ನ್ಯಾಯವಾದಿ ಅಲೋಕ್ ಕುಮಾರ್ ಅವರಿಂದ ‘ಸುರಾಜ್ಯ ಅಭಿಯಾನ’ದ ‘ವೆಬ್ ಪೇಜ್’ ಲೋಕಾರ್ಪಣೆ!

‘ಸುರಾಜ್ಯ ಅಭಿಯಾನ’ದ ‘ವೆಬ್ ಪೇಜ್’ ಲೋಕಾರ್ಪಣೆ ಸಮಾರಂಭದ ಸಂದರ್ಭದಲ್ಲಿ ಎಡದಿಂದ ಡಾ. ಅಂಜೇಶ್ ಕಣಂಗಲೇಕರ್ ಮತ್ತು ನ್ಯಾಯವಾದಿ ಅಲೋಕ್ ಕುಮಾರ್

ವಿಶ್ವ ಹಿಂದೂ ಪರಿಷತ್ತಿನ ಅಂತರರಾಷ್ಟ್ರೀಯ ಅಧ್ಯಕ್ಷರು ಹಾಗೂ ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿಗಳಾದ ಅಲೋಕ್ ಕುಮಾರ್ ಅವರಿಂದ ಹಿಂದೂ ಜನಜಾಗೃತಿ ಸಮಿತಿ ಪ್ರಣೀತ ‘ಸುರಾಜ್ಯ ಅಭಿಯಾನ’ದ ‘ವೆಬ್ ಪೇಜ್’ ಅನ್ನು ಇತ್ತೀಚೆಗಷ್ಟೇ ಲೋಕಾರ್ಪಣೆ ಮಾಡಲಾಯಿತು. ಈ ಸಂದರ್ಭದಲ್ಲಿ ‘ಸುರಾಜ್ಯ ಅಭಿಯಾನ’ದ ಸಂಯೋಜಕರಾದ ಡಾ. ಅಂಜೇಶ್ ಕಣಂಗಲೇಕರ್ ಉಪಸ್ಥಿತರಿದ್ದರು. ಇದೇ ವೇಳೆ ಡಾ. ಅಲೋಕ್ ಕುಮಾರ್ ಅವರಿಗೆ ‘ಸುರಾಜ್ಯ ಅಭಿಯಾನ’ವು ಮಾಡುತ್ತಿರುವ ಸಮಾಜ ಹಿತೈಷಿ ಕಾರ್ಯಗಳ ಕುರಿತು ಸಂಕ್ಷಿಪ್ತವಾಗಿ ತಿಳಿಸಲಾಯಿತು.