‘ದಾವುದ್ ಇಬ್ರಾಹಿಂನಿಂದಾಗಿ ನನ್ನ ಮನೆ ನಡೆಯುತ್ತಿದೆ!’

ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರ ವಿವಾದಾತ್ಮಕ ಹೇಳಿಕೆ

ಮುಂಬಯಿ – ನಾನು ದಾವುದ್ ಇಬ್ರಾಹಿಂನಿಂದಾಗಿ ಬದುಕುತ್ತಿದ್ದೇನೆ. ಅವನಿಂದಲೇ ನನ್ನ ಮನೆ ನಡೆಯುತ್ತಿದೆ, ಎಂದು ಖ್ಯಾತ ಚಲನಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ‘ಫಿಲ್ಮಫೇರ್’ ಎಂಬ ಯೂಟ್ಯೂಬ್ ಚಾನೆಲ್‌ ಗೆ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ರಾಮ್ ಗೋಪಾಲ್ ವರ್ಮಾ ಈ ಮಾತುಗಳನ್ನಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಮ್ ಗೋಪಾಲ್ ವರ್ಮಾ, ನಾನು ನನ್ನ ‘ಗನ್ಸ್ ಆಂಡ್ ಥೈಸ್’ ಎಂಬ ಆತ್ಮಚರಿತ್ರೆಯನ್ನು ದಾವುದ್ ಇಬ್ರಾಹಿಂನಿಗೆ ಅರ್ಪಿಸಿದ್ದೆ; ಆದರೆ ಪ್ರಕಾಶಕರು ದಾವುದ್ ಹೆಸರನ್ನು ತೆಗೆದುಹಾಕಿದರು. ಒಂದು ವೇಳೆ ದಾವುದ್ ಇಬ್ರಾಹಿಂ ಇಲ್ಲದಿದ್ದರೆ, ನಾನು ‘ಸತ್ಯಾ’ ಮತ್ತು ‘ಕಂಪನಿ’ಯಂತಹ ಅಮರ ಚಿತ್ರಗಳನ್ನು ನಿರ್ಮಿಸಲು ಸಾಧ್ಯವಾಗುತ್ತಿರಲಿಲ್ಲ. ಹಾಗಿರುವಾಗ ನಾನು ಅವನಿಗೆ ಈ ಪುಸ್ತಕವನ್ನು ಏಕೆ ಅರ್ಪಿಸಬಾರದು? ಅವನಿಂದಲೇ ನನ್ನ ಮನೆ ನಡೆಯುತ್ತಿದೆ. ಅಪರಾಧಿಗಳಿಂದ ಬೆದರಿಕೆ ಕರೆಗಳು ಬಾರದ ಏಕೈಕ ವ್ಯಕ್ತಿ ನಾನಾಗಿದ್ದೆ; ಏಕೆಂದರೆ ಅವರಿಗೆ ‘ಸತ್ಯಾ’ ಮತ್ತು ‘ಕಂಪನಿ’ ಚಿತ್ರಗಳು ತುಂಬಾ ಇಷ್ಟವಾಗಿದ್ದವು. ನನಗೆ ತೊಂದರೆ ಕೊಡುವ ಯಾವುದೇ ಇಚ್ಛೆ ಗೂಂಡಾಗಳಿಗಿಲ್ಲ. ನಾನು ಒಂದು ರೀತಿಯಲ್ಲಿ ಅವರಿಗೆ ಆಪ್ತ ಮಿತ್ರನಾಗಿದ್ದೆ, ಎಂದು ಅವರು ಹೇಳಿದರು.

ಸಂಪಾದಕೀಯ ನಿಲುವು

ರಾಮ್ ಗೋಪಾಲ್ ವರ್ಮಾ ಅವರ ಹೇಳಿಕೆಯಿಂದ ಹಿಂದಿ ಚಿತ್ರರಂಗಕ್ಕೆ ಹಣ ಎಲ್ಲಿಂದ ಬರುತ್ತಿತ್ತು ಎಂಬುದು ಸ್ಪಷ್ಟವಾಗುತ್ತದೆ. ಈ ಕಾರಣದಿಂದಲೇ ಹಿಂದಿ ಚಿತ್ರರಂಗದಲ್ಲಿ ಹಿಂದೂಗಳ ಶ್ರದ್ಧಾಕೇಂದ್ರಗಳನ್ನು ಪದೇ-ಪದೇ ಕೀಳಾಗಿ ಕಾಣುವುದು ಮತ್ತು ವಿಡಂಬನೆ ಮಾಡುವುದು ಸಾಮಾನ್ಯವಾಗಿ ನಡೆಯುತ್ತಿತ್ತು ಹಾಗೂ ಈಗಲೂ ನಡೆಯುತ್ತಿದೆ. ಹಿಂದಿ ಚಿತ್ರರಂಗದಲ್ಲಿ ಯಾರು ಯಾರಿಗೆ ಹಣ ಪೂರೈಸುತ್ತಿದ್ದರು ಎಂಬುದರ ಕುರಿತು ಪೊಲೀಸರು ಆಳವಾದ ತನಿಖೆ ನಡೆಸುವುದು ಅವಶ್ಯಕವಾಗಿದೆ!