ಇಂಗ್ಲೆಂಡ್ ಪಂದ್ಯಾವಳಿಗಾಗಿ ಪಾಕಿಸ್ತಾನಿ ಆಟಗಾರನ ಖರೀದಿ: ಕಾವ್ಯಾ ಮಾರನ್ ತಂಡದ ವಿರುದ್ಧ ಸುನಿಲ್ ಗವಾಸ್ಕರ್ ಆಕ್ರೋಶ

ಮುಂಬಯಿ: ಇಂಗ್ಲೆಂಡ್ನಲ್ಲಿ ನಡೆಯಲಿರುವ ‘ದ ಹಂಡ್ರೆಡ್’ ಕ್ರಿಕೆಟ್ ಪಂದ್ಯಾವಳಿಯ ಆಟಗಾರರ ಹರಾಜಿನಲ್ಲಿ ‘ಸನ್ರೈಸರ್ಸ್ ಲೀಡ್ಸ್’ ತಂಡವು ಪಾಕಿಸ್ತಾನದ ಸ್ಪಿನ್ನರ್ ಅಬ್ರಾರ್ ಅಹ್ಮದ್ನನ್ನು 2 ಕೋಟಿ 34 ಲಕ್ಷ ರೂಪಾಯಿಗಳಿಗೆ ಖರೀದಿಸಿದೆ. ಸನ್ರೈಸರ್ಸ್ ಲೀಡ್ಸ್ ತಂಡದ ಮಾಲೀಕತ್ವವು ‘ಸನ್ ಗ್ರೂಪ್’ ಬಳಿಯಿದೆ. ಇದೇ ಸಮೂಹವು ಭಾರತದ ಐಪಿಎಲ್ ತಂಡವಾದ ‘ಸನ್ರೈಸರ್ಸ್ ಹೈದರಾಬಾದ್’ನ ಮಾಲೀಕರೂ ಆಗಿರುವುದರಿಂದ ಈ ನಿರ್ಧಾರದ ವಿರುದ್ಧ ತೀವ್ರ ಟೀಕೆಗಳು ವ್ಯಕ್ತವಾಗುತ್ತಿವೆ. ಸನ್ರೈಸರ್ಸ್ ಹೈದರಾಬಾದ್ನ ಮಾಲೀಕರು ಕಾವ್ಯಾ ಮಾರನ್ ಆಗಿದ್ದಾರೆ. ‘ಭಾರತ-ಪಾಕಿಸ್ತಾನ ಉದ್ವಿಗ್ನತೆಯ ನಡುವೆಯೂ ಇಂತಹ ನಿರ್ಧಾರವನ್ನು ಏಕೆ ತೆಗೆದುಕೊಳ್ಳಲಾಗಿದೆ?’ ಎಂದು ಅನೇಕರು ಪ್ರಶ್ನಿಸಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಕೂಡ ಈ ಬಗ್ಗೆ ಕಿಡಿಕಾರಿದ್ದಾರೆ. ತಮ್ಮ ಲೇಖನವೊಂದರಲ್ಲಿ ಗವಾಸ್ಕರ್, “ಭಾರತೀಯ ಮಾಲೀಕತ್ವದ ತಂಡವು ಪಾಕಿಸ್ತಾನಿ ಆಟಗಾರನಿಗೆ ನೀಡುವ ಹಣವು ತೆರಿಗೆಯ ರೂಪದಲ್ಲಿ ಪಾಕಿಸ್ತಾನ ಸರಕಾರದ ಕೈ ಸೇರುತ್ತದೆ ಮತ್ತು ಅದನ್ನು ಶಸ್ತ್ರಾಸ್ತ್ರ ಖರೀದಿಸಲು ಬಳಸಬಹುದು. ಇದರಿಂದ ಆ ಹಣವು ಪರೋಕ್ಷವಾಗಿ ಭಾರತೀಯರ ವಿರುದ್ಧವೇ ಬಳಕೆಯಾಗುವ ಸಾಧ್ಯತೆಯಿದೆ” ಎಂದು ಹೇಳಿದ್ದಾರೆ.
Cricket or National Interest?
Gavaskar Questions Sunrisers Owners 🇮🇳🏏
Legendary cricketer Sunil Gavaskar slammed Sunrisers owners (Sun Group/Kavya Maran) after their team Sunrisers Leeds signed Pakistani spinner Abrar Ahmed for ₹2.34 Cr in The Hundred auction. 🚫
Gavaskar… https://t.co/GAkd8xVJCv pic.twitter.com/V3zApzPpWH
— Sanatan Prabhat (@SanatanPrabhat) March 16, 2026
ಭಯೋತ್ಪಾದಕ ದಾಳಿಗಳಿಂದಾಗಿ ಭಾರತೀಯರ ಭಾವನೆಗಳು ಹೆಚ್ಚು ಸೂಕ್ಷ್ಮವಾಗಿವೆ!
ಕಳೆದ ಕೆಲವು ವರ್ಷಗಳಲ್ಲಿ ಭಾರತ-ಪಾಕಿಸ್ತಾನ ಸಂಬಂಧಗಳಲ್ಲಿ ನಡೆದ ಘಟನೆಗಳನ್ನು ಗಮನಿಸಿದರೆ, ಜನರ ಮನಸ್ಸಿನಲ್ಲಿ ತೀವ್ರ ಪ್ರತಿಕ್ರಿಯೆ ಬರುವುದು ಸಹಜ ಎಂದು ಗವಾಸ್ಕರ್ ಬರೆದಿದ್ದಾರೆ. 2008ರ ಮುಂಬಯಿ ಭಯೋತ್ಪಾದಕ ದಾಳಿಯ ನಂತರ ಪಾಕಿಸ್ತಾನಿ ಆಟಗಾರರಿಗೆ ಐಪಿಎಲ್ನಲ್ಲಿ ಅವಕಾಶ ನೀಡಿಲ್ಲ. ಅಂದಿನಿಂದ 2019ರ ಪುಲ್ವಾಮಾ ದಾಳಿ ಮತ್ತು 2025ರ ಪಹಲ್ಗಾಮ್ ದಾಳಿಯಂತಹ ಘಟನೆಗಳಿಂದಾಗಿ ಭಾರತೀಯರ ಭಾವನೆಗಳು ಹೆಚ್ಚು ಸೂಕ್ಷ್ಮವಾಗಿವೆ.
ಪಂದ್ಯಾವಳಿಯಲ್ಲಿ ಜಯಗಳಿಸುವುದು ಭಾರತೀಯರ ಜೀವಕ್ಕಿಂತ ದೊಡ್ಡದೇ?
‘ಸನ್ರೈಸರ್ಸ್ ಲೀಡ್ಸ್’ ತರಬೇತುದಾರ ಡೇನಿಯಲ್ ವೆಟ್ಟೋರಿ ಅವರಿಗೆ ಈ ಸೂಕ್ಷ್ಮತೆಯ ಅರಿವಿಲ್ಲದಿರಬಹುದು; ಆದರೆ ಭಾರತೀಯ ಮಾಲೀಕರು ಪರಿಸ್ಥಿತಿಯ ಬಗ್ಗೆ ಯೋಚಿಸಬೇಕಿತ್ತು ಎಂದು ಗವಾಸ್ಕರ್ ಬರೆದಿದ್ದಾರೆ. ಭಾರತೀಯ ಸೈನಿಕರು ಮತ್ತು ನಾಗರಿಕರ ಜೀವಕ್ಕೆ ಅಪಾಯವನ್ನುಂಟುಮಾಡುವ ವ್ಯವಸ್ಥೆಗೆ ಭಾರತೀಯ ಮಾಲೀಕರು ಪರೋಕ್ಷವಾಗಿ ಹಣವನ್ನು ನೀಡುತ್ತಿದ್ದಾರೆ. “ವಿಶ್ವದ ಕೆಲವೇ ದೇಶಗಳ ಆಟಗಾರರು ಭಾಗವಹಿಸುವ ಪಂದ್ಯಾವಳಿಯಲ್ಲಿ ಗೆಲ್ಲುವುದು ಭಾರತೀಯರ ಜೀವಕ್ಕಿಂತ ಹೆಚ್ಚು ಮುಖ್ಯವೇ?” ಎಂದು ಗವಾಸ್ಕರ್ ಪ್ರಶ್ನಿಸಿದ್ದಾರೆ.
ಸಂಪಾದಕೀಯ ನಿಲುವುಭಾರತೀಯ ಮಾಲೀಕತ್ವದ ತಂಡವು ಪಾಕಿಸ್ತಾನಿ ಆಟಗಾರನನ್ನು ಖರೀದಿಸುವ ಮೂಲಕ ಕೋಟ್ಯಂತರ ನಾಗರಿಕರ ಗಾಯದ ಮೇಲೆ ಉಪ್ಪು ಸವರಿದೆ. ಇಂತಹ ಪಾಕಿಸ್ತಾನ ಪ್ರೇಮಿಗಳ ವಿರುದ್ಧ ಸರಕಾರ ಕ್ರಮ ಕೈಗೊಳ್ಳುವುದು ಅಗತ್ಯ! |
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!