ಹಿಂದೂ ದೇವಸ್ಥಾನದ ಭೂಮಿ ಮಾರಾಟದ ೩೦ ವರ್ಷಗಳ ಹಳೆಯ ವ್ಯವಹಾರವನ್ನು ರದ್ದುಗೊಳಿಸಿದ ಮದ್ರಾಸ ಉಚ್ಚ ನ್ಯಾಯಾಲಯ

ಚೆನ್ನೈ (ತಮಿಳುನಾಡು) – ಮದ್ರಾಸ ಉಚ್ಚ ನ್ಯಾಯಾಲಯವು ೧೫ ಡಿಸೆಂಬರ್ ೨೦೨೫ ರಂದು ಅರುಳಮಿಗು ಅಣ್ಣಾಮಲೈನಾಥರ ದೇವಸ್ಥಾನಕ್ಕೆ ಸೇರಿದ ೧೧೦ ಕೋಟಿ ರೂಪಾಯಿ ಮೌಲ್ಯದ ೩.೯೩ ಎಕರೆ ಭೂಮಿಯ ಮಾರಾಟದ ವ್ಯವಹಾರವನ್ನು ರದ್ದುಗೊಳಿಸಿದೆ. ಇದರಿಂದ ಸುಮಾರು ೩೦ ವರ್ಷಗಳಿಂದ ನಡೆಯುತ್ತಿದ್ದ ವಿವಾದಕ್ಕೆ ತೆರೆ ಬಿದ್ದಿದೆ. ೧೯೯೦ ರ ದಶಕದಲ್ಲಿ ನಡೆದ ಈ ಮಾರಾಟವು ಕಾನೂನುಬಾಹಿರವಾಗಿತ್ತು ಎಂದು ನ್ಯಾಯಾಲಯವು ನಮೂದಿಸಿದೆ. ಈ ಸಂಪೂರ್ಣ ಪ್ರಕ್ರಿಯೆಯಲ್ಲಿ ಗಂಭೀರ ಲೋಪದೋಷಗಳಿದ್ದವು ಮತ್ತು ಧಾರ್ಮಿಕ ಸಂಪತ್ತಿನ ಸಂರಕ್ಷಣೆಯ ಉದ್ದೇಶಕ್ಕೆ ಈ ವ್ಯವಹಾರವು ಸಂಪೂರ್ಣ ವಿರುದ್ಧವಾಗಿತ್ತು.
೧. ಈ ಪ್ರಕರಣದಲ್ಲಿ ಅನೇಕ ಪಕ್ಷಕಾರರಿದ್ದರು. ಅವರಲ್ಲಿ ಸುಮಾರು ೯೦ ಜನರು ಮುಸಲ್ಮಾನರಾಗಿದ್ದರು ಮತ್ತು ಕನಿಷ್ಠ ೨ ಮಸೀದಿಗಳೂ ಇದರಲ್ಲಿ ಸೇರಿದ್ದವು.
೨. ದೇವಸ್ಥಾನದ ಭೂಮಿಯನ್ನು ಖಾಸಗಿ ಆಸ್ತಿಯಂತೆ ಮಾರಾಟ ಮಾಡಲು ಸಾಧ್ಯವಿಲ್ಲ. ಅದನ್ನು ದೇವತೆ ಮತ್ತು ಭಕ್ತರ ಹಿತದೃಷ್ಟಿಯಿಂದ ಸುರಕ್ಷಿತವಾಗಿಡುವುದು ಅವಶ್ಯಕವಾಗಿದೆ. ಈ ಭೂಮಿಯನ್ನು ಪುನಃ ದೇವಸ್ಥಾನದ ವಶಕ್ಕೆ ನೀಡಬೇಕು ಎಂದು ಉಚ್ಚ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ವಿಶ್ವಸ್ತರು ಕೇವಲ ಸಂರಕ್ಷಕರು, ಮಾಲೀಕರಲ್ಲ!
ಹಿಂದೂ ಧಾರ್ಮಿಕ ಮತ್ತು ಧರ್ಮಾರ್ಥ ದತ್ತಿ ಇಲಾಖೆಯ ಅಧೀನದಲ್ಲಿ ಕೆಲಸ ಮಾಡುವ ವಿಶ್ವಸ್ತರು ಮತ್ತು ಅಧಿಕಾರಿಗಳು ದೇವಸ್ಥಾನದ ಸಂಪತ್ತಿನ ಮಾಲೀಕರಲ್ಲ, ಬದಲಾಗಿ ಕೇವಲ ಸಂರಕ್ಷಕರು ಮಾತ್ರ ಎಂದು ನ್ಯಾಯಾಲಯವು ಸ್ಪಷ್ಟಪಡಿಸಿದೆ. ಕಾನೂನಿನ ಸಂರಕ್ಷಣಾತ್ಮಕ ನಿಯಮಗಳನ್ನು ಉಲ್ಲಂಘಿಸಿ ಮಾಡಿದ ಯಾವುದೇ ವ್ಯವಹಾರವನ್ನು ನಂತರ ಸರಕಾರಿ ಆದೇಶಗಳ ಮೂಲಕ ಬೆಂಬಲಿಸಿದರೂ, ಅದು ಕಾನೂನುಬದ್ಧವಾಗಲು ಸಾಧ್ಯವಿಲ್ಲ. ಈ ಕಾನೂನಿನಲ್ಲಿರುವ ಕಡ್ಡಾಯ ನಿಯಮಗಳು ಕೇವಲ ಔಪಚಾರಿಕತೆಯಲ್ಲ, ಬದಲಾಗಿ ಧಾರ್ಮಿಕ ಸಂಪತ್ತಿನ ದುರುಪಯೋಗ ಮತ್ತು ಅತಿಕ್ರಮಣವನ್ನು ತಡೆಯಲು ಇರುವ ಭದ್ರ ಬುನಾದಿಯಾಗಿದೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ