|

ನವಿ ಮುಂಬಯಿ – ಖಾರ್ಘರ್ ಭಾಗದ ಪೇಠ್ ನಿವಾಸಿ ವೆಂಕಟೇಶ್ ಭೋಯಿರ್ ಎಂಬ ಹಿಂದೂ ಯುವಕನ ಮೇಲೆ ತಳೋಜಾದ ಮುಸ್ಲಿಮರು ಮಾರಣಾಂತಿಕ ಹಲ್ಲೆ ನಡೆಸಿದ್ದು, ಅವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳೀಯ ಹಿಂದೂತ್ವನಿಷ್ಠರು ಮಾಧ್ಯಮಗಳಿಗೆ ನೀಡಿದ ಮಾಹಿತಿಯ ಪ್ರಕಾರ, ಖಾರ್ಘರ್ನಲ್ಲಿರುವ ಕೋಳಿ ಸಮುದಾಯದ ಭೂಮಿಯನ್ನು ಕಬಳಿಸಲು ಕಳೆದ ಕೆಲವು ತಿಂಗಳಿಂದ ತಳೋಜಾದ ಮುಸ್ಲಿಮರು ಪ್ರಯತ್ನಿಸುತ್ತಿದ್ದಾರೆ. ಅಲ್ಲಿ ಗೋಮಾಂಸ ಹಾಕಿ ಕಿರುಕುಳ ನೀಡುತ್ತಿದ್ದಾರೆ. ಈ ತೊಂದರೆಯಿಂದ ಬೇಸತ್ತು ಅಲ್ಲಿನ ಎಲ್ಲಾ ಕೋಳಿ ಕುಟುಂಬಗಳು ಜಾಗ ಖಾಲಿ ಮಾಡಿದ್ದರೂ; ವೆಂಕಟೇಶ್ ಕೋಳಿ ಅವರ ಕುಟುಂಬ ಮಾತ್ರ ಅಲ್ಲೇ ವಾಸಿಸುತ್ತಿದೆ. ಇದೇ ಕಾರಣಕ್ಕೆ ತಳೋಜಾದ ಮುಸ್ಲಿಮರು ಯಾವುದಾದರೊಂದು ನೆಪ ಹೂಡಿ ಅವರೊಂದಿಗೆ ಜಗಳವಾಡುತ್ತಿದ್ದರು. ವೆಂಕಟೇಶ್ ಕೋಳಿ ಅವರನ್ನು ಕೊಲ್ಲುವುದಾಗಿ ಅವರ ತಾಯಿಗೆ ಈ ಹಿಂದೆ ಬೆದರಿಕೆ ಹಾಕಲಾಗಿತ್ತು. ಕಳೆದ ತಿಂಗಳು ಕೂಡ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿತ್ತು.
ಕಳೆದ ವರ್ಷವೂ ವೆಂಕಟೇಶ್ ಕೋಳಿ ವಿರುದ್ಧ ಮುಸಲ್ಮಾನರಿಂದ ವಿವಾದ ಸೃಷ್ಟಿಸಲಾಗಿತ್ತು!
ವೆಂಕಟೇಶ್ ಕೋಳಿ ಅವರ ತಾಯಿ ತಿಳಿಸಿರುವಂತೆ, ಕಳೆದ ರಾಮನವಮಿಯ ಸಂದರ್ಭದಲ್ಲಿಯೂ ಮುಸ್ಲಿಮರ ವಿರುದ್ಧ ಸಾಕ್ಷಿ ಹೇಳಿದ್ದಕ್ಕಾಗಿ ವೆಂಕಟೇಶ್ ಅವರ ಜೊತೆ ವಿವಾದ ಸೃಷ್ಟಿಸಲಾಗಿತ್ತು. ಈ ಕುರಿತು ದೂರು ನೀಡಲು ಪೊಲೀಸ್ ಠಾಣೆಗೆ ಹೋದಾಗ, ಪೊಲೀಸರು 2.5 ಲಕ್ಷ ರೂಪಾಯಿ ಲಂಚ ಕೇಳಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ತಾಯಿ ಈವರೆಗೆ ಮುಸ್ಲಿಮರ ವಿರುದ್ಧ ಸುಮಾರು 10 ದೂರುಗಳನ್ನು ನೀಡಿದ್ದರೂ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ. (ಪೊಲೀಸರು ಮೊದಲೇ ಕ್ರಮ ಕೈಗೊಂಡಿದ್ದರೆ ಇಂದು ಈ ಹಲ್ಲೆ ನಡೆಯುತ್ತಿರಲಿಲ್ಲ. ಭ್ರಷ್ಟ ಪೊಲೀಸರು ಹಿಂದೂಗಳ ಬಗ್ಗೆ ಗಂಭೀರವಾಗಿಲ್ಲ ಮತ್ತು ಮುಸಲ್ಮಾನರ ಪರವಾಗಿ ಇದ್ದಾರೆ, ಎಂಬುದು ಇದರಿಂದ ಸಾಬೀತಾಗುತ್ತದೆ ! ಆಪತ್ಕಾಲದಲ್ಲಿ ಇಂತಹ ಪೊಲೀಸರು ಹಿಂದುಗಳ ರಕ್ಷಣೆ ಎಂದಾದರು ಮಾಡುವರೆ ? – ಸಂಪಾದಕರು) |
View this post on Instagram
ಈ ಘಟನೆಯಲ್ಲಿ ವೆಂಕಟೇಶ್ ಕೋಳಿ ಅವರ ಟೆಂಪೋಗೆ ಬಾಡಿಗೆ ಇದೆ ಎಂದು ಮುಸಲ್ಮಾನರು ಹೇಳಿ ಅವರನ್ನು ತಳೋಜಾಕ್ಕೆ ಕರೆಯಿಸಿಕೊಳ್ಳಲಾಗಿತ್ತು. ಅವರು ಅಲ್ಲಿಗೆ ತಲುಪಿದ ಕೂಡಲೇ ಸುಮಾರು 25 ಮಂದಿ ಮುಸ್ಲಿಮರು ತಲವಾರ್, ಚಾಪರ್ ಮತ್ತು ದಂಡುಗಳಿಂದ ಅವರ ಮೇಲೆ ಮುಗಿಬಿದ್ದಿದ್ದಾರೆ ಎಂದು ಹಿಂದುತ್ವನಿಷ್ಠರು ತಿಳಿಸಿದ್ದಾರೆ. ಗೋರಕ್ಷಕರ ಮೇಲೆ ಹಲ್ಲೆ ಮಾಡುವವರು ಸುಲಭವಾಗಿ ತಪ್ಪಿಸಿಕೊಳ್ಳುವಂತೆ ಇಲ್ಲಿನ ಆರೋಪಿಗಳು ತಪ್ಪಿಸಿಕೊಳ್ಳಬಾರದು, ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯ ಹಿಂದೂತ್ವನಿಷ್ಠರು ಮಾಧ್ಯಮಗಳಿಗೆ ಹೇಳಿದ್ದಾರೆ. (ಪೊಲೀಸ ಇಲಾಖೆ ಇದನ್ನು ಗಮನಿಸದಿದ್ದರೆ, ಹಿಂದೂಗಳಿಗೆ ಯಾರೂ ರಕ್ಷಕರೇ ಇಲ್ಲ, ಎಂದು ಅವರಿಗೆ ಅನಿಸುವುದು !- ಸಂಪಾದಕರು)
ಸಂಪಾದಕೀಯ ನಿಲುವುಈ ಘಟನೆಯಿಂದ ಖಾರ್ಘರ್ ಭಾಗದಲ್ಲಿ ‘ಭೂಮಿ ಜಿಹಾದ್’ ಎಷ್ಟು ಗಂಭೀರವಾಗಿ ನಡೆಯುತ್ತಿದೆ ಎಂಬುದು ಬೆಳಕಿಗೆ ಬಂದಿದೆ! |

ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
Japan Illegal Mosque : ಜಪಾನ್ : ಪಾಕಿಸ್ತಾನ ನಿರ್ಮಿಸಿದ ಅಕ್ರಮ ಮಸೀದಿ ಧ್ವಂಸ !
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !