ಎಸ್ಟಿಯ ಮೃತಾವಸ್ಥೆಯಲ್ಲಿರುವ ‘ಹೆಲ್ಪ್ಲೈನ್’ಗೆ ಮರುಜೀವ ನೀಡಲು ಸುರಾಜ್ಯ ಅಭಿಯಾನದ ಆಗ್ರಹ!

ಮುಂಬಯಿ – ಹಿಂದೂ ಜನಜಾಗೃತಿ ಸಮಿತಿಯ ‘ಸುರಾಜ್ಯ ಅಭಿಯಾನ’ವು ಬಸ್ ನಿಲ್ದಾಣಗಳ ಸ್ವಚ್ಛತೆಗಾಗಿ ರಾಜ್ಯಾದ್ಯಂತ ನಡೆಸಿದ ನಿರಂತರ ಬೆಂಬೆತ್ತುವಿಕೆಗೆ ದೊಡ್ಡ ಯಶಸ್ಸು ಸಿಕ್ಕಿದೆ. ಈ ಅಭಿಯಾನವನ್ನು ಗಮನಿಸಿದ ರಾಜ್ಯ ಸರಕಾರವು ‘ಹಿಂದೂಹೃದಯಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಸ್ವಚ್ಛ ಸುಂದರ ಬಸ್ ನಿಲ್ದಾಣ’ ಅಭಿಯಾನವನ್ನು ಪ್ರಾರಂಭಿಸಿದೆ. ಅಲ್ಲದೆ ಬಸ್ ನಿಲ್ದಾಣದ ಸ್ವಚ್ಛತೆ ನಿಯಮಿತವಾಗಿ ನಡೆಯಲು ಡಿಪೋ ವ್ಯವಸ್ಥಾಪಕರಿಗೆ ಪ್ರತಿ 15 ದಿನಕ್ಕೊಮ್ಮೆ ನಿಲ್ದಾಣಗಳ ‘ಡಿಪ್ ಕ್ಲೀನಿಂಗ್’ (ಸಖೋಲ ಸ್ವಚ್ಛತೆ) ಮಾಡುವಂತೆ ಆದೇಶ ನೀಡಿದೆ. ಈ ನಿರ್ಧಾರವನ್ನು ನಾವು ಸ್ವಾಗತಿಸುತ್ತೇವೆ; ಆದರೆ ಬಸ್ ನಿಲ್ದಾಣದ ಆವರಣವು ಚಕಚಕನೆ ಹೊಳೆಯುತ್ತಿದ್ದರೂ, ಪ್ರಯಾಣಿಕರಿಗಾಗಿ ಇರುವ ಸಂಪರ್ಕ ವ್ಯವಸ್ಥೆಯು ಇಂದು ಕೂಡ ಮೃತಾವಸ್ಥೆಯಲ್ಲಿದೆ. ಆದ್ದರಿಂದ, ‘15 ದಿನಗಳಿಗೊಮ್ಮೆ ನಡೆಯುವ ಸ್ವಚ್ಛತಾ ಅಭಿಯಾನದಲ್ಲಿ ಕೇವಲ ನೆಲವನ್ನು ಒರೆಸುವುದಷ್ಟೇ ಅಲ್ಲದೆ, ರಾಜ್ಯಾದ್ಯಂತ ಸ್ಥಗಿತಗೊಂಡಿರುವ ಸಂಪರ್ಕ ವ್ಯವಸ್ಥೆಯನ್ನು (ಹೆಲ್ಪ್ಲೈನ್) ಆರಂಭಿಸಿ ಅದಕ್ಕೂ ಮರುಜೀವ ನೀಡಬೇಕು’, ಎಂದು ಸುರಾಜ್ಯ ಅಭಿಯಾನವು ಒತ್ತಾಯಿಸಿದೆ.
ಬಸ್ ನಿಲ್ದಾಣಗಳ ವಿಚಾರಣೆ ಕಿಟಕಿಯ ದೂರವಾಣಿ ಕರೆ ಸ್ವೀಕರಿಸುವ ವ್ಯವಸ್ಥೆ ಮಾಡಿ! – ಸುರಾಜ್ಯ ಅಭಿಯಾನ

ಸುರಾಜ್ಯ ಅಭಿಯಾನದ ಮಹಾರಾಷ್ಟ್ರ ರಾಜ್ಯ ಸಮನ್ವಯಕಾರರಾದ ಶ್ರೀ. ಅಭಿಷೇಕ್ ಮುರುಕುಟೆ ಅವರು ಒಂದು ಪ್ರಮುಖ ವಿಷಯದ ಕಡೆಗೆ ಗಮನ ಸೆಳೆದಿದ್ದಾರೆ. ಅವರು ಮಾತನಾಡುತ್ತಾ, “ಎಸ್ಟಿ ಆಡಳಿತವು ಸ್ವಚ್ಛತೆಯ ಬಗ್ಗೆ ಸಕಾರಾತ್ಮಕ ಹೆಜ್ಜೆ ಇಟ್ಟಿರುವುದು ಸ್ವಾಗತಾರ್ಹವಾಗಿದೆ, ಆದರೂ ‘ಸುರಾಜ್ಯ ಅಭಿಯಾನ’ವು ಒಂದು ಗಂಭೀರವಾದ ವ್ಯತ್ಯಾಸದ ಬಗ್ಗೆ ಆಡಳಿತದ ಗಮನ ಸೆಳೆದಿದೆ. ಅನೇಕ ಬಸ್ ನಿಲ್ದಾಣಗಳಲ್ಲಿ ವಿಚಾರಣೆ ಕಿಟಕಿಯ (Inquiry counter) ದೂರವಾಣಿ ಕರೆಗಳನ್ನು ಸ್ವೀಕರಿಸಲಾಗುತ್ತಿಲ್ಲ ಅಥವಾ ಅವು ಕಾರ್ಯನಿರ್ವಹಿಸುತ್ತಿಲ್ಲ. ಪ್ರಯಾಣಿಕರಿಗೆ ಬಸ್ಗಳ ಸಮಯ, ಬದಲಾವಣೆ ಅಥವಾ ದೂರುಗಳಿಗಾಗಿ ಸಂಪರ್ಕಿಸಲು ಯಾವುದೇ ಸ್ಪಂದನೆ ಸಿಗುತ್ತಿಲ್ಲ” ಎಂದರು.

ಅವರು ಮುಂದುವರಿಸುತ್ತಾ, ರಾಜ್ಯಾದ್ಯಂತ ಬರುತ್ತಿರುವ ದೂರುಗಳನ್ನು ಗಮನಿಸಿ ಅಭಿಯಾನವು ಪುಣೆ, ಸತಾರಾ, ಸಾಂಗ್ಲಿ, ಕೊಲ್ಲಾಪುರ, ಸೋಲಾಪುರ, ಸಿಂಧುದುರ್ಗ, ನಾಸಿಕ್, ಜಳಗಾಂವ್ ಮತ್ತು ಅಕೋಲಾ ಜಿಲ್ಲೆಗಳ 21 ಡಿಪೋ ವ್ಯವಸ್ಥಾಪಕರಿಗೆ ಈ ಬಗ್ಗೆ ಮನವಿ ಸಲ್ಲಿಸಿದೆ. ಅಭಿಯಾನವು ಕಳುಹಿಸಿದ ಇಮೇಲ್ ಅನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಸಚಿವಾಲಯ ಮತ್ತು ಎಸ್ಟಿ ಆಡಳಿತವು ರಾಜ್ಯದ 31 ವಿಭಾಗಗಳಿಗೆ ತಕ್ಷಣವೇ ಲೋಪದೋಷಗಳನ್ನು ಸರಿಪಡಿಸಲು ಸೂಚನೆ ನೀಡಿದೆ.
ಪ್ರಯಾಣಿಕರಿಗೆ ಎಸ್ಟಿಯನ್ನು ಸಂಪರ್ಕಿಸಲು ಸಾಧ್ಯವಾಗದಿದ್ದರೆ, ಆ ಸೌಂದರ್ಯೀಕರಣದ ಪ್ರಯೋಜನವೇನು?
ಮುರುಕುಟೆ ಅವರು ಮುಂದುವರಿಸುತ್ತಾ, “ಆಡಳಿತವು ನಮ್ಮ ಮನವಿಯನ್ನು ಪುರಸ್ಕರಿಸಿ ‘ಹಿಂದೂಹೃದಯಸಾಮ್ರಾಟ್ ಬಾಳಾಸಾಹೇಬ್ ಠಾಕ್ರೆ ಸ್ವಚ್ಛ, ಸುಂದರ ಬಸ್ ನಿಲ್ದಾಣ’ ಅಭಿಯಾನವನ್ನು ಆರಂಭಿಸಿದ್ದು ಸ್ವಾಗತಾರ್ಹ ಸಂಗತಿಯಾಗಿದೆ; ಆದರೆ ಸಕ್ರಿಯ ಹೆಲ್ಪ್ಲೈನ್ ಇಲ್ಲದೆ ಈ ಅಭಿಯಾನವು ಅಪೂರ್ಣವಾಗಿದೆ. ಪ್ರಯಾಣಿಕರಿಗೆ ಎಸ್ಟಿಯನ್ನು ಸಂಪರ್ಕಿಸಲು ಸಾಧ್ಯವಾಗದಿದ್ದರೆ, ಆ ಸೌಂದರ್ಯೀಕರಣದ ಪ್ರಯೋಜನವೇನು? ಆದ್ದರಿಂದ 15 ದಿನಗಳಿಗೊಮ್ಮೆ ನಡೆಯುವ ಸ್ವಚ್ಛತಾ ಅಭಿಯಾನದಲ್ಲಿ ‘ಸಂಪರ್ಕ ವ್ಯವಸ್ಥೆಯ ತಪಾಸಣೆ’ ಎನ್ನುವುದನ್ನೂ ಒಂದು ನಿಯಮವನ್ನಾಗಿ ಮಾಡಬೇಕು. ಸೇವಾ ಲೆಕ್ಕಪರಿಶೋಧನೆಯಲ್ಲಿ (Service Audit) ನಿರ್ಲಕ್ಷ್ಯ ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಸೇವಾ ಪುಸ್ತಕದಲ್ಲಿ ‘ನಕಾರಾತ್ಮಕ ದಾಖಲೆ’ (Negative Remark) ದಾಖಲಿಸಬೇಕು ಎಂಬುದು ನಮ್ಮ ಆಗ್ರಹವಾಗಿದೆ” ಎಂದರು.
ಗೋರೆಗಾಂವ್: ಸರಕಾರಿ ಭೂಮಿಯಲ್ಲಿದ್ದ ಅಕ್ರಮ ದರ್ಗಾ ನೆಲಸಮ !
TMC Cut Money : ಬಂಗಾಳ: ಲಂಚದ ಹಣವನ್ನು ಜನರಿಗೆ ಹಿಂತಿರುಗಿಸುತ್ತಿರುವ ತೃಣಮೂಲ ಕಾಂಗ್ರೆಸ್ ನಾಯಕರು!
ಇಂದಿನಿಂದ ಕರ್ಣಾವತಿ (ಗುಜರಾತ್)ಯಲ್ಲಿ ಮೊದಲ ವಿಶ್ವ ಯೋಗಾಸನ ಸ್ಪರ್ಧೆ !
‘ಕಳ್ಳಭಟ್ಟಿಗಳನ್ನು ಅಧಿಕೃತಗೊಳಿಸಿದರೆ ಸರಕಾರಕ್ಕೆ ಆದಾಯ ಸಿಗುತ್ತದೆ !’(ಅಂತೆ)
ಗೋಪಾಲಗಡ ಸರಕಾರದ್ದಾಗಿದ್ದು ಎಲ್ಲರಿಗೂ ಮುಕ್ತವಾಗಿದೆ : ವದಂತಿಗಳನ್ನು ನಂಬಿ ಕಾನೂನನ್ನು ಕೈಗೆತ್ತಿಕೊಳ್ಳಬೇಡಿ !
ಪಾಟಲಿಪುತ್ರ (ಬಿಹಾರ) ಇಲ್ಲಿ ಪ್ರಸಿದ್ಧ ಖಾನ್ ಸರ್ ಅವರ ತರಬೇತಿ ಕೇಂದ್ರದ ಮೇಲೆ ದಾಳಿ