ಮಹಾರಾಷ್ಟ್ರದಲ್ಲಿ 40 ಶೇಕಡಾ ಹೋಟೆಲ್‌ಗಳು ಬಂದ್: ಕಾರ್ಮಿಕರು ಹಳ್ಳಿಗಳಿಗೆ ವಾಪಸ್! Maharashtra Hotel Shutdown Gas Shortage

  • ಕಾರ್ಮಿಕರ ಅಡುಗೆಗಾಗಿ 50 ಶೇಕಡಾ ಗ್ಯಾಸ್ ನೀಡುವಂತೆ ‘ಆಹಾರ್’ ಸಂಘಟನೆಯ ಬೇಡಿಕೆ.

  • ಕೊರೊನಾ ಸಾಂಕ್ರಾಮಿಕ ಕಾಲದ ಪರಿಸ್ಥಿತಿ ಮರುಕಳಿಸುತ್ತಿರುವುದರಿಂದ ಉದ್ಯಮಿಗಳಲ್ಲಿ ಆತಂಕ

ಮುಂಬಯಿ – ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಇರಾನ್ ಯುದ್ಧದ ಪರಿಣಾಮಗಳು ಮಹಾರಾಷ್ಟ್ರದಲ್ಲಿಯೂ ಕಂಡುಬರುತ್ತಿವೆ. ಗ್ಯಾಸ್ ಸಿಲಿಂಡರ್‌ಗಳ ಕೊರತೆಯಿಂದಾಗಿ ರಾಜ್ಯದಲ್ಲಿ 40 ಶೇಕಡಾ ಹೋಟೆಲ್‌ಗಳು ಮುಚ್ಚಲ್ಪಟ್ಟಿವೆ ಮತ್ತು ಉಳಿದ ಹೋಟೆಲ್‌ಗಳು ಮುಚ್ಚುವ ಹಾದಿಯಲ್ಲಿವೆ. ಪರಿಣಾಮವಾಗಿ ಅಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರು ತಮ್ಮ ಊರುಗಳಿಗೆ ಮರಳಿದ್ದಾರೆ. ಗ್ಯಾಸ್‌ಗೆ ಪರ್ಯಾಯವಾಗಿರುವ ಕಲ್ಲಿದ್ದಲಿನ ಒಲೆ, ಎಲೆಕ್ಟ್ರಿಕ್ ಇಂಡಕ್ಷನ್ (ವಿದ್ಯುತ್ ಉಪಕರಣ) ಮತ್ತು ಸೀಮೆಎಣ್ಣೆಯ ಮೇಲೆ ಅವಲಂಬಿತವಾಗುವುದು ಹೋಟೆಲ್ ಮಾಲೀಕರಿಗೆ ಕಷ್ಟಕರವಾಗಿದೆ.

1. ರಾಜ್ಯದಲ್ಲಿ 5 ಲಕ್ಷ ಹೋಟೆಲ್‌ಗಳಿವೆ. ಹೋಟೆಲ್ ಉದ್ಯಮವನ್ನು ಅವಲಂಬಿಸಿರುವ ಉದ್ಯೋಗಿಗಳ ಸಂಖ್ಯೆ ಸುಮಾರು 2 ಕೋಟಿ ಇರಬಹುದು.

2. ಮುಂಬಯಿನ ಹೋಟೆಲ್ ಮಾಲೀಕರು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್, ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಛಗನ್ ಭುಜಬಲ್ ಹಾಗೂ ವಿರೋಧ ಪಕ್ಷದ ಪ್ರಮುಖ ನಾಯಕರನ್ನು ಖುದ್ದಾಗಿ ಭೇಟಿ ಮಾಡಿ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ‘ಹೋಟೆಲ್ ವ್ಯವಹಾರದ ಬಗ್ಗೆ ಅಲ್ಲದಿದ್ದರೂ, ಕನಿಷ್ಠ ಒಂದು ಕುಟುಂಬದಂತೆ ವಾಸಿಸುವ ಹೋಟೆಲ್ ಕಾರ್ಮಿಕರ ಬಗ್ಗೆಯಾದರೂ ಯೋಚಿಸಿ. ಅವರ ಅಡುಗೆಗಾಗಿ 50 ಶೇಕಡಾ ಗ್ಯಾಸ್ ನೀಡಿ’ ಎಂದು ಹೋಟೆಲ್ ಉದ್ಯಮಿಗಳ ಸಂಘಟನೆಯಾದ ‘ಆಹಾರ್’ ಬೇಡಿಕೆಯಿಟ್ಟಿದೆ. ‘ಆಹಾರ್’ ಸಂಘಟನೆಯು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸಚಿವ ಹರ್ದೀಪ್ ಪುರಿ ಅವರಿಗೂ ಇ-ಮೇಲ್ ಮೂಲಕ ಪತ್ರ ಕಳುಹಿಸಿದೆ.

3. ಕೊರೊನಾ ಸಾಂಕ್ರಾಮಿಕದ ಅವಧಿಯಲ್ಲಿ ಹೋಟೆಲ್ ಕಾರ್ಮಿಕರು ಕೆಲಸವಿಲ್ಲದೆ ಮನೆಗೆ ಮರಳಿದ್ದರು. ಅವರು ವರ್ಷವಿಡೀ ಹಿಂತಿರುಗದ ಕಾರಣ ಹೋಟೆಲ್ ಉದ್ಯಮದ ವ್ಯವಸ್ಥೆ ಹದಗೆಟ್ಟಿತ್ತು. ಈಗಲೂ ಅಂತಹದ್ದೇ ಪರಿಸ್ಥಿತಿ ಮತ್ತೆ ನಿರ್ಮಾಣವಾಗಿರುವುದರಿಂದ ಹೋಟೆಲ್ ಉದ್ಯಮಿಗಳು ಆತಂಕಕ್ಕೊಳಗಾಗಿದ್ದಾರೆ.

ಸಂಪಾದಕೀಯ ನಿಲುವು

  • ಸರಕಾರವು ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡು ಹೋಟೆಲ್ ಕಾರ್ಮಿಕರಿಗೆ ನೆರವು ನೀಡಬೇಕು!
  • ‘ಮುಂದಿನ ಭೀಕರ ಆಪತ್ಕಾಲದಲ್ಲಿ ತಿನ್ನಲು-ಕುಡಿಯಲು ಸಹ ತತ್ವಾರವಾಗಲಿದೆ’ ಎಂದು ದಾರ್ಶನಿಕ ಸಂತರೇ ಹೇಳಿದ್ದಾರೆ. ಇದು ಅದರ ಆರಂಭವೇ ಸರಿ ಎಂಬುದನ್ನು ಮನಗಂಡು, ಎಲ್ಲರೂ ಆಪತ್ಕಾಲವನ್ನು ಎದುರಿಸಲು ಸಿದ್ಧರಾಗಬೇಕು!