
ಭಾಗ್ಯನಗರ (ತೆಲಂಗಾಣ) – ಕುಕಟಪಲ್ಲಿಯಲ್ಲಿ ನವಾಜ್ ಎಂಬಾತನು ಹಿಂದೂ ಹೆಸರನ್ನು ಇಟ್ಟುಕೊಂಡು ಓರ್ವ ಹಿಂದೂ ಯುವತಿಯನ್ನು ಪ್ರೇಮದ ಬಲೆಯಲ್ಲಿ ಸಿಲುಕಿಸಿ ಆಕೆಯನ್ನು ವಿವಾಹವಾದನು. ನವಾಜ್ ವಿವಾಹದ ಮೊದಲ ರಾತ್ರಿಯಂದೇ ತನ್ನ ಗೆಳೆಯರೊಂದಿಗೆ ಸೇರಿ ಹಿಂದೂ ಯುವತಿಯ ಮೇಲೆ ಸಾಮೂಹಿಕ ಬಲಾತ್ಕಾರ ಎಸಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
೧. ವಿವಾಹದ ಮೊದಲ ರಾತ್ರಿ ಕೊಠಡಿಯನ್ನು ಅಲಂಕರಿಸುವ ನೆಪದಲ್ಲಿ ಆತನು ತನ್ನ ಗೆಳೆಯರನ್ನು ಕರೆಸಿದ್ದನು. ಸಂತ್ರಸ್ತೆಯು ತನ್ನ ದೂರಿನಲ್ಲಿ, ‘ನಾನು ಕೊಠಡಿಯೊಳಗೆ ಬರುತ್ತಿದ್ದಂತೆಯೇ ನವಾಜ್ ತನ್ನ ಗೆಳೆಯರಾದ ಮುನ್ನವರ್, ಶಾರುಖ್, ಇಸ್ಮಾಯಿಲ್, ಇರ್ಫಾನ್ ಮತ್ತು ಸಮೀರ್ ಎಂಬುವವರೊಂದಿಗೆ ಸೇರಿ ಸಾಮೂಹಿಕ ಬಲಾತ್ಕಾರ ಮಾಡಿದನು. ಈ ಘಟನೆಯ ಬಗ್ಗೆ ಯಾರಿಗಾದರೂ ತಿಳಿಸಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದನು’ ಎಂದು ತಿಳಿಸಿದ್ದಾಳೆ.
೨. ಮದುವೆಯಾದ ಕೆಲವು ದಿನಗಳ ನಂತರ ಸಂತ್ರಸ್ತೆಗೆ ತಾನು ನವಾಜ್ ನ ಮೂರನೇ ಪತ್ನಿ ಎಂಬ ವಿಷಯ ತಿಳಿಯಿತು. ಮದುವೆಗೆ ಮುಂಚೆ ಮತ್ತು ಮದುವೆಯ ನಂತರವೂ ನವಾಜ್ ಸಂತ್ರಸ್ತೆಯಿಂದ ಬಹಳಷ್ಟು ಹಣ ಮತ್ತು ಚಿನ್ನದ ಆಭರಣಗಳನ್ನು ಪಡೆದಿದ್ದನು. ಅಷ್ಟೇ ಅಲ್ಲದೆ, ವಿವಿಧ ಕಾರಣಗಳನ್ನು ನೀಡಿ ಸಂತ್ರಸ್ತೆಯ ಕುಟುಂಬದವರಿಂದಲೂ ಹಣ ಪಡೆದಿದ್ದಾನೆಂಬ ಆರೋಪವಿದೆ.
೩. ಇಷ್ಟೇ ಅಲ್ಲದೆ ಸಂತ್ರಸ್ತೆಯ ಮನೆ ಹಾಗೂ ಆಕೆಯ ಆಭರಣಗಳನ್ನೂ ಸಹ ಅಡವಿಟ್ಟು ಈತ ಹಣ ಪಡೆದಿದ್ದಾನೆ. ಮದುವೆಯ ನಂತರ ಸಂತ್ರಸ್ತೆಗೆ ಗೋಮಾಂಸ ತಿನ್ನಲು ಮತ್ತು ‘ಕಲ್ಮಾ’ (ಅಲ್ಲಾನನ್ನು ಸ್ತುತಿಸುವ ವಾಕ್ಯಗಳು) ಪಠಿಸಲು ಒತ್ತಡ ಹೇರುತ್ತಿದ್ದನು ಎಂದು ಸಂತ್ರಸ್ತೆಯು ಆರೋಪಿಸಿದ್ದಾಳೆ.
ಸಂಪಾದಕೀಯ ನಿಲುವುಇಂತಹವರ ವಿರುದ್ಧ ತ್ವರಿತ ಗತಿಯ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ, ಸಾರ್ವಜನಿಕವಾಗಿ ಗಲ್ಲು ಶಿಕ್ಷೆ ವಿಧಿಸಬೇಕೆಂದು ಯಾರಾದರೂ ಒತ್ತಾಯಿಸಿದರೆ ಅದರಲ್ಲಿ ಆಶ್ಚರ್ಯಪಡುವಂತದ್ದೇನೂ ಇಲ್ಲ ! |
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ
‘ಲವ್ ಜಿಹಾದ್’, ‘ಲ್ಯಾಂಡ್ ಜಿಹಾದ್’ ಇವೆಲ್ಲಾ ಮೂರ್ಖತನದ ಸಂಗತಿಗಳಂತೆ !
ತುಮಕೂರಿನಲ್ಲಿ ಶ್ರೀರಾಮಮಂದಿರದ ಹತ್ತಿರ ಅಲ್ಪಸಂಖ್ಯಾತರ ವಸತಿಗೃಹ ನಿರ್ಮಿಸುವ ಸಂಚು !
ನಾಗಪುರ: ಮಾನಸಿಕ ಒತ್ತಡದಿಂದಾಗಿ ‘ನೀಟ್’ ಪರೀಕ್ಷೆಯ ವಿದ್ಯಾರ್ಥಿನಿ ಆತ್ಮಹತ್ಯೆ