ಸರಗುಜಾ (ಛತ್ತೀಸಗಢ) : ಹಿಂದೂಗಳ ೫೦ ಎಕರೆ ಭೂಮಿಯ ಮೇಲೆ ಮುಸಲ್ಮಾನರ ಅಕ್ರಮ ನಿಯಂತ್ರಣ !

ರಾಯಪುರ (ಛತ್ತೀಸಗಢ) – ರಾಜ್ಯದ ಸರಗುಜಾ ಜಿಲ್ಲೆಯಲ್ಲಿ ‘ಪಂಡೋ’ ಎಂಬ ಆದಿವಾಸಿ ಹಿಂದೂ ಸಮುದಾಯದ ಭೂಮಿಯ ಮೇಲೆ ಮತಾಂಧ ಮುಸಲ್ಮಾನರು ಅಕ್ರಮವಾಗಿ ನಿಯಂತ್ರಣ ಸಾಧಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಯು ಲಖನಪುರ ತಾಲೂಕಿನಲ್ಲಿರುವ ಮಾಂಜಾ ಗ್ರಾಮ ಪಂಚಾಯತ ವ್ಯಾಪ್ತಿಯ ರಾಜಾಕಟೇಲ್ ವಸತಿಯಲ್ಲಿ ನಡೆದಿದೆ. ಇಲ್ಲಿನ ಪಂಡೋ ಸಮುದಾಯದವರು, ತಮ್ಮ ಸುಮಾರು ೫೦ ಎಕರೆ ಪಿತ್ರಾರ್ಜಿತ ಭೂಮಿಯನ್ನು ಕಟ್ಟರಪಂಥೀಯ ಮುಸಲ್ಮಾನರು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆಂದು ಆರೋಪಿಸಿದ್ದಾರೆ.

೧. ಗ್ರಾಮಸ್ಥರ ಪ್ರಕಾರ, ಅವರು ಅನೇಕ ತಲೆಮಾರುಗಳಿಂದ ಈ ಭೂಮಿಯಲ್ಲಿ ವಾಸಿಸುತ್ತಿದ್ದಾರೆ; ಆದರೆ ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮುಸಲ್ಮಾನರು ಇಲ್ಲಿ ಬಂದು ನೆಲೆಸಿದರು ಮತ್ತು ಮೆಲ್ಲಗೆ ಅವರ ಭೂಮಿಯ ಮೇಲೆ ಹಕ್ಕು ಸಾಧಿಸಲು ಆರಂಭಿಸಿದರು. ಕೆಲವು ಮುಸಲ್ಮಾನರು ವಂಚನೆಯಿಂದ ಪಂಡೋ ಸಮಾಜದ ಜನರ ಬಳಿ ದಾಖಲೆಗಳ ಮೇಲೆ ಹೆಬ್ಬೆಟ್ಟಿನ ಗುರುತು ಪಡೆದು ಭೂಮಿಯನ್ನು ತಮ್ಮ ಹೆಸರಿಗೆ ನೋಂದಾಯಿಸಿಕೊಂಡಿದ್ದಾರೆಂದು ಆರೋಪಿಸಲಾಗಿದೆ.

೨. ಕ್ರಮೇಣ ಮುಸಲ್ಮಾನರು ತಮ್ಮ ಸಂಬಂಧಿಕರನ್ನೂ ಇಲ್ಲಿಗೆ ಕರೆಸಿ ನೆಲೆಸುವಂತೆ ಮಾಡಿದರು. ಇದರಿಂದಾಗಿ ಈಗ ಇಲ್ಲಿ ಸುಮಾರು ೮೦ ರಿಂದ ೯೦ ಮುಸಲ್ಮಾನ ಕುಟುಂಬಗಳು ವಾಸಿಸುತ್ತಿವೆ. ಪಂಡೋ ಸಮುದಾಯದವರು ತಮ್ಮ ಭೂಮಿಯನ್ನು ಮರಳಿ ಪಡೆಯಲು ಅಥವಾ ಅತಿಕ್ರಮಣವನ್ನು ತೆರವುಗೊಳಿಸಲು ಪ್ರಯತ್ನಿಸಿದಾಗ ಅವರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

೩. ಹಿಂದೂ ಗ್ರಾಮಸ್ಥರು ಜಮೀಲ ಅಹ್ಮದ್, ಶಕೀಲ್ ಅಹ್ಮದ್, ಸಲೀಮ್, ಗುಲ್ಬಹಾರ್ ಅಹ್ಮದ್, ನಸೀಮ್, ಖುರ್ಷಿದ್, ಕಬೀರ್, ಅಸ್ಲಂ, ಮಹಮ್ಮದ ಜಮೀಲ್, ಬಾಬರ್ ಮತ್ತು ಮೊಹತಾಬ್ ಸೇರಿದಂತೆ ಅನೇಕರ ಮೇಲೆ ಭೂಮಿ ಕಬಳಿಸಿದ ಮತ್ತು ಕಿರುಕುಳ ನೀಡಿದ ಆರೋಪ ಮಾಡಲಾಗಿದೆ. ಈ ಕುರಿತು ಗ್ರಾಮಸ್ಥರು ಪೊಲೀಸ್ ಅಧೀಕ್ಷಕರಿಗೆ ಅರ್ಜಿ ಸಲ್ಲಿಸಿ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ. (ಭೂಮಿಯ ಮಾಲೀಕರಾದ ಹಿಂದೂಗಳೇ ಇಂತಹ ಬೇಡಿಕೆಯನ್ನು ಏಕೆ ಮಾಡಬೇಕಾಗುತ್ತದೆ? ಅಕ್ರಮ ವ್ಯವಹಾರಗಳ ವಿರುದ್ಧ ಸರಕಾರೀ ಆಡಳಿತವು ಸ್ವತಃ ಕ್ರಮ ಕೈಗೊಳ್ಳುವುದಿಲ್ಲವೇಕೆ? – ಸಂಪಾದಕರು)

೪. ಮುಖ್ಯಮಂತ್ರಿಗಳ ಕಚೇರಿಯ ನಿರ್ದೇಶನದಂತೆ ಉದಯಪುರ ಉಪವಿಭಾಗೀಯ ಅಧಿಕಾರಿಗಳ ನ್ಯಾಯಾಲಯದಲ್ಲಿ ಛತ್ತೀಸಗಢ ಭೂ ಕಂದಾಯ ಸಂಹಿತೆಯ ‘ಕಲಂ ೧೭೦-ಬಿ’ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಮತ್ತು ಭೂಮಿಯನ್ನು ಅಕ್ರಮವಾಗಿ ನಿಯಂತ್ರಿಸುತ್ತಿರುವ ಮುಸಲ್ಮಾನರಿಗೆ ನೋಟಿಸ್ ಜಾರಿ ಮಾಡಲಾಗಿದೆ.

ಸಂಪಾದಕೀಯ ನಿಲುವು

೮೦ ವರ್ಷಗಳ ಹಿಂದೆ ಮುಸಲ್ಮಾನರು ಭಾರತದ ವಿಭಜನೆ ಮಾಡಿ ಪ್ರತ್ಯೇಕ ಪಾಕಿಸ್ತಾನವನ್ನು ಪಡೆದರು. ಹಿಂದೂಗಳ ಭಾರತವನ್ನು ಛಿದ್ರ-ಛಿದ್ರ ಮಾಡಿದರು. ಇಂದು ಭಾರತದಲ್ಲಿಯೂ ಅನೇಕ ಪಾಕಿಸ್ತಾನಗಳು ನಿರ್ಮಾಣವಾಗಿವೆ. ಹಿಂದೂ ಸಮಾಜವು ಜಾಗೃತವಾಗದ ಹೊರತು ಇದನ್ನು ತಡೆಯುವುದು ಅಸಾಧ್ಯ, ಎಂಬುದನ್ನು ನೆನಪಿಡಿ