ಸಮ್ರಾಟ ವಿಕ್ರಮಾದಿತ್ಯ ವಿಶ್ವವಿದ್ಯಾಲಯದ ಪ್ರಶ್ನೆಪತ್ರಿಕೆಯಲ್ಲಿ ‘ಅಲ್ಲಾನಲ್ಲದೆ ಬೇರೆ ಯಾರೂ ಇಲ್ಲವೇ?’ ಎಂದು ಪ್ರಶ್ನೆ ಕೇಳಿದ ಪ್ರಾಧ್ಯಾಪಕನ ಮೇಲೆ ಕ್ರಮ!

ಉಜ್ಜಯಿನಿ (ಮಧ್ಯಪ್ರದೇಶ) – ಬಿ.ಕಾಂ, ಬಿಸಿಎ ಮತ್ತು ಬಿಬಿಎ ಪರೀಕ್ಷೆಯಲ್ಲಿ ‘ಅಲ್ಲಾನಲ್ಲದೆ ಬೇರೆ ಯಾರೂ ಇಲ್ಲವೇ?’ ಎಂಬ ಪ್ರಶ್ನೆ ಕೇಳಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಮ್ರಾಟ ವಿಕ್ರಮಾದಿತ್ಯ ವಿಶ್ವವಿದ್ಯಾಲಯದ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ಪ್ರಾಧ್ಯಾಪಕನನ್ನು ವಿಚಾರಣೆ ಪೂರ್ಣಗೊಳ್ಳುವವರೆಗೆ ಎಲ್ಲಾ ಕೆಲಸಗಳಿಂದ ಮುಕ್ತಗೊಳಿಸಲಾಗಿದೆ. ಅಲ್ಲದೆ, ಆ ಪ್ರಾಧ್ಯಾಪಕನನ್ನು ಕಪ್ಪುಪಟ್ಟಿಗೆ ಸೇರಿಸುವ ಪ್ರಕ್ರಿಯೆಯೂ ಚಾಲನೆಯಲ್ಲಿದೆ. ಈಗ ಈ ಪ್ರಶ್ನೆಪತ್ರಿಕೆಯಲ್ಲಿನ ವಿವಾದಾತ್ಮಕ ಪ್ರಶ್ನೆಯನ್ನು ರದ್ದುಗೊಳಿಸಲಾಗಿದ್ದು, ಅದರ ಬದಲಿಗೆ ಎಲ್ಲಾ ವಿದ್ಯಾರ್ಥಿಗಳಿಗೆ ೧ ಅಂಕ ನೀಡಲಾಗುವುದು. ಈ ಪ್ರಶ್ನೆಗೆ ೪ ಆಯ್ಕೆಗಳನ್ನು ನೀಡಲಾಗಿತ್ತು, ಅದರಲ್ಲಿ ‘ಸೋಮೇಶ್ವರ’, ‘ಖುದಾ’, ‘ಶಕ್ತಿಮಾನ್’ ಮತ್ತು ‘ದಂಡ ನೀಡುವವನು’ ಎಂಬ ಆಯ್ಕೆಗಳು ಸೇರಿದ್ದವು. ಈ ಪ್ರಾಧ್ಯಾಪಕನ ಹೆಸರು ಇನ್ನೂ ಬಹಿರಂಗವಾಗಿಲ್ಲ.

೧. ಪ್ರಶ್ನೆಪತ್ರಿಕೆಯು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾದ ನಂತರ, ಮಧ್ಯಪ್ರದೇಶ ಕಾಂಗ್ರೆಸ್ ನ ತರಾನಾ ಕ್ಷೇತ್ರದ ಶಾಸಕ ಮಹೇಶ ಪರಮಾರ, ಸಂತ ಶಾಂತಿಸ್ವರೂಪಾನಂದ ಮಹಾರಾಜರು ಮತ್ತು ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿ ಕ್ರಮಕ್ಕೆ ಒತ್ತಾಯಿಸಿದ್ದವು.

೨. ವಿಶ್ವವಿದ್ಯಾಲಯದ ಕುಲಸಚಿವ ಡಾ. ಅನಿಲ ಕುಮಾರ ಶರ್ಮಾ ಅವರು ಮಾತನಾಡಿ, ಪ್ರಶ್ನೆಪತ್ರಿಕೆಯಲ್ಲಿನ ಈ ಪ್ರಶ್ನೆಗೆ ಸಂಬಂಧಿಸಿದಂತೆ ಪರೀಕ್ಷಾ ಸಮಿತಿಯ ವರದಿಯ ಆಧಾರದ ಮೇಲೆ ದೋಷಿ ಪ್ರಾಧ್ಯಾಪಕನ ವಿರುದ್ಧ ದಂಡನಾತ್ಮಕ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ವಿವಾದಾತ್ಮಕ ಪ್ರಶ್ನೆಯು ಅಧಿಕೃತ ಪಠ್ಯಕ್ರಮದ ಭಾಗವಾಗಿರಲಿಲ್ಲ ಎಂದು ಪರೀಕ್ಷಾ ಸಮಿತಿಯು ವರದಿಯಲ್ಲಿ ಸ್ಪಷ್ಟಪಡಿಸಿದೆ. ಆ ಪ್ರಶ್ನೆಯನ್ನು ಸಂಪೂರ್ಣವಾಗಿ ಸ್ವಂತ ಮಟ್ಟದಲ್ಲಿ ಸೇರಿಸುವ ಮೂಲಕ ಪ್ರಾಧ್ಯಾಪಕನು ನಿಯಮಗಳನ್ನು ಉಲ್ಲಂಘಿಸಿದ್ದಾನೆ.

೩. ಸಮ್ರಾಟ ವಿಕ್ರಮಾದಿತ್ಯ ವಿಶ್ವವಿದ್ಯಾಲಯದ ಕುಲಪತಿ ಅರ್ಪಣ ಭಾರದ್ವಾಜ ಅವರು ಮಾತನಾಡಿ, ವಿವಾದಾತ್ಮಕ ಪ್ರಶ್ನೆಪತ್ರಿಕೆ ಸಿದ್ಧಪಡಿಸಿದ ಪ್ರಾಧ್ಯಾಪಕನ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ನಿಯಮದಂತೆ ಪ್ರಶ್ನೆಪತ್ರಿಕೆಯನ್ನು ಪರೀಕ್ಷಾ ಸಮಿತಿಗೆ ಸಲ್ಲಿಸಲಾಗಿತ್ತು. ಸಮಿತಿಯ ವರದಿಯ ಆಧಾರದ ಮೇಲೆ ದೋಷಿ ಪ್ರಾಧ್ಯಾಪಕನ ವಿರುದ್ಧ ಮುಂದಿನ ಕ್ರಮದ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ತಿಳಿಸಿದರು.

ಸಂಪಾದಕೀಯ ನಿಲುವು

ಶಿಕ್ಷಣದ ಮಾಧ್ಯಮದಿಂದ ಸಮಾಜದ ವಿವಿಧ ಘಟಕಗಳ ನಡುವಿನ ಪರಸ್ಪರ ಸಂಬಂಧಗಳನ್ನು ವೃದ್ಧಿಸುವುದು ಅಪೇಕ್ಷಿತವಾಗಿರುವಾಗ, ಇಂತಹ ವಿವಾದಾತ್ಮಕ ಪ್ರಶ್ನೆಗಳನ್ನು ಕೇಳಿ ಸಮಾಜದಲ್ಲಿ ಸಂಘರ್ಷ ಸೃಷ್ಟಿಸುವ ಶಿಕ್ಷಕರು ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ಅರ್ಹರೇ ?