ಉತ್ತರ ಪ್ರದೇಶ: ಎಐಎಂಐಎಂ ಅಧ್ಯಕ್ಷ ಹಾಜಿ ಶೌಕತ್ ಅಲಿ ಅವರ ವಿವಾದಾತ್ಮಕ ಹೇಳಿಕೆ!
(ಎಐಎಂಐಎಂ ಎಂದರೆ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೆಹಾದುಲ್ ಮುಸ್ಲಿಮೀನ್)

ಮೆರಠ್ (ಉತ್ತರಪ್ರದೇಶ) – ಮೆರಠದಲ್ಲಿ ನಡೆದ ಈದ್ ಮಿಲನ್ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಎಂಐಎಂ ರಾಜ್ಯಾಧ್ಯಕ್ಷ ಹಾಜಿ ಶೌಕತ್ ಅಲಿ, “ನೀವು ನನಗೆ 111 ಅಲ್ಲ, ಕೇವಲ 11 ಶಾಸಕರನ್ನು ಉತ್ತರ ಪ್ರದೇಶದಿಂದ ಗೆಲ್ಲಿಸಿಕೊಡಿ. ಯುಪಿಯಲ್ಲಿ ಯಾರಾದರೂ ಮುಸ್ಲಿಮರನ್ನು ನಕಲಿ ಎನ್ಕೌಂಟರ್ನಲ್ಲಿ ಕೊಂದರೆ, ಆ ಎನ್ಕೌಂಟರ್ ಮಾಡಿದವರ ಪರಿಸ್ಥಿತಿಯೂ ಹಾಗೆಯೇ ಆಗುವಂತೆ ಮಾಡುತ್ತೇನೆ ಎಂದು ನಾನು ನಿಮಗೆ ಮಾತು ನೀಡುತ್ತೇನೆ,” ಎಂದಿದ್ದಾರೆ.
ಮಸೀದಿ ಮತ್ತು ಮದ್ರಸಾಗಳ ರಕ್ಷಣೆಗೆ ಕರೆ
ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಶೌಕತ್ ಅಲಿ, “ಮಸೀದಿ ಮತ್ತು ಮದ್ರಸಾಗಳನ್ನು ರಕ್ಷಿಸಬೇಕಾದರೆ, ನಾವೆಲ್ಲರೂ ‘ಒಂದು ಧ್ವಜ, ಒಂದು ಲಾಠಿ ಮತ್ತು ಒಬ್ಬ ನಾಯಕ’ ಎಂಬ ತತ್ವದಡಿ ಒಗ್ಗೂಡುವುದು ಅತ್ಯಗತ್ಯ. ನಾವು ವಿಧಾನಸಭೆಯವರೆಗೆ ನಮ್ಮ ಧ್ವನಿಯನ್ನು ತಲುಪಿಸಬೇಕಾಗಿದೆ,” ಎಂದು ಕರೆ ನೀಡಿದರು.
ಸಂಪಾದಕೀಯ ನಿಲುವುಪೊಲೀಸರು ನಕಲಿ ಎನ್ಕೌಂಟರ್ ಮಾಡುತ್ತಿದ್ದರೆ, ಮುಸ್ಲಿಮರು ಅದನ್ನು ಏಕೆ ಸಾಬೀತುಪಡಿಸುತ್ತಿಲ್ಲ? ದೇಶದಲ್ಲಿ ಮುಸ್ಲಿಮರು ಅಲ್ಪಸಂಖ್ಯಾತರಾಗಿದ್ದರೂ, ಅಪರಾಧ ಕೃತ್ಯಗಳಲ್ಲಿ ಅವರ ಪ್ರಮಾಣವೇ ಏಕೆ ಹೆಚ್ಚಿದೆ? ಎಂಬ ಪ್ರಶ್ನೆಗಳಿಗೆ ಶೌಕತ್ ಅಲಿ ಉತ್ತರ ನೀಡುತ್ತಿಲ್ಲವೇಕೆ? |
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ