ಹಿಂದೂ ಮಹಿಳೆಯ ಮಾಂಗಲ್ಯ ಸರ ಕದ್ದ ಇಬ್ಬರು ಮುಸ್ಲಿಂ ಯುವಕರ ಬಂಧನ!

ಕಾನ್ಪುರ (ಉತ್ತರ ಪ್ರದೇಶ) – ಉತ್ತರ ಪ್ರದೇಶದ ಕಾನ್ಪುರದಲ್ಲಿ ‘ಸಿವಿಲ್ ಡಿಫೆನ್ಸ್’ ನ ಉದ್ಯೋಗಿಯಾಗಿರುವ ಅನಿತಾ ಶ್ರೀವಾಸ್ತವ ಅವರ ಮಾಂಗಲ್ಯ ಸರವನ್ನು ಕದ್ದ ಎಹ್ತಿಶಾಮ್ ಮತ್ತು ರಿಯಾನ್ ಹೆಸರಿನ ಇಬ್ಬರು ಮುಸ್ಲಿಂ ಯುವಕರನ್ನು ಪೊಲೀಸರು ಎನ್‌ಕೌಂಟರ್ ನಂತರ ಬಂಧಿಸಿದ್ದಾರೆ. ಈ ಎನ್‌ಕೌಂಟರ್‌ನಲ್ಲಿ ಎಹ್ತಿಶಾಮ್ ನ ಕಾಲಿಗೆ ಗುಂಡು ತಗುಲಿದ್ದು, ಆತನನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. (ಅಪರಾಧ ಕೃತ್ಯಗಳಲ್ಲಿ ಮುಂಚೂಣಿಯಲ್ಲಿರುವ ಮತಾಂಧ ಮುಸಲ್ಮಾನರು! – ಸಂಪಾದಕರು)

ಇಬ್ಬರೂ ಅಪರಾಧಿಗಳು ಒಂದೇ ಸಮಯದಲ್ಲಿ ಇಬ್ಬರು ಮಹಿಳೆಯರ ವಸ್ತುಗಳನ್ನು ಕದ್ದರು. ಒಬ್ಬ ಮಹಿಳೆಯ ಮಾಂಗಲ್ಯ ಸರ, ಹಾಗೂ ಇನ್ನೊಬ್ಬ ಮಹಿಳೆಯ ಬ್ಯಾಗ್ ಕಿತ್ತುಕೊಂಡು ಆರೋಪಿಗಳು ಪರಾರಿಯಾಗಿದ್ದರು. ಮಾಂಗಲ್ಯ ಸರ ಕಳೆದುಕೊಂಡ ಸಂತ್ರಸ್ತ ಮಹಿಳೆಯು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದರು. ಪೊಲೀಸರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಆರೋಪಿ ಯುವಕರು ಅಲಕನಂದಾ ರೈಲ್ವೆ ಮೇಲ್ಸೇತುವೆ ಬಳಿ ಮತ್ತೊಂದು ಕಳ್ಳತನದ ಸಿದ್ಧತೆಯಲ್ಲಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತು. ಪೊಲೀಸರು ಅವರನ್ನು ಸುತ್ತುವರಿದರು. ಪೊಲೀಸರು ಸುತ್ತುವರಿದಿರುವುದನ್ನು ಗಮನಿಸಿದ ಆರೋಪಿಗಳು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಒಬ್ಬ ಆರೋಪಿಯ ಕಾಲಿಗೆ ಗುಂಡು ತಗುಲಿದೆ. ಆ ನಂತರ ಪೊಲೀಸರು ಇಬ್ಬರನ್ನೂ ಬಂಧಿಸಿದ್ದಾರೆ. ಅವರು ಕದ್ದಿರುವ ಮಾಂಗಲ್ಯ ಸರದ ಜೊತೆಗೆ, ೧ ದೇಸಿ ನಿರ್ಮಿತ ಪಿಸ್ತೂಲು, ೨ ಗುಂಡುಗಳು ಮತ್ತು ೧ ದ್ವಿಚಕ್ರ ವಾಹನವನ್ನು ಅವರಿಂದ ವಶಪಡಿಸಿಕೊಳ್ಳಲಾಗಿದೆ.