ಭಾಗ್ಯನಗರ (ತೆಲಂಗಾಣ)ದಲ್ಲಿ ಅಪರಿಚಿತರಿಂದ ಶ್ರೀ ಹನುಮಂತನ ಮೂರ್ತಿ ಧ್ವಂಸ ! – Hanuman Idol Vandalized in Telangana

ಭಾಗ್ಯನಗರ (ತೆಲಂಗಾಣ) – ಇಲ್ಲಿನ ದ್ವಿಮುಖಿ ಹನುಮಂತನ ದೇವಸ್ಥಾನದ ಮೂರ್ತಿಯನ್ನು ಫೆಬ್ರವರಿ 24 ರಂದು ಅಪರಿಚಿತರು ಧ್ವಂಸಗೊಳಿಸಿದ್ದಾರೆ. ಶ್ರೀ ಹನುಮಂತನ ಮೂರ್ತಿಯ ಮೇಲಿದ್ದ ಸಿಂಧೂರವನ್ನು ಕಿತ್ತುಹಾಕಲಾಗಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲಾಗಿದ್ದು, ಆರೋಪಿಗಳನ್ನು ಗುರುತಿಸಿ ಬಂಧಿಸುವ ಪ್ರಯತ್ನಗಳು ನಡೆಯುತ್ತಿವೆ.

ಈ ಧ್ವಂಸವನ್ನು ಖಂಡಿಸಿ ಭಾಜಪದ ಪ್ರದೇಶಾಧ್ಯಕ್ಷ ಎನ್. ರಾಮಚಂದರ್ ರಾವ್ ಅವರು ದೋಷಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ತೆಲಂಗಾಣದಲ್ಲಿ ದೇವತೆಗಳ ಮೂರ್ತಿಗಳ ಮೇಲಿನ ದಾಳಿಯು ಸನಾತನ ಧರ್ಮದ ವಿರುದ್ಧ ರೂಪಿಸಲಾದ ಸಂಚಿನ ಭಾಗವಾಗಿದೆ. ದೇವಸ್ಥಾನಗಳಲ್ಲಿನ ವಿಡಂಬನೆ ಮತ್ತು ಧ್ವಂಸದ ಘಟನೆಗಳು, ಹಾಗೆಯೇ ಹಿಂದೂಗಳ ಹಬ್ಬಗಳನ್ನು ಗುರಿಪಡಿಸುವುದು ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತಿದೆ. ಸಮಾಜಘಾತುಕ ಶಕ್ತಿಗಳ ಮೇಲೆ ಕ್ರಮ ಕೈಗೊಳ್ಳುವಲ್ಲಿ ಕಾಂಗ್ರೆಸ್ ಸರಕಾರ ವಿಫಲವಾಗುತ್ತಿದ್ದು, ಮತಬ್ಯಾಂಕ್ ರಾಜಕಾರಣದಲ್ಲಿ ತೊಡಗಿದೆ ಎಂದು ರಾವ್ ಆರೋಪಿಸಿದರು.

ಮೇಲೆ ಪ್ರಕಟಿಸಿರುವ ಚಿತ್ರ ಯಾರ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನೈಜ ಸ್ಥೀತಿ ತಿಳಿಸುವುದಾಗಿದೆ ! – ಸಂಪಾದಕರು

ಸಂಪಾದಕೀಯ ನಿಲುವು

ಇಂತಹ ಘಟನೆಗಳನ್ನು ತಡೆಯಲು ಸಂಬಂಧಪಟ್ಟವರಿಗೆ ಗಲ್ಲು ಶಿಕ್ಷೆಯನ್ನೇ ನೀಡಬೇಕು!