ಭಾಗ್ಯನಗರದಲ್ಲಿ ನಡೆಯಲಿದ್ದ ಹಿಂದೂದ್ವೇಷಿ ಹಾಸ್ಯ ಕಲಾವಿದ ನಸೀಫ್ ಅಖ್ತರ್ ಇವರ ಕಾರ್ಯಕ್ರಮ ರದ್ದು – Nasif Akhtar Show

ತೆಲಂಗಾಣದಲ್ಲಿ ಹಿಂದೂಗಳ ಸಂಘಟಿತ ಪ್ರಯತ್ನದ ಫಲ!

ಭಾಗ್ಯನಗರ (ತೆಲಂಗಾಣ) – ಭಾರತ, ಬ್ರಾಹ್ಮಣರು, ಹಿಂದೂಗಳ ದೇವಸ್ಥಾನಗಳು ಹಾಗೂ ಹಿಂದೂ ರಾಷ್ಟ್ರದ ಬಗ್ಗೆ ಅತ್ಯಂತ ಅವಮಾನಕಾರಿ ಹೇಳಿಕೆಗಳನ್ನು ನೀಡುವ ಹಾಸ್ಯ ಕಲಾವಿದ ನಸೀಫ್ ಅಖ್ತರ್ ನ ಕಾರ್ಯಕ್ರಮವು ಇಲ್ಲಿ ಏಪ್ರಿಲ್ ೩ ರಂದು ನಡೆಯಬೇಕಿತ್ತು. ಇದರ ವಿರುದ್ಧ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಕಾರ್ಯಕರ್ತರು ಗಚ್ಚಿಬೌಲಿ ಪೊಲೀಸ್ ಠಾಣೆಯಲ್ಲಿ ಪೊಲೀಸ ಉಪಾಯುಕ್ತರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಕ್ರಮವನ್ನು ರದ್ದುಗೊಳಿಸಿದ್ದಾರೆ.

ಹಾಸ್ಯದ ಹೆಸರಿನಲ್ಲಿ ಹಿಂದೂ ಧರ್ಮ ಮತ್ತು ಭಾರತ ದೇಶವನ್ನು ಅವಮಾನಿಸುವ ಈ ಕಾರ್ಯಕ್ರಮಕ್ಕೆ ಭಾಗ್ಯನಗರದಲ್ಲಿ ಅನುಮತಿ ನೀಡಬಾರದು ಎಂದು ಹಿಂದುತ್ವನಿಷ್ಠರು ಆಗ್ರಹಿಸಿದ್ದರು. ಈ ಹಿಂದೆ ಬೆಂಗಳೂರಿನಲ್ಲಿಯೂ ಆಯೋಜಿಸಲಾಗಿದ್ದ ಅಖ್ತರ್ ನ ಕಾರ್ಯಕ್ರಮಕ್ಕೆ ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯು ವಿರೋಧ ವ್ಯಕ್ತಪಡಿಸಿ ದೂರು ನೀಡಿದ್ದರಿಂದ ಆ ಕಾರ್ಯಕ್ರಮವೂ ರದ್ದಾಗಿತ್ತು.

ಭಾಗ್ಯನಗರದ ಕಾರ್ಯಕ್ರಮಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ ನಂತರ, ನಸೀಫ್ ಅಖ್ತರ್ ವಿಡಿಯೋ ಒಂದನ್ನು ಪ್ರಸಾರ ಮಾಡಿ ಭಾರತದಲ್ಲಿ ನಡೆಯಲಿರುವ ತನ್ನ ಮುಂದಿನ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸುತ್ತಿರುವುದಾಗಿ ಮಾಹಿತಿ ನೀಡಿದ್ದಾನೆ.

ಸಂಪಾದಕೀಯ ನಿಲುವು

  • ಹಿಂದೂಗಳು ಅಂತಹ ಎಷ್ಟು ಕಾರ್ಯಕ್ರಮಗಳನ್ನು ರದ್ದುಗೊಳಿಸಬೇಕು? ಬದಲಾಗಿ, ಕೇಂದ್ರ ಸರಕಾರವು ಹಿಂದೂಗಳ ಶ್ರದ್ಧಾಕೇಂದ್ರಗಳನ್ನು ಹಾಸ್ಯ ಮಾಡುವವರಿಗೆ ಕಠಿಣ ಶಿಕ್ಷೆ ವಿಧಿಸುವ ಈಶ್ವರನಿಂದನೆ ಕಾಯ್ದೆಯನ್ನು ಜಾರಿಗೆ ತರಬೇಕು. ಇದಕ್ಕಾಗಿ ಈಗ ಹಿಂದೂಗಳೇ ಸರಕಾರದ ಮೇಲೆ ಒತ್ತಡ ಹೇರಬೇಕು!
  • ಹಿಂದೂಗಳ ಶ್ರದ್ಧಾಕೇಂದ್ರಗಳು ಮತ್ತು ಭಾರತದ ಬಗ್ಗೆ ಯಾವುದೇ ಮಾಧ್ಯಮಗಳ ಮೂಲಕ ಯಾರೂ ಅವಮಾನಿಸಲು ಧೈರ್ಯ ಮಾಡದಂತಹ ವರ್ಚಸ್ಸನ್ನು ಹಿಂದೂಗಳು ಯಾವಾಗ ನಿರ್ಮಾಣ ಮಾಡುತ್ತಾರೆ?