥಳೀಯ ನ್ಯಾಯಾಲಯವು 9 ಹಿಂದೂಗಳನ್ನು ಖುಲಾಸೆ ಗೊಳಿಸಿದೆ. ಈ ವ್ಯಕ್ತಿಗಳ ಮೇಲೆ ಗಲಭೆ ನಡೆಸುವುದು, ಕಾನೂನುಬಾಹಿರವಾಗಿ ಗುಂಪು ಸೇರುವುದು ಮತ್ತು ಕಲ್ಲು ತೂರಾಟ ನಡೆಸಿದ ಆರೋಪಗಳಿದ್ದವು. ‘ಆರೋಪಿಗಳ ಮೇಲಿನ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ’ ಎಂದು ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಉಲ್ಲೇಖಿಸಿದೆ. ಮೇ 9, 2002 ರಂದು ಇಲ್ಲಿನ ಮಾಧವಪುರ ಪ್ರದೇಶದಲ್ಲಿ ಕಲ್ಲು ತೂರಾಟ ಮತ್ತು ಗಲಭೆ ನಡೆಸಿದ ಆರೋಪದ ಮೇಲೆ ಪೊಲೀಸರು ಒಟ್ಟು 11 ಹಿಂದೂಗಳ ವಿರುದ್ಧ ಪ್ರಕರಣ ದಾಖಲಿಸಿದ್ದರು.

ಆರೋಪ ಎದುರಿಸುತ್ತಿದ್ದ 11 ವ್ಯಕ್ತಿಗಳಲ್ಲಿ ಇಬ್ಬರು ಈಗಾಗಲೇ ಮೃತಪಟ್ಟಿದ್ದರು. ನ್ಯಾಯಾಲಯಕ್ಕೆ ಹಾಜರಾದ 4 ಸಾಕ್ಷಿಗಳು 23 ವರ್ಷಗಳ ನಂತರ ಆರೋಪಿಗಳನ್ನು ಗುರುತಿಸಲು ಸಾಧ್ಯವಾಗಲಿಲ್ಲ. ಈ ಪರಿಸ್ಥಿತಿಯನ್ನು ಪರಿಗಣಿಸಿ, ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಡಿ.ಜೆ. ಪರ್ಮಾರ್ ಅವರು ಉಳಿದ 9 ಆರೋಪಿಗಳನ್ನು ನಿರ್ದೋಷಿಗಳೆಂದು ಬಿಡುಗಡೆ ಮಾಡಿದರು.

ಸಂಪಾದಕೀಯ ನಿಲುವು

ವಿಳಂಬವಾಗಿ ಸಿಗುವ ನ್ಯಾಯವು ಅನ್ಯಾಯವೇ ಹೌದು!