‘ಮಹಿಳೆಯರಿಗೆ ಸಂವಿಧಾನದ ಅರಿವಾಗಬೇಕು’ ಎಂದೂ ಹೇಳಿಕೆ

ಮುಂಬಯಿ – ಸಮಾಜದ ಮಹಿಳೆಯರಿಗೆ ಸಂವಿಧಾನದ ಅರಿವಾಗಬೇಕು. ನಾವು ಮಹಿಳೆಯರನ್ನು ಪೋಥಿ-ಪುರಾಣಗಳಲ್ಲಿ ಸಿಲುಕಿಸಿದ್ದೇವೆ; ಆದರೆ ಸಂವಿಧಾನವನ್ನು ಓದುವುದನ್ನು ನಾವು ಮರೆತಿದ್ದೇವೆ. ಮಗಳನ್ನು ಗಂಡನ ಮನೆಗೆ ಕಳುಹಿಸುವಾಗ ಆಕೆಯ ಕೈಗೆ ಸಂವಿಧಾನವನ್ನು ನೀಡಿ ಎಂದು ಮಹಾರಾಷ್ಟ್ರ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ರೂಪಾಲಿ ಚಾಕಣಕರ್ ಹೇಳಿದ್ದಾರೆ. ಆಯೋಗದ ವತಿಯಿಂದ ‘ಜಾಗತಿಕ ಮಹಿಳಾ ದಿನಾಚರಣೆ’ಯ ಅಂಗವಾಗಿ ಮುಂಬಯಿನ ರವೀಂದ್ರ ನಾಟ್ಯಮಂದಿರದಲ್ಲಿ ಆಯೋಜಿಸಲಾಗಿದ್ದ ವಿಶೇಷ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. (ಇಂದು ಧರ್ಮಶಿಕ್ಷಣದ ಅಭಾವದಿಂದಾಗಿ ಮೂಲತಃ ಹಿಂದೂ ಸಮಾಜ, ಅದರಲ್ಲೂ ಯುವ ಪೀಳಿಗೆ ಹಿಂದೂ ಧರ್ಮದಿಂದ ದೂರವಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಈ ರೀತಿಯ ಹೇಳಿಕೆಯು ಹಿಂದೂ ವಿರೋಧಿ ಕಥಾನಕಕ್ಕೆ (ನರೇಟಿವ್) ನೀರೆರೆಯುವ ಪ್ರಯತ್ನವಾಗಿದೆ. ಇದರಿಂದಾಗಿ ‘ರೂಪಾಲಿ ಚಾಕಣಕರ್ ಅವರು ಡೀಪ್ ಸ್ಟೇಟ್ನ (Deep state) ಕೈಗೊಂಬೆಯೇ?’ ಎಂಬ ಪ್ರಶ್ನೆಯನ್ನು ಯಾರಾದರೂ ಎತ್ತಿದರೆ ಅದರಲ್ಲಿ ತಪ್ಪೇನಿದೆ? – ಸಂಪಾದಕರು)
(ಡೀಪ್ ಸ್ಟೇಟ್ ಎಂದರೆ ಸರ್ಕಾರಿ ಅಧಿಕಾರಿಗಳು, ಸೇನಾಧಿಕಾರಿಗಳು, ಖಾಸಗಿ ಸಂಸ್ಥೆಗಳು ಮತ್ತು ಬಿಲಿಯನೇರ್ ಉದ್ಯಮಿಗಳ ಗುಪ್ತ ಜಾಲ. ಈ ವ್ಯವಸ್ಥೆಯ ಮೂಲಕ ಸರ್ಕಾರಿ ನೀತಿಗಳನ್ನು ಖಾಸಗಿ ಸಂಸ್ಥೆಗಳಿಗೆ ಪೂರಕವಾಗುವಂತೆ ರೂಪಿಸಲಾಗುತ್ತದೆ ಅಥವಾ ದೇಶದಲ್ಲಿ ಅವರಿಗೆ ಅನುಕೂಲಕರವಾದ ವಾತಾವರಣವನ್ನು ನಿರ್ಮಿಸಲಾಗುತ್ತದೆ.)
ಸಂಪಾದಕೀಯ ನಿಲುವು
|
ಈಗ ಮಥುರಾ, ಬೃಂದಾವನ ಮತ್ತು ಶ್ರೀಕೃಷ್ಣ ಜನ್ಮಭೂಮಿ ಕುರಿತೂ ಬಹಿರಂಗವಾಗಿ ಚರ್ಚೆಯಾಗಬೇಕು! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್
ಬಿಹಾರದಲ್ಲಿ ಮಿಷನರಿಗಳಿಂದ ಹಿಂದೂಗಳಿಗೆ ಆಮಿಷವೊಡ್ಡಿ ಕ್ರೈಸ್ತರನ್ನಾಗಿ ಮಾಡುವ ಪ್ರಯತ್ನ!
ರಾಜ್ಯದಲ್ಲಿ ಎರಡು ಬೇರೆ ಬೇರೆ ಘಟನೆಗಳಲ್ಲಿ ಮತಾಂಧ ಮುಸಲ್ಮಾನರಿಂದ ಇಬ್ಬರು ಹಿಂದೂ ಯುವತಿಯರ ಹತ್ಯೆ
ಮುಂಬಯಿನಲ್ಲಿ 6 ಹೋಟೆಲ್ ಸೇರಿದಂತೆ ಬೇಕರಿ ಮತ್ತು ಕ್ಲಬ್ಗಳ ಪರವಾನಗಿ ಅಮಾನತು: 19 ಜನರ ಬಂಧನ!
ಚಿಕ್ಕಮಗಳೂರು ದತ್ತಪೀಠ ಪ್ರದೇಶದ ಇಸ್ಲಾಮೀಕರಣದ ಪಿತೂರಿ ನಡೆಯುತ್ತಿದೆ ಎಂದು ಆರೋಪ!
ಹಾವೇರಿ : ಮಸೀದಿ ಎದುರು ಪಟಾಕಿ ಸಿಡಿಸಿದ ಕಾರಣಕ್ಕೆ ರೈತನ ಕೈ ಕತ್ತರಿಸಿದ ಮತಾಂಧರು!