
ರಾಯಪುರ (ಛತ್ತೀಸಗಡ) – ಛತ್ತೀಸಗಡದ ಭಾಜಪ ಸರಕಾರದ ಮಂತ್ರಿಮಂಡಲವು ‘ಛತ್ತೀಸಗಡ ಧಾರ್ಮಿಕ ಸ್ವಾತಂತ್ರ್ಯ ವಿಧೇಯಕ ೨೦೨೬’ರ ಕರಡು ಪ್ರತಿಗೆ ಸಮ್ಮತಿ ನೀಡಿದೆ. ಈ ವಿಧೇಯಕವನ್ನು ಕೇವಲ ಕಾನೂನಾತ್ಮಕ ದಾಖಲೆಯಾಗಿ ನೋಡದೆ, ರಾಜ್ಯದ ಸಾಂಸ್ಕೃತಿಕ ಸಮಗ್ರತೆ, ಆದಿವಾಸಿ ಅಸ್ಮಿತೆ ಮತ್ತು ನಾಗರಿಕರ ಧಾರ್ಮಿಕ ಸ್ವಾತಂತ್ರ್ಯವನ್ನು ಸುರಕ್ಷಿತಗೊಳಿಸಲು ಒಂದು ಸಮಗ್ರ ರಕ್ಷಣಾ ವ್ಯವಸ್ಥೆಯಾಗಿ ನೋಡಲಾಗುತ್ತಿದೆ. ಪ್ರಸ್ತುತ ನಡೆಯುತ್ತಿರುವ ವಿಧಾನಸಭೆಯ ಅಧಿವೇಶನದಲ್ಲಿ ಈ ವಿಧೇಯಕವನ್ನು ಮಂಡಿಸಲಾಗುವುದು ಮತ್ತು ಸಮ್ಮತಿ ದೊರೆತ ನಂತರ ಅದು ಪರಿಣಾಮಕಾರಿ ಕಾಯಿದೆಯಾಗಿ ರೂಪಾಂತರಗೊಳ್ಳಲಿದೆ.
🚨 Chhattisgarh Cabinet Approves anti-conversion bill
The BJP government’s cabinet in Chhattisgarh has approved 'Freedom of Religion Bill' aimed at curbing conversions through fraud, allurement, or coercion.
Instead of individual states passing such laws one by one, it is… https://t.co/UMONlZUUHQ pic.twitter.com/Xz3IaPBqNw
— Sanatan Prabhat (@SanatanPrabhat) March 14, 2026
ಧಾರ್ಮಿಕ ನಂಬಿಕೆಯು ವೈಯಕ್ತಿಕ ವಿಷಯವಾಗಿದ್ದರೂ, ಅದರಲ್ಲಿ ಆಮಿಷ, ವಂಚನೆ ಅಥವಾ ಒತ್ತಡಗಳು ಸೇರಿದರೆ ಅದು ಸಾಮಾಜಿಕ ಸೌಹಾರ್ದತೆಗೆ ಅಪಾಯಕಾರಿಯಾಗುತ್ತದೆ ಎಂದು ಸರಕಾರ ಹೇಳಿದೆ. ಈ ಅಪಾಯವನ್ನು ಗಮನದಲ್ಲಿಟ್ಟುಕೊಂಡು ಸರಕಾರವು ಹಳೆಯ ನಿಯಮಗಳಲ್ಲಿ ಬದಲಾವಣೆ ಮಾಡಿ, ಅಕ್ರಮ ಮತಾಂತರದ ಮೂಲಕ್ಕೆ ಹೊಡೆತ ನೀಡುವ ಹೊಸ ಸಂರಚನೆಯನ್ನು(ರೂಪುರೇಷೆ ?) ಸಿದ್ಧಪಡಿಸಿದೆ.
ಶಿಕ್ಷೆ ಕನಿಷ್ಠ ೧೦ ವರ್ಷ, ಗರಿಷ್ಠ ಜೀವಾವಧಿ
ಯಾವುದೇ ವ್ಯಕ್ತಿ ಅಥವಾ ಗುಂಪು ಸೇರಿಕೊಂಡು ದೊಡ್ಡ ಸಂಖ್ಯೆಯಲ್ಲಿ ಜನರನ್ನು ಮತಾಂತರಿಸಿದ ಪ್ರಕರಣದಲ್ಲಿ ದೋಷಿ ಎಂದು ಕಂಡುಬಂದಲ್ಲಿ, ಅವರಿಗೆ ಕನಿಷ್ಠ ೧೦ ವರ್ಷ ಮತ್ತು ಗರಿಷ್ಠ ಜೀವಾವಧಿ ಶಿಕ್ಷೆಯಾಗುವ ಸಾಧ್ಯತೆಯಿದೆ. ಕೇವಲ ಕಾರಾಗೃಹವಾಸ ಮಾತ್ರವಲ್ಲದೆ, ಕನಿಷ್ಠ ೫ ಲಕ್ಷ ರೂಪಾಯಿ ದಂಡದ ನಿಬಂಧನೆಯನ್ನೂ ಮಾಡಲಾಗಿದೆ.
ಶಿಕ್ಷೆಯ ಹೊಸ ನಿಬಂಧನೆಗಳ ಪ್ರಕಾರ ಅಪ್ರಾಪ್ತರು, ಮಹಿಳೆಯರು, ಅನುಸೂಚಿತ ಜಾತಿ, ಅನುಸೂಚಿತ ಪಂಗಡ ಅಥವಾ ಇತರ ಹಿಂದುಳಿದ ವರ್ಗದ ವ್ಯಕ್ತಿಗಳನ್ನು ಮತಾಂತರಿಸಿದರೆ, ಸಂಬಂಧಪಟ್ಟ ವ್ಯಕ್ತಿಗೆ ೧೦ ರಿಂದ ೨೦ ವರ್ಷಗಳವರೆಗೆ ಕಾರಾಗೃಹವಾಸ ಮತ್ತು ಕನಿಷ್ಠ ೧೦ ಲಕ್ಷ ರೂಪಾಯಿ ದಂಡದ ಶಿಕ್ಷೆಯಾಗಲಿದೆ. ಹಾಗೆಯೇ ಸಾಮಾನ್ಯ ಪ್ರಕರಣಗಳಲ್ಲಿ ಶಿಕ್ಷೆಯು ೭ ರಿಂದ ೧೦ ವರ್ಷಗಳ ಕಾರಾಗೃಹವಾಸ ಮತ್ತು ೫ ಲಕ್ಷ ರೂಪಾಯಿ ದಂಡ ಎಂದಿದೆ.
ಸಂಪಾದಕೀಯ ನಿಲುವುಒಂದೊಂದೇ ರಾಜ್ಯಗಳು ಇಂತಹ ಕಾಯಿದೆಯನ್ನು ಮಾಡುವ ಬದಲು ಕೇಂದ್ರದ ಭಾಜಪ ಸರಕಾರವು ಇಡೀ ದೇಶಕ್ಕಾಗಿ ಕಾಯಿದೆಯನ್ನು ಜಾರಿಗೆ ತರುವುದು ಅವಶ್ಯಕವಾಗಿದೆ. ಏಕೆಂದರೆ ಕಾಂಗ್ರೆಸ್ ಮತ್ತು ಇತರ ಹಿಂದೂದ್ವೇಷಿ ರಾಜಕೀಯ ಪಕ್ಷಗಳ ಸರಕಾರಗಳು ಎಂದಿಗೂ ಇಂತಹ ಕಾಯಿದೆಯನ್ನು ಮಾಡುವುದಿಲ್ಲ . |
ಶ್ರೀನಗರದಲ್ಲಿ ಮಾದಕ ಪದಾರ್ಥ ಸಾಗಾಟಗಾರ ಶೇಖ್ ತಸದುಕ್ನ ಸರಕಾರಿ ಭೂಮಿಯ ಮೇಲಿನ ಅಕ್ರಮ 3 ಅಂತಸ್ತಿನ ಕಟ್ಟಡ ನೆಲಸಮ ! : Srinagar Drug Peddler House Demolished
ಬದಾಯೂ (ಉತ್ತರ ಪ್ರದೇಶ) ಇಲ್ಲಿ ಮುಸ್ಲಿಂ ಅಧಿಕಾರಿಯ ಧಾರ್ಮಿಕ ಕಿರುಕುಳದಿಂದಾಗಿ ಹಿಂದೂ ಪೊಲೀಸ್ ಇನ್ಸ್ಪೆಕ್ಟರ್ ಆತ್ಮಹತ್ಯೆ ! : Hindu Police Suicide
ಬುಲಂದ್ಶಹರ್ (ಉತ್ತರ ಪ್ರದೇಶ) ದಲ್ಲಿ ಹನುಮಾನ್ ದೇವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ ಅಸರ್ ಮೊಹಮ್ಮದ್ ಬಂಧನ!
ನಾಗಪುರದಲ್ಲಿ ಶ್ರೀ ದುರ್ಗಾದೇವಿಯ ಮೂರ್ತಿಯ ಮೇಲಿದ್ದ ಚಿನ್ನದ ಸರ ಕಳ್ಳತನ ಮಾಡಿದ ೩ ಮತಾಂಧರ ಬಂಧನ !
ಕುತ್ತಿಗೆಯಲ್ಲಿದ್ದ ಆಭರಣಗಳನ್ನು ಕದಿಯುತ್ತಿದ್ದ ಕಾಮಿಲ್ ಮತ್ತು ಅಹ್ಮದ್ ಬಂಧನ !
ಖಾರ್ಘರ್ (ನವಿ ಮುಂಬಯಿ) ನಲ್ಲಿ ‘ಹೇರ್ ಸ್ಪಾ’ ಮಾಡುವಾಗ ಹಿಂದೂ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಮುಸ್ಲಿಂ ಯುವಕ !