ಮಹಾಶಿವರಾತ್ರಿಯ ಕೆಲವು ದಿನಗಳ ಮುನ್ನ ವಶೇಣಿ (ರಾಯಗಡ ಜಿಲ್ಲೆ) ಯಲ್ಲಿ ಶಿವಲಿಂಗದ ಧ್ವಂಸ ! – Vasheni Raigad Shivling Vandalised

  • ಮತಾಂಧರಿಂದಲೇ ಈ ಕೃತ್ಯ ನಡೆದಿದೆ ಎಂದು ಗ್ರಾಮಸ್ಥರ ಸಂಶಯ

  • ಪ್ರಕರಣವನ್ನು ಹತ್ತಿಕ್ಕಲು ಪೊಲೀಸರ ಪ್ರಯತ್ನ

ಭಗ್ನಗೊಳಿಸಿದ ಶಿವಲಿಂಗ

(ಈ ಛಾಯಾಚಿತ್ರವನ್ನು ಯಾರ ಭಾವನೆಗಳಿಗೂ ನೋಯಿಸಲು ಮುದ್ರಿಸಿರದೇ ಹಿಂದೂಗಳಲ್ಲಿ ಜಾಗೃತಿ ಮೂಡಿಸಲು ಪ್ರಕಟಿಸಲಾಗಿದೆ. – ಸಂಪಾದಕರು)

ವಶೇಣಿ (ಉರಣ) – ಇಲ್ಲಿನ ಸಮುದ್ರತೀರದ ಮರಳು ಬಂದರಿನ ಸಮೀಪ ಶ್ರಾದ್ಧ ವಿಧಿಗಳಿಗಾಗಿ ಸ್ಥಾಪಿಸಲಾಗಿದ್ದ ಶಿವಲಿಂಗವನ್ನು ಫೆಬ್ರವರಿ ೧೧ ರ ರಾತ್ರಿ ಭಗ್ನಗೊಳಿಸಲಾಗಿದೆ. ಈ ವಿಧ್ವಂಸಕ ಕೃತ್ಯವನ್ನು ಮತಾಂಧರೇ ಮಾಡಿದ್ದಾರೆ ಎಂದು ಗ್ರಾಮಸ್ಥರು ಸಂಶಯ ವ್ಯಕ್ತಪಡಿಸಿದ್ದಾರೆ. ‘ಗ್ರಾಮದ ಯಾವುದೇ ವ್ಯಕ್ತಿ ಇಂತಹ ಕೃತ್ಯ ಎಸಗಲು ಸಾಧ್ಯವಿಲ್ಲ’ ಎಂಬುದು ಗ್ರಾಮಸ್ಥರ ದೃಢ ಅಭಿಪ್ರಾಯವಾಗಿದೆ. ಕೆಲವು ದಿನಗಳ ಹಿಂದೆಯೂ ಇದೇ ಶಿವಲಿಂಗದ ಮೇಲೆ ಮಲವನ್ನು ಬಳಿದು ವಿಡಂಬನೆ ಮಾಡಿರುವುದು ಕಂಡು ಬಂದಿತ್ತು. ಆ ಸಮಯದಲ್ಲಿ ಗ್ರಾಮದ ಒಬ್ಬ ಹಿಂದುತ್ವನಿಷ್ಠ ಯುವಕನು ಶಿವಲಿಂಗವನ್ನು ಸ್ವಚ್ಛಗೊಳಿಸಿದ್ದನು.

ಈ ಘಟನೆಯ ೩ ದಿನಗಳ ನಂತರ ಮಹಾಶಿವರಾತ್ರಿ ಇದ್ದಿದ್ದರಿಂದ ಇಬ್ಬರು ಪೊಲೀಸರು ಇಲ್ಲಿ ಸುರಕ್ಷತೆಗಾಗಿ ಬಂದಿದ್ದರು. ‘ಈ ವಿಧ್ವಂಸಕ ಕೃತ್ಯ ಮಾಡಿದ್ದು ಯಾರು?’ ಎಂದು ಪತ್ತೆ ಹಚ್ಚಿ ಶಿಕ್ಷಿಸುವ ಬದಲು, ಈ ಘಟನೆಯನ್ನು ಮುಚ್ಚಿಡುವ ಕಡೆಗೆ ಪೊಲೀಸರ ಒಲವಿರುವುದು ಅವರ ಮಾತುಗಳಿಂದ ಗ್ರಾಮಸ್ಥರಿಗೆ ಮನವರಿಕೆಯಾಗಿದೆ. ಇದು ಗ್ರಾಮಸ್ಥರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಗ್ರಾಮದ ಒಬ್ಬ ಮನೋರೋಗಿ ಮಹಿಳೆ ಈ ಕೃತ್ಯವೆಸಗಿದ್ದಾಳೆ ಎಂದು ಸುಳ್ಳು ಕಥೆ ಕಟ್ಟಿ ಪೊಲೀಸರು ಆರೋಪಿಗಳನ್ನು ರಕ್ಷಿಸುತ್ತಿದ್ದಾರೆ. ವಾಸ್ತವವಾಗಿ ಆ ಮನೋರೋಗಿ ಮಹಿಳೆ ಗ್ರಾಮದ ಒಂದು ದೇವಸ್ಥಾನದಲ್ಲಿ ವಾಸವಿದ್ದು, ಅಲ್ಲಿ ಸ್ವಚ್ಛತೆ ಮಾಡುವುದರ ಜೊತೆಗೆ ದೇವರಿಗೆ ಹೂವುಗಳನ್ನೂ ಅರ್ಪಿಸುತ್ತಾಳೆ. ಆದ್ದರಿಂದ ‘ಅವಳು ಇಂತಹ ಕೃತ್ಯ ಮಾಡಲು ಸಾಧ್ಯವೇ ಇಲ್ಲ’ ಎಂದು ಗ್ರಾಮಸ್ಥರು ಹೇಳಿದ್ದಾರೆ.

ಪೊಲೀಸರನ್ನು ಪ್ರಶ್ನಿಸಿದಾಗ ಪ್ರಕರಣವನ್ನು ಹತ್ತಿಕ್ಕುವ ಪ್ರಯತ್ನ !

‘ಸನಾತನ ಪ್ರಭಾತ’ನ ವರದಿಗಾರರು ಪೊಲೀಸರನ್ನು ವಿಚಾರಿಸಿದಾಗ ಅವರು, ಗ್ರಾಮದಲ್ಲಿ ಒಬ್ಬ ಹುಚ್ಚಿ ಹೆಣ್ಣುಮಗಳಿದ್ದಾಳೆ, ಅವಳೇ ಈ ಕೃತ್ಯವೆಸಗಿರಬೇಕು. ಇದರಲ್ಲಿ ಸುದ್ದಿ ಮಾಡುವಂತಹದ್ದು ಏನೂ ಇಲ್ಲ ಎಂದು ಉಡಾಫೆಯ ಉತ್ತರ ನೀಡಿದರು. (ನಾಳೆ ಹಿಂದೂಗಳ ಮೇಲೆ ಆಕ್ರಮಣವಾದರೂ ಪೊಲೀಸರು ಹೀಗೆಯೇ ಹೇಳಬಹುದು, ಇದನ್ನು ಹಿಂದೂಗಳು ಗಮನಿಸಬೇಕು ಮತ್ತು ಸ್ವರಕ್ಷಣಾ ತರಬೇತಿಯನ್ನು ಪಡೆಯಬೇಕು! – ಸಂಪಾದಕರು)

ಗ್ರಾಮದ ಸಾಮಾಜಿಕ ಕಾರ್ಯಕರ್ತರಾದ ಶ್ರೀ. ಅವಿನಾಶ ಪಾಟೀಲ ಅವರು ಆ ಶಿವಲಿಂಗ ಮತ್ತು ಪೀಠವನ್ನು ನಿರ್ಮಿಸಿದ್ದರು. ಆದ್ದರಿಂದ ‘ಸನಾತನ ಪ್ರಭಾತ’ ಮಾಧ್ಯಮದ ವರದಿಗಾರರು ಘಟನೆಯ ಮಾಹಿತಿ ಪಡೆಯಲು ಅವರನ್ನು ಸಂಪರ್ಕಿಸಿದರು. ಆಗ ಅವರ ಪತ್ನಿ ಸೌ. ಪಾಟೀಲ ಅವರು, ಪೊಲೀಸರು ಈ ವಿಷಯವನ್ನು ಹೆಚ್ಚು ಪ್ರಚಾರ ಮಾಡಬೇಡಿ ಎಂದು ಅವರಿಗೆ ತಿಳಿಸಿದ್ದಾರೆ. ಇದರಿಂದ ಗ್ರಾಮಸ್ಥರಿಗೆ ಪೊಲೀಸರ ಮೇಲೆ ಭಾರೀ ಕೋಪ ಬಂದಿದೆ ಎಂದು ತಿಳಿಸಿದರು.

ಸಂಪಾದಕೀಯ ನಿಲುವು

  • ಛತ್ರಪತಿ ಶಿವರಾಯರ ರಾಜಧಾನಿಯಲ್ಲಿ ೩೦೦ ವರ್ಷಗಳ ನಂತರವೂ ಮತಾಂಧರ ಅಟ್ಟಹಾಸ ಮುಂದುವರಿಯುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ !
  • ಆರೋಪಿಗಳನ್ನು ಹಿಡಿಯಲು ಪ್ರಯತ್ನಿಸುವ ಬದಲು ಹಿಂದೂಗಳ ದಾರಿತಪ್ಪಿಸುತ್ತಿರುವ ಪೊಲೀಸರು ಹಿಂದೂಗಳ ವಿಶ್ವಾಸವನ್ನು ಯಾವತ್ತೋ ಕಳೆದುಕೊಂಡಿದ್ದಾರೆ. ಆದ್ದರಿಂದ, ಇನ್ನು ಮುಂದೆ ಶ್ರದ್ಧಾಕೇಂದ್ರಗಳ ರಕ್ಷಣೆಗಾಗಿ ಹಿಂದೂಗಳು ಸಂಘಟಿತರಾಗುವುದೊಂದೇ ಪರ್ಯಾಯವಾಗಿದೆ !
  • ಇತರ ಪಂಥದವರ ವಿಷಯದಲ್ಲಿ ಸಣ್ಣ ಅಹಿತಕರ ಘಟನೆ ನಡೆದರೂ ಅವರು ಏನು ಮಾಡುತ್ತಾರೆ ಎಂಬುದು ಹಿಂದೂಗಳಿಗೆ ತಿಳಿದಿದೆ. ಹಿಂದೂಗಳು ಅತಿಯಾದ ಸಹಿಷ್ಣುಗಳಾಗಿರುವುದರಿಂದಲೇ ಮತಾಂಧರು ಇಂತಹ ಸಾಹಸಕ್ಕೆ ಕೈಹಾಕುತ್ತಿದ್ದಾರೆ !