ಕಾ. ಗೋವಿಂದ ಪಾನ್ಸರೆ ಹತ್ಯೆ ಪ್ರಕರಣ

ಕೊಲ್ಲಾಪುರ, 16 ಮಾರ್ಚ್ (ವಾರ್ತೆ.) – ಕಾರ್ಮಿಕರ ಸಂಘಟನೆಯಾದ ‘ಐಟಕ್’, ‘ಭಾರತೀಯ ಕಮ್ಯುನಿಸ್ಟ್ ಪಕ್ಷ’ ಭಾರತದಲ್ಲಿ ಸಮಾನ ನಾಗರಿಕ ಕಾನೂನು ಜಾರಿಗೆ ಬರಲು ಎಂದಿಗೂ ಹೋರಾಟ ಮಾಡಿಲ್ಲ. ನಮ್ಮ ಸಭೆಗಳಲ್ಲಿ ಸಮಾನ ನಾಗರಿಕ ಕಾನೂನು ತರುವ ಕುರಿತು ಎಂದಿಗೂ ಚರ್ಚೆಯಾಗಿಲ್ಲ ಎಂದು ಭಾರತೀಯ ಕಮ್ಯುನಿಸ್ಟ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಕಾ. ಗೋವಿಂದ ಪಾನ್ಸರೆ ಹತ್ಯೆಯ ಸಾಕ್ಷಿದಾರರಾದ ಶಶಿಕಾಂತ್ ಪಾಟೀಲ್ ಉತ್ತರಿಸಿದರು. ವಕೀಲ ಸೋಮನಾಥ್ ಭರಮಗುಂಡೆ ಅವರು ಪಾಟೀಲ್ ಅವರನ್ನು ಅಡ್ಡವಿಚಾರಣೆ ಮಾಡುತ್ತಿದ್ದು, ಆ ಸಂದರ್ಭದಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸುವಾಗ ಪಾಟೀಲ್ ಮೇಲಿನಂತೆ ಉತ್ತರಿಸಿದರು. ಕಾ. ಪಾನ್ಸರೆ ಹತ್ಯೆ ಪ್ರಕರಣದ ವಿಚಾರಣೆಯು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಎಸ್.ಎಸ್. ತಾಂಬೆ ಅವರ ಮುಂದೆ ನಡೆಯುತ್ತಿದೆ.
ಈ ವೇಳೆ ರಕ್ಷಣಾ ಪಕ್ಷದ ಪರವಾಗಿ ವಕೀಲ ಸಮೀರ್ ಪಟವರ್ಧನ್, ವಕೀಲ ವೀರೇಂದ್ರ ಇಚಲಕರಂಜಿಕರ್, ವಕೀಲ ನಾಗೇಶ್ ಜೋಶಿ, ಹಾಗೂ ಸರಕಾರಿ ಪಕ್ಷದ ಪರವಾಗಿ ವಕೀಲ ಶಿವಾಜಿರಾವ್ ರಾಣೆ ಉಪಸ್ಥಿತರಿದ್ದರು. ಈ ಪ್ರಕರಣದ ಮುಂದಿನ ವಿಚಾರಣೆಯು ಏಪ್ರಿಲ್ 8 ರಂದು ನಡೆಯಲಿದೆ.
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ